ಬೆಂಗಳೂರು: ‘ದೃಶ್ಯ’, ‘ಆ ದೃಶ್ಯ’, ‘ರವಿ ಬೋಪಣ್ಣ’ ಮುಂತಾದ ಥ್ರಿಲ್ಲರ್ ಚಿತ್ರಗಳ ನಂತರ ರವಿಚಂದ್ರನ್, ಈಗ ಇನ್ನೊಂದು ಹೊಸ ಥ್ರಿಲ್ಲರ್ನಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಬಾರಿ ಅವರು ಲೀಗಲ್ ಥ್ರಿಲ್ಲರ್ನಲ್ಲಿ ನಟಿಸುತ್ತಿದ್ದಾರೆ ಎನ್ನುವುದು ವಿಶೇಷ.
ಇದನ್ನೂ ಓದಿ: ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಮಾತು ಕೊಟ್ಟಿದ್ದೇನೆ; ಉರಿಗೌಡ-ನಂಜೇಗೌಡ ಸಿನಿಮಾ ನಿರ್ಮಾಣ ಮಾಡಲ್ಲ ಎಂದ ಮುನಿರತ್ನ
ಈ ಹಿಂದೆ ರಮೇಶ್ ಅರವಿಂದ್ ನಿರ್ದೇಶನದ ‘ಆಕ್ಸಿಡೆಂಟ್’, ‘ಲಾಸ್ಟ್ ಬಸ್’, ‘ಅಮೃತ್ ಅಪಾರ್ಟ್ಮೆಂಟ್ಸ್’ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದ ಜಿ9 ಕಮ್ಯುನಿಕೇಶನ್ ಮೀಡಿಯ ಅಂಡ್ ಎಂಟರ್ಟೈಂಮೆಂಟ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ‘ಅಮೃತ್ ಅಪಾರ್ಟ್ಮೆಂಟ್ಸ್’ ನಿರ್ದೇಶಿಸಿದ್ದ ಗುರುರಾಜ ಕುಲಕರ್ಣಿ (ನಾಡಗೌಡ) ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆಯನ್ನೂ ರಚಿಸಿದ್ದಾರೆ.
‘ಕನ್ನಡ ಚಿತ್ರಗಳ ಬಗ್ಗೆ ಎಲ್ಲೆಡೆ ಬೇಡಿಕೆ ಹಾಗು ಆಸಕ್ತಿ ಇರುವ ಈ ಸಮಯದಲ್ಲಿ, ತಮ್ಮ ಈ ಹೊಸ ಚಿತ್ರವು ಚಿತ್ರರಂಗಕ್ಕೆ ಇನ್ನಷ್ಟು ಮೆರುಗನ್ನು ತರಲಿದೆ’ ಎಂಬ ವಿಶ್ವಾಸವನ್ನು ರವಿಚಂದ್ರನ್ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ‘ಜವಾನ್’ ಜತೆಗೆ ಸಂಜಯ್ ದತ್; ಶಾರುಖ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟನೆ
ಇದೊಂದು ದೊಡ್ಡ ಕ್ಯಾನ್ವಾಸ್ನ ಚಿತ್ರವಾಗಿದ್ದು, ಹಲವು ಜನಪ್ರಿಯ ತಂತ್ರಜ್ನರು ಕೆಲಸ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ, ಬಿ.ಎಸ್. ಕೆಂಪರಾಜು ಸಂಕಲನ, ಎಂ.ಎಸ್. ರಮೇಶ್ ಸಂಭಾಷಣೆ ಈ ಚಿತ್ರಕ್ಕಿದೆ. ಏಪ್ರಿಲ್ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಚಿತ್ರದ ಶೀರ್ಷಿಕೆ ಸದ್ಯದಲ್ಲೇ ಘೋಷಣೆಯಾಗಲಿದೆ.