ಬೆಂಗಳೂರು: ಫೆಬ್ರವರಿ 11 ಮತ್ತು 12ರಂದು ನಡೆಯಲಿರುವ ಕರ್ನಾಟಕ ಚಲನಚಿತ್ರ ಕಪ್ನ ಮೂರನೇ ಸೀಸನ್ನ ಅಂಬಾಸಿಡರ್ ಆಗಿ ರವಿಚಂದ್ರನ್ ಹಾಗೂ ರಮ್ಯಾ ಕಾರ್ಯನಿರ್ವಹಿಸಲಿದ್ದಾರೆ.
ಇದನ್ನೂ ಓದಿ: ಪ್ಯಾನ್ ಇಂಡಿಯಾ ಚಿತ್ರದಲ್ಲಿ ‘ಡಾಲಿ’ ಧನಂಜಯ್; ಹೆಸರು ರಿವೀಲ್ ಆಯ್ತು!
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಟೂರ್ನಿಯಲ್ಲಿ ಆಡುವ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಶಿವರಾಜಕುಮಾರ್, ಸುದೀಪ್, ಉಪೇಂದ್ರ, ಗಣೇಶ್, ಧ್ರುವ ಸರ್ಜಾ, ಶರಣ್, ಧನಂಜಯ ಸೇರಿದಂತೆ ಹಲವರರು ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಟೂರ್ನಿಯ ಕುರಿತು ಹಲವು ಮಹತ್ವದ ವಿಷಯಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಈ ಸಂದರ್ಭದಲ್ಲಿ ರವಿಚಂದ್ರನ್ ಮತ್ತು ರಮ್ಯಾ ಅವರು ಟೂರ್ನಿಯ ರಾಯಭಾರಿಗಳೆಂದು ಘೋಷಿಸಲಾಯಿತು. ಈ ಕುರಿತು ಮಾತನಾಡಿರುವ ರಮ್ಯಾ, ‘ನಾನು ಸ್ವಲ್ಪ ಕುಳ್ಳಿಯಾದರೂ, ಬ್ಯಾಸ್ಕೆಟ್ ಬಾಲ್ ಚೆನ್ನಾಗಿ ಆಡುತ್ತಿದ್ದೆ. ಅದನ್ನು ಹೊರತುಪಡಿಸಿದರೆ, ನಾನು ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಿರಲಿಲ್ಲ. ಕೆಲವು ವರ್ಷಗಳ ಹಿಂದೆ, ಆರ್ಸಿಬಿ ಅಂಬಾಸಿಡರ್ ಆಗಿದ್ದೆ. ನಿಮ್ಮ ಫೆವರೇಟ್ ಸ್ಟಾರ್ ಯಾರು ಅಂದ್ರೆ ಶೇನ್ ವಾರ್ನ್ ಅಂತ ಹೇಳಿದ್ದೆ’ ಎಂದು ನೆನಪಿಸಿಕೊಂಡರು.
ಈ ಬಾರಿ ಟೂರ್ನಿ ಬರೀ ಬೆಂಗಳುರಿಗೆ ಮಾತ್ರ ಸೀಮಿತವಾಗುವುದಿಲ್ಲವಂತೆ. ಮೈಸೂರಿನಲ್ಲೂ ಟೂರ್ನಿ ನಡೆಯಲಿದೆ. ಈ ಟೂರ್ನಿಗೆ ಅಂತಾರಾಷ್ಟ್ರೀಯ ಆಟಗಾರರನ್ನು ಕರೆಸುವ ಉದ್ದೇಶವಿದ್ದರೂ ಅದು ಕಷ್ಟ ಎನ್ನುವ ಅವರು, ‘ಅಂತಾರಾಷ್ಟ್ರೀಯ ಆಟಗಾರರನ್ನು ಕರೆತರೋದು ಬಹಳ ಕಷ್ಟ. ಅವರನ್ನು ಭೇಟಿ ಮಾಡುವುದೇ ಕಷ್ಟ. ದುಡ್ಡಿದ್ದರೆ ಎಲ್ಲವೂ ಆಗುವುದಿಲ್ಲ. ಅದರ ಹಿಂದೆ ಸಾಕಷ್ಟು ಶ್ರಮ ಬೇಕು’ ಎನ್ನುತ್ತಾರೆ ಸುದೀಪ್.
ಇದನ್ನೂ ಓದಿ: ಕೆ.ಎಲ್. ರಾಹುಲ್ಗೆ ಮಾವ ಸುನೀಲ್ ಶೆಟ್ಟಿ ಕೊಟ್ಟ ಗಿಫ್ಟ್ ಏನು ಗೊತ್ತಾ?
ಈ ಬಾರಿಯ ಟೂರ್ನಿಯಲ್ಲಿ ಸುದೀಪ್, ಶಿವರಾಜಕುಮಾರ್, ಉಪೇಂದ್ರ, ಗಣೇಶ್, ‘ಡಾಲಿ’ ಧನಂಜಯ್ ಮುಂತಾದವರು ಭಾಗವಹಿಸುತ್ತಿದ್ದಾರೆ. ‘ಕೆಸಿಸಿ ಸೀಸನ್ 3’ ಪಂದ್ಯಗಳನ್ನು ಫೆಬ್ರವರಿ 11 ಹಾಗೂ 12ರಂದು ಆಯೋಜಿಸಲಾಗಿದೆ.