More

    ಖಿನ್ನತೆಗೆ ಒಳಗಾದ ನಟಿ; ಮಾನಸಿಕವಾಗಿ ಸದೃಢವಾಗಲು ಹಳ್ಳಿಗೆ ಹೋಗಿದ್ದರಂತೆ!

    ನವದೆಹಲಿ: ಜನಪ್ರಿಯ ಕಾರ್ಯಕ್ರಮಗಳ ಮೂಲಕ ಹಿಂದಿ ಕಿರುತೆರೆಯ ಮೂಲಕ ಮನೆಮಾತಾಗಿದ್ದವರು ರತನ್ ರಾಜ್‌ಪುತ್. ಆದರೆ ಕಳೆದ 4 ವರ್ಷಗಳಿಂದ ಕಿರುತೆರೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ, ನಾನು ಖಿನ್ನತೆಯಿಂದ ಬಳಲುತ್ತಿದ್ದೇನೆ. ಹೀಗಾಗಿ ನಟನೆಯಿಂದ ವಿರಾಮ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

    ಇದೀಗ ಅವರು ಖಿನ್ನತೆಯಿಂದ ಹೊರಬರಲು ಅನುಸರಿಸಿರುವ ಮಾರ್ಗಗಳ ಬಗ್ಗೆ ಮಾತನಾಡಿದ್ದಾರೆ. ‘ನನ್ನ ತಂದೆಯ ಮರಣದ ನಂತರ ಖಿನ್ನತೆಗೆ ಒಳಗಾದೆ. ಇದರಿಂದ ಹೊರಬರಲು ನಾನು ಸುತ್ತಾಟವನ್ನು ಪ್ರಾರಂಭಿಸಿದೆ. ಜೊತೆಗೆ ಹಳ್ಳಿಯ ಜೀವನ ಕ್ರಮ ಅಳವಡಿಸಿಕೊಂಡೆ ಎಂದು ಹೇಳಿಕೊಂಡಿದ್ದಾರೆ.

    ಖಿನ್ನತೆಗೆ ಒಳಗಾಗುತ್ತಿದ್ದಂತೆ ಮನಃಶಾಸ್ತ್ರಜ್ಞರನ್ನು ಭೇಟಿ ಮಾಡಿ ಸಲಹೆ ಪಡೆದುಕೊಂಡೆ. ಅವರ ಸಲಹೆಯ ಮೇರೆಗೆ ಉತ್ತಮ ನಟಿಯಾಗಲು ಮನೋವಿಜ್ಞಾನವನ್ನು ಅಧ್ಯಯನ ಮಾಡಲು ನಿರ್ಧರಿಸಿದೆ. ಮುಖ್ಯವಾಗಿ ನನಗೆ ಖಿನ್ನತೆಯಿಂದ ಹೊರಬರಲು ಔಷಧಿಗಳನ್ನು ತೆಗೆದುಕೊಳ್ಳಲು ಇಷ್ಟವಿರಲಿಲ್ಲ. ಹೀಗಾಗಿ ಮನೋವಿಜ್ಞಾನದ ಅಧ್ಯಯನಕ್ಕೆ ಹೆಚ್ಚಿನ ಮಹತ್ವ ನೀಡಿದೆ.

    ಪ್ರಯಾಣ ಮಾಡುತ್ತಾ ಹಳ್ಳಿಯ ಜೀವನಕ್ಕೆ ಒಗ್ಗಿಕೊಂಡೆ. ಈ ಪ್ರಯಾಣ ಸ್ವತಃ ನನ್ನನ್ನು ವಿಮರ್ಷಿಸಲು ಅವಕಾಶ ಮಾಡಿಕೊಟ್ಟಿತು. ಪ್ರಯಾಣದಿಂದ ನನ್ನಂತೆ ನಿಮಗೂ ಹೊಸತನ್ನು ಕಲಿಯಲು ಸಾಧ್ಯವಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವುದರಿಂದ ನನಗೆ ಜೀವನದ ಬಗ್ಗೆ ಹೊಸ ದೃಷ್ಟಿಕೋನವನ್ನು ಅರಿತುಕೊಳ್ಳಲು ಸಾಧ್ಯವಾಗಿದೆ ಎಂದು ಖಾಸಗಿ ಸಂದರ್ಶನದಲ್ಲಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts