More

    ಶರ್ವಾನಂದ್​ ಚಿತ್ರಕ್ಕೆ ಸಾಯಿಪಲ್ಲವಿ ಬದಲು ರಶ್ಮಿಕಾ ಆಯ್ಕೆ!

    ಹೈದರಾಬಾದ್​: ತೆಲುಗಿನಲ್ಲಿ ಮೊದಲೇ ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಬಿಜಿಯಾಗಿದ್ದ ರಶ್ಮಿಕಾ, ಲಾಕ್​ಡೌನ್​ ನಂತರ ಇನ್ನಷ್ಟು ಬಿಜಿಯಾಗಿರುವ ಹಾಗೆ ಕಾಣುತ್ತಿದೆ. ಈಗಾಗಲೇ ಮೂರು ತೆಲುಗು ಚಿತ್ರಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಇತ್ತೀಚೆಗೆ ಕೇಳಿಬಂದಿತ್ತು. ಈಗ ಆ ಸಂಖ್ಯೆ ನಾಲ್ಕಾಗಿದೆ.

    ಇದನ್ನೂ ಓದಿ: ಜೈಲಿನಲ್ಲೇ ದಸರಾ ಆಚರಿಸಬೇಕಷ್ಟೆ ರಾಗಿಣಿ, ಸಂಜನಾ!

    ಈಗಾಗಲೇ ಮಹೇಶ್​ ಬಾಬು, ಅಲ್ಲು ಅರ್ಜುನ್​ರಂತಹ ಸ್ಟಾರ್​ಗಳ ಜತೆಗೆ ನಟಿಸಿರುವ ರಶ್ಮಿಕಾ, ಇದೀಗ ‘ಆಚಾರ್ಯ’ ಚಿತ್ರದಲ್ಲಿ ರಾಮ್​ಚರಣ್​ ತೇಜ ನಾಯಕಿಯಾಗಿ ನಟಿಸುತ್ತಿರುವ ಸುದ್ದಿ ಇದೆ. ಅದರ ಜತೆಗೆ ನಾಗಾರ್ಜುನ ಅವರ ಎರಡನೆಯ ಮಗ ಅಖಿಲ್​ ಅಭಿನಯದ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದಲ್ಲದೆ, ರಶ್ಮಿಕಾ ಹೆಸರು ಇನ್ನೊಂದು ಹೊಸ ಚಿತ್ರದಲ್ಲಿ ಕೇಳಿಬರುತ್ತಿದೆ. ಈ ಬಾರಿ ಅವರು ನಾನಿ ಅಭಿನಯದ ‘ಶ್ಯಾಮ್​ ಸಿಂಗ್​ ರಾವ್​’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂಬ ವಿಷಯವೊಂದು ಹೆಚ್ಚುಹೆಚ್ಚು ಕೇಳಿ ಬರುತ್ತಿದೆ.

    ಇದೆಲ್ಲದರ ಜತೆಗೆ ಶರ್ವಾನಂದ್​ ಅಭಿನಯದ ‘ಆಡಾಳ್ಳು ಮೀಕು ಜೊಹ್ರಾಲು’ ಚಿತ್ರದಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮುನ್ನ ಈ ಚಿತ್ರದಲ್ಲಿ ಸಾಯಿಪಲ್ಲವಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಇತ್ತು. ಇದೀಗ ಚಿತ್ರ ಪ್ರಾರಂಭವಾಗುವುದಕ್ಕೆ ಇನ್ನೊಂದು ದಿನ ಇದೆ ಎನ್ನಬೇಕಾದರೆ, ರಶ್ಮಿಕಾ ನಾಯಕಿ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಇಟಲಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಭಾಸ್​

    ಈ ವಿಷಯವಾಗಿ ರಶ್ಮಿಕಾ ಯಾವುದೇ ಹೇಳಿಕೆಯನ್ನೂ ಕೊಟ್ಟಿಲ್ಲ. ಹಾಗಾಗಿ ಈ ಚಿತ್ರದಲ್ಲಿ ರಶ್ಮಿಕಾ ನಿಜಕ್ಕೂ ನಾಯಕಿಯಾಗಿ ನಟಿಸುತ್ತಾರಾ, ಇಲ್ಲವಾ ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲ ಇದ್ದೇ ಇದೆ.

    ದುರ್ಗಾಷ್ಟಮಿಗೆ ಇದನ್ನ ಬಹಳ ಮಿಸ್​ ಮಾಡಿಕೊಳ್ತಿದ್ದಾರಂತೆ ಅನೂಷ್ಕಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts