More

    ಓಡೋಡಿ ಬಂದು ಡಾಲಿಯನ್ನು ತಬ್ಬಿಕೊಂಡ ನಟಿ ರಶ್ಮಿಕಾ ಮಂದಣ್ಣ!

    ಬೆಂಗಳೂರು: ಸದ್ಯ, ಎಲ್ಲೆಡೆ ಪ್ಯಾನ್ ಇಂಡಿಯನ್ ಸಿನಿಮಾಗಳದ್ದೆ ಹವಾ ಮತ್ತು ಕಾರುಬಾರು. ಇನ್ನು, ಈ ಸಿನಿಮಾಗಳ ಪ್ರಮೋಷನ್ ಗೆಂದು ಚಿತ್ರದ ದೊಡ್ಡ ದೊಡ್ಡ ಸ್ಟಾರ್ ನಟರು ಭಾರತದಾದ್ಯಂತ ಪ್ರಮುಖ ಮಹಾನಗರಗಳಲ್ಲಿ ಪತ್ರಿಕಾಗೋಷ್ಠಿಯನ್ನು ಮಾಡುತ್ತಿರುವುದು ಕೂಡ ಸಹಜವಾಗಿದೆ. ಇಂತಹದ್ದೆ ಒಂದು ಪತ್ರಿಕಾಗೋಷ್ಠಿಯನ್ನು ಇಂದು ಬೆಂಗಳೂರಿನಲ್ಲಿ ಪುಷ್ಪಚಿತ್ರತಂಡ ನಡೆಸಿತು. ಇದಕ್ಕಾಗಿ, ಈ ಸಿನಿಮಾದ ನಟರಾದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಇತರರು ಬೆಂಗಳೂರಿಗೆ ಬಂದಿಳಿದರು. ಆದರೆ, ಈ ಸಮಯದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ಒಂದು ನಡೆ ಎಲ್ಲರ ಗಮನ ಸೆಳೆದಿದೆ.
    ಬೆಂಗಳೂರಿಗೆ ಪುಷ್ಪಚಿತ್ರತಂಡದ ಸಮೇತ ಬಂದ ನಟಿ ರಶ್ಮಿಕಾ ಮಂದಣ್ಣ, ಸಿನಿಮಾದ ಪತ್ರಿಕಾಗೋಷ್ಠಿ ನಡೆಯುವ ಸ್ಥಳದಲ್ಲಿ ನಟ ಡಾಲಿ ಧನಂಜಯ್ ಅವರನ್ನು ನೋಡಿದ ಕೂಡಲೆ ಓಡೋಡಿ ಹೋಗಿ ತಬ್ಬಿಕೊಂಡಿದ್ದಾರೆ. ನಟ ಡಾಲಿ ಧನಂಜಯ್ ಅವರನ್ನು ರಶ್ಮಿಕಾ ತಬ್ಬಿಕೊಂಡ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ ಡಾಲಿ ಅವರು ಜಾಲಿ ರೆಡ್ಡಿ ಪಾತ್ರದಲ್ಲಿ ಆಕ್ಷನ್ ಡ್ರಾಮಾ ಆದ ಪುಷ್ಪ: ದಿ ರೈಸ್ನಲ್ಲಿ ಪ್ರಮುಖ ನಟರ ಹೊರತಾಗಿ ಅನಸೂಯಾ ಭಾರದ್ವಾಜ್, ವೆನ್ನೆಲಾ ಕಿಶೋರ್, ಹರೀಶ್ ಉತ್ತಮನ್, ಸುನಿಲ್, ರಾವ್ ರಮೇಶ್, ಡಾಲಿ ಧನಂಜಯ್ ಮತ್ತು ಅಜಯ್ ಘೋಷ್ ಸಹ ಕೆಲವು ಪಾತ್ರಗಳಲ್ಲಿ ಮಿಂಚಲಿದ್ದಾರೆ. ಸಿನಿಮಾಗೆ ಸುಕುಮಾರ್ ನಿರ್ದೇಶಕರಾಗಿದ್ದು, ಡಿವಿವಿ ದಾನಯ್ಯ ಅವರು ನಿರ್ಮಾಪಕರಾಗಿದ್ದಾರೆ.

    ಓಡೋಡಿ ಬಂದು ಡಾಲಿಯನ್ನು ತಬ್ಬಿಕೊಂಡ ನಟಿ ರಶ್ಮಿಕಾ ಮಂದಣ್ಣ!

    ‘ಪುಷ್ಪ’ ಚಿತ್ರ 2 ಭಾಗಗಳಲ್ಲಿ ಮೂಡಿಬರಲಿದ್ದು, ಮೊದಲ ಭಾಗ ಪುಷ್ಪ: ದಿ ರೈಸ್”​ ಡಿ. 17ರಂದು ತೆರೆಗೆ ಅಪ್ಪಳಿಸಲಿದೆ. ಚಿತ್ರತಂಡ ಸಿನಿಮಾ ಬಿಡುಗಡೆಯ ಕೊನೆಯ ಹಂತದವರೆಗೂ ಪ್ರಚಾರದಲ್ಲಿ ತೊಡಗಿಕೊಂಡಿದೆ. ಸಿನಿಮಾಗೆಂದು ನ್ಯಾಷನಲ್ ಕ್ರಶ್ ರಶ್ಮಿಕಾ ಕೂಡ ಸಾಲು ಸಾಲು ಸಂದರ್ಶನಗಳನ್ನು ಎದುರಿಸುತ್ತಿದ್ದಾರೆ. ‘ಪುಷ್ಪ’ ಚಿತ್ರ ತೆಲುಗು ಸೇರಿದಂತೆ ಒಟ್ಟು ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಗಿಲಿದೆ. ಇನ್ನು, ಈ ಸಿನಿಮಾದ ಐಟಂ ಹಾಡಿನಲ್ಲಿ ನಟಿ ಸಮಂತಾ ಹೆಜ್ಜೆ ಹಾಕಿದ್ದು, ಆ ಹಾಡಿನ ಸಾಹಿತ್ಯ ಮತ್ತು ದೃಶ್ಯಗಳ ವಿರುದ್ಧ ಆಂಧ್ರ ಪ್ರದೇಶದ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಅದೇನೆ ಇರಲಿ, ಪುಷ್ಪಸಿನಿಮಾ ನೋಡಲು ಸದ್ಯ ಇಡೀ ಭಾರತ ದೇಶದ ಸಿನಿ ಪ್ರೇಕ್ಷಕರು ಕಾದು ಕೂತಿದ್ದಾರೆ.

    ಮೆಗಾ ಕುಟುಂಬದ ಹೈದರಾಬಾದಿ ಬಿರಿಯಾನಿಗೆ ಅಬ್ಬಬ್ಬಾ ಎಂದ ಬಾಲಿವುಡ್ ನಟ ಯಾರು?

    ಅಪ್ಪು ಸ್ಥಾನವನ್ನು ತುಂಬಲಿದ್ದಾರೆ ಯುವ ರಾಜ್​ಕುಮಾರ್!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts