ಮುಂಬೈ: ಬಾಲಿವುಡ್ನಲ್ಲಿ ಡ್ರಗ್ ಮಾಫಿಯಾ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಸ್ಟಾರ್ ಕಲಾವಿದರಿಗೆ ಎನ್ಸಿಬಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕಳುಹಿಸುತ್ತಿದ್ದು, ದೀಪಿಕಾಗೂ ಎನ್ಸಿಬಿ ಸಮನ್ಸ್ ನೀಡಿದೆ. ಇನ್ನೇನು ಕೆಲ ಘಂಟೆಗಳಲ್ಲಿ ದೀಪಿಕಾ ವಿಚಾರಣೆಗೆ ಹಾಜರಾಗಲಿದ್ದಾರೆ. ಈ ನಡುವೆ, ದೀಪಿಕಾ ಪತಿ ರಣವೀರ್ ಸಿಂಗ್ ವಿಚಾರಣೆ ವೇಳೆ ಆಕೆ ಜತೆಗಿರಬಹುದೇ ಎಂದು ಎನ್ಸಿಬಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೇಗ ಚೇತರಿಸಿಕೊಳ್ಳಿ ಸರ್, ಇಂತಿ ನಿಮ್ಮ ದಿಲ್ ದಿವಾನಾ ಹೀರೋ ಪ್ರೇಮ್…
ಗೋವಾದಿಂದ ಗುರುವಾರವೇ ಶೂಟಿಂಗ್ ಸ್ಥಗಿತಗೊಳಿಸಿ ಮುಂಬೈಗೆ ಬಂದಿಳಿದಿರುವ ದೀಪಿಕಾ, ಶನಿವಾರ ಎನ್ಸಿಬಿ ಎದುರಿಗೆ ವಿಚಾರಣೆಗೆ ಹಾಜರಾಗಬೇಕಿದೆ. ಆ ಸಂದರ್ಭದಲ್ಲಿ ತಾವೂ ದೀಪಿಕಾ ಜತೆಗಿರುವ ಬಗ್ಗೆ ರಣವೀರ್ ಎನ್ಸಿಬಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಅರ್ಜಿಯೊಂದನ್ನು ಸಲ್ಲಿಸಿರುವ ರಣವೀರ್, ದೀಪಿಕಾ ಒಮ್ಮಿಂದೊಮ್ಮೆ ಆತಂಕಕ್ಕೊಳಗಾಗುತ್ತಾಳೆ. ಈ ವಿಚಾರಣೆಗಳು ಆಕೆಗೆ ಘಾಸಿಗೊಳಿಸಬಹುದು. ಹಾಗಂತ ವಿಚಾರಣೆ ವೇಳೆ ನಾನು ಆಕೆ ಜತೆ ಇರುವುದಿಲ್ಲ. ಬದಲಿಗೆ ಆಫೀಸ್ನಲ್ಲಿ ಇರಲು ದಯಮಾಡಿ ಅವಕಾಶ ಮಾಡಿಕೊಡಿ ಎಂದಿದ್ದಾರೆ.
ಇದನ್ನೂ ಓದಿ: ಜಾನಕಿಯ ಕೈಹಿಡಿದ ಹೀರೋ; ಮೊದಲ ಆಕರ್ಷಣೆಯತ್ತ ಗಾನವಿ
ದೀಪಿಕಾ ಜತೆಗೆ ಸಾರಾ ಆಲಿಖಾನ್, ರಾಕುಲ್ ಪ್ರೀತ್ ಸಿಂಗ್, ಶ್ರದ್ಧಾ ಕಪೂರ್ಗೂ ಎನ್ಸಿಬಿ ಸಮನ್ಸ್ ನೀಡಿದ್ದು, ಎಲ್ಲರೂ ಶನಿವಾರ ವಿಚಾರಣೆಗೆ ಹಾಜರಾಗಲಿದ್ದಾರೆ. ಇತ್ತ ಈಗಾಗಲೇ ದೀಪಿಕಾ ಮ್ಯಾನೇಜರ್ ಕರೀಷ್ಮಾ ಪ್ರಕಾಶ್ ಅವರ ವಿಚಾರಣೆ ನಡೆಯುತ್ತಿದೆ. (ಏಜೆನ್ಸೀಸ್)
‘ನಾವು ಡ್ರಗ್ಸ್ ಪಾರ್ಟಿ ಮಾಡ್ತಾ ಇದ್ವಿ, ಅದರಲ್ಲಿ ಅನುಶ್ರೀ ಕಿಕ್ಕೇರಿಸಿಕೊಳ್ತಿದ್ಲು…’