ಅಯೋಧ್ಯೆ: ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಅಯೋಧ್ಯೆ ಶ್ರೀರಾಮಲಲ್ಲಾ ದೇವರ ದರ್ಶನಕ್ಕೆ ಸೋಮವಾರ ಭಕ್ತಸಾಗರಹರಿದುಬಂದಿತ್ತು. ಹೋಳಿ ದಿನವಾದ್ದರಿಂದ ಭಕ್ತರು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು.
ಇದನ್ನೂ ಓದಿ: ಇಸ್ರೇಲ್ನಲ್ಲಿ ಹೋಳಿ, ಪುರಿಮ್ ಸಂಭ್ರಮ: ಟೆಲ್ ಅವಿವ್ನಲ್ಲಿ ಹಿಂದು- ಯಹೂದಿಗಳು ಒಟ್ಟಿಗೆ ಸೇರಿ ಆಚರಣೆ..!
ಮಧ್ಯಾಹ್ನವಾದರೂ ಭಕ್ತರ ದಟ್ಟಣೆ ಕಡಿಮೆಯಾಗಲಿಲ್ಲ. ಹೋಳಿ ಹಬ್ಬದ ನಿಮಿತ್ತ ದೇವಾಲಯಕ್ಕೆ ವಿದ್ಯುತ್ ದೀಪಾಲಂಕಾರ, ಪುಷ್ಪಾಲಂಕಾರವನ್ನು ಹೆಚ್ಚಿಸಿದ್ದು, ಜಗಮಗಿಸುವಂತಿತ್ತು. ಹೋಳಿ ಆಚರಣೆಯ ಅಂಗವಾಗಿ ಭಕ್ತರು ಭಾನುವಾರ ದೇವರಿಗೆ ಗುಲಾಲ್ ಹಚ್ಚಿದ್ದರು.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ವಾಮಿಯ ಅಲಂಕಾರ ಮತ್ತು ಭಕ್ತರ ಫೋಟೋಗಳನ್ನು ಪೋಸ್ಟ್ ಮಾಡಿದೆ. ಭಕ್ತರು ಭಕ್ತಿಗೀತೆಗಳನ್ನು ಹಾಡುವ ಮೂಲಕ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮ್ ಲಲ್ಲಾ ದೇವರ ಪ್ರಾಣಪ್ರತಿಷ್ಠೆ ಬಳಿಕ ಮೊದಲ ಬಾರಿಗೆ ಹೋಳಿ ಆಚರಣೆ ನಡೆಯುತ್ತಿದೆ. ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿ ವಿಶೇಷ ಪೂಜೆ ಸಲ್ಲಿಸಿದರು.
ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿಯವರ ಕೈಯಿಂದ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆದಿದ್ದು ಗೊತ್ತೇ ಇದೆ.
ಇದು ಮೊದಲ ಬಣ್ಣದ ಹಬ್ಬವಾಗಿರುವುದರಿಂದ ಇಡೀ ಅಯೋಧ್ಯೆ ರಂಗೇರಿದೆ. ಈ ಹಬ್ಬವನ್ನು ದೇಶದಲ್ಲಿ ಪ್ರತಿ ವರ್ಷ ಮಾರ್ಚ್ 25 ರಂದು ಆಚರಿಸಲಾಗುತ್ತದೆ. ಹಬ್ಬದ ಮೊದಲು ಹೋಲಿಕಾ ದಹನ್ ಎಂಬ ದೀಪೋತ್ಸವ ಆಚರಣೆಯನ್ನು ನಡೆಸಲಾಗುತ್ತದೆ.
ಇದು ಹೋಲಿಕಾ ಎಂಬ ರಾಕ್ಷಸನನ್ನು ಸುಡುತ್ತದೆ ಎಂದು ಭಕ್ತರು ನಂಬುತ್ತಾರೆ. ಬಳಿಕ ಸಂಭ್ರಮದ ನಡುವೆ ಸಿಹಿ ಹಂಚಲಾಯಿತು. ಹೋಳಿ ಹಬ್ಬವು ಜನರಲ್ಲಿ ಸೌಹಾರ್ದತೆ ಮತ್ತು ಏಕತೆಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತಿತರರು ದೇಶದ ಜನತೆಗೆ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ.