More

    5 ತಿಂಗಳ, 3 ವರ್ಷದ ಮಕ್ಕಳನ್ನು ಕೊಂದು ತಾನೂ ನೀರಿಗೆ ಹಾರಿದ ತಾಯಿ

    ರಾಣೆಬೆನ್ನೂರ: ಪ್ರೀತಿಸಿ ಮದುವೆ ಮಾಡಿಕೊಂಡ ಯುವತಿಯೊಬ್ಬಳು ತನ್ನ 5 ತಿಂಗಳ ಹಸಿಕೂಸು ಹಾಗೂ 3 ವರ್ಷದ ಮಗಳನ್ನು ತುಂಗಭದ್ರಾ ನದಿ ನೀರಿನಲ್ಲಿ ಮುಳಗಿಸಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮನಕುಲಕುವ ಘಟನೆ ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ ನಡೆದಿದೆ.
    ಗ್ರಾಮದ ನಗ್ಮಾ ಅರುಣ ದುಗ್ಗತ್ತಿಗೌಡ್ರ (24) ಆತ್ಮಹತ್ಯೆ ಮಾಡಿಕೊಂಡವಳು. ತಾನು ನೀರಿಗೆ ಹಾರುವ ಮುನ್ನ 5 ತಿಂಗಳ ಹಸಿಗೂಸಾದ ಪಾವಣಿ ಹಾಗೂ ಮನ್ವಿತಾ (3 ವರ್ಷ) ಎಂಬುವರನ್ನು ನೀರಿನಲ್ಲಿ ಮುಳಗಿಸಿ ಕೊಂದಿದ್ದಾಳೆ ಎನ್ನಲಾಗಿದೆ.
    ತಾಯಿ ನಗ್ಮಾ ಮನೆಯಿಂದ ಮಕ್ಕಳನ್ನು ಕರೆದುಕೊಂಡು ಹೋಗಿ ತುಂಗಭದ್ರಾ ನದಿಯಲ್ಲಿ ಮುಳಗಿಸಿ ಕೊಲೆ ಮಾಡಿದ್ದಾಳೆ. ನಂತರ ತಾನೂ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದ್ದು, ಈ ಕುರಿತು ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಪ್ರೀತಿಸಿ ಮದುವೆಯಾಗಿದ್ದ ನಗ್ಮಾ…
    ಮುಸ್ಲಿಂ ಸಮಾಜದ ನಗ್ಮಾ ಮೈಸೂರಿನ ನಿವಾಸಿ. ಕಳೆದ 5 ವರ್ಷದ ಹಿಂದೆ ತಾಲೂಕಿನ ಕುಮಾರಪಟ್ಟಣದಲ್ಲಿ ಇದ್ಲಿ ಭಟ್ಟಿಯಲ್ಲಿ ಕೆಲಸ ಮಾಡಿಕೊಂಡ ಅರುಣನನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದಳು. ಇವರ ಸುಂದರ ದಾಂಪತ್ಯ ಜೀವನಕ್ಕೆ ಎರಡೂ ಮಕ್ಕಳು ಸಹ ಸಾಕ್ಷಿಯಾಗಿದ್ದವು. ಆದರೆ, ಕಳೆದ 6 ತಿಂಗಳ ಹಿಂದಿನಿಂದ ನಗ್ಮಾ ನನಗೆ ದೆವ್ವ ಹಿಡಿದುಕೊಂಡಿದೆ ಎಂದು ಹೇಳುತ್ತ ಮಾನಸಿಕಗೊಂಡು ಎರಡು ಬಾರಿ ಮನೆಯಿಂದ ಹೊರಗೆ ಹೋಗಿ ಬಂದಿದ್ದಳು.
    ಆದ್ದರಿಂದ ಆಕೆಯನ್ನು ದೇವಸ್ಥಾನ, ದರ್ಗಾಗಳಿಗೆ ಕರೆದುಕೊಂಡು ಹೋಗಿ ತೋರಿಸಲಾಗಿತ್ತು. ಆದರೆ, ಆಕೆಯ ಆರೋಗ್ಯದಲ್ಲಿ ಗುಣವಾಗಿರಲಿಲ್ಲ. ಅಲ್ಲದೆ ಎರಡನೇ ಮಗುವಿನ ಜನನದ ಬಳಿಕ ತವರು ಮನೆಗೆ ಹೋಗಿದ್ದ ನಗ್ಮಾಳನ್ನು ತವರು ಮನೆಯವರು 15 ದಿನದಲ್ಲಿ ವಾಪಸ್ ಪತಿಯ ಮನೆಗೆ ಹೋಗುವಂತೆ ಒತ್ತಾಯಿಸಿ ಕಳುಹಿಸಿದ್ದರಂತೆ. ಇದರಿಂದ ನಗ್ಮಾ ಮತ್ತಷ್ಟು ಮನಸ್ಸಿಗೆ ನೋವು ಮಾಡಿಕೊಂಡಿದ್ದಳು.
    ಹೀಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡ ನಗ್ಮಾ ತನ್ನ ಮಕ್ಕಳು ಬಿಟ್ಟು ಸತ್ತರೆ ಅವರ ಗತಿಯೇನು ಎಂದು ಯೋಚಿಸಿ ಮಕ್ಕಳ ಸಮೇತ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಪೊಲೀಸ್ ಮೂಲದಿಂದ ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts