More

    ಬಸವೇಶ್ವರ ಬ್ಯಾಂಕ್‌ಗೆ 13 ಜನ ನಿರ್ದೇಶಕರ ಅವಿರೋಧ ಆಯ್ಕೆ

    ರಾಣೆಬೆನ್ನೂರ: ನಗರದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ಎಲ್ಲ 13 ನಿರ್ದೇಶಕರ ಸ್ಥಾನಗಳಿಗೆ ಭಾರತೀಯ ಜನತಾ ಪಕ್ಷದ ಬೆಂಬಲಿತರು ಅವಿರೋಧ ಆಯ್ಕೆಯಾಗುವ ಮೂಲಕ ಶತಮಾನ ಕಂಡ ಬ್ಯಾಂಕ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.
    ನಗರದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಮಂಗಳವಾರ ಬ್ಯಾಂಕ್‌ಗೆ ನೂತನವಾಗಿ ಆಯ್ಕೆಯಾದ ಸದಸ್ಯರನ್ನು ಪಕ್ಷದ ವತಿಯಿಂದ ಸನ್ಮಾನ ಮಾಡಿ ಅವರು ಮಾತನಾಡಿದರು.
    ಕಳೆದ ವರ್ಷ ನೂರನೇ ವರ್ಷಕ್ಕೆ ಪಾದರ್ಪಣೆ ಮಾಡಿರುವ ಬ್ಯಾಂಕ್ ಹಣಕಾಸಿನ ವ್ಯವಹಾರದಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡಿದೆ. ಪಕ್ಷದ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗಲು ಬ್ಯಾಂಕಿನ ಮತದಾರರು ಸಹಕರಿಸಿದ್ದಾರೆ. ಮುಂಬರುವ ದಿನಗಳಲ್ಲಿ ಬ್ಯಾಂಕ್ ಮತ್ತಷ್ಟು ಪ್ರಗತಿ ಹೊಂದಲಿ ಎಂದರು.
    ನೂತನವಾಗಿ ಆಯ್ಕೆಯಾದ ಈಶ್ವರಪ್ಪ ಹಾವನೂರ, ಪರಮೇಶಪ್ಪ ಯಡಿಯಾಪುರ, ವಿಷ್ಣು ಜಿಂಗಾಡೆ, ಲತಾ ಬೇತೂರ, ಶೋಭಾ ದೇವಗಿರಿಮಠ, ಮಂಜುನಾಥ ಓಲೇಕಾರ, ಚನ್ನವೀರಪ್ಪ ಅಸುಂಡಿ, ಪರಮೇಶ್ವರಪ್ಪ ಗೌಳಿ, ರಾಜೇಂದ್ರಕುಮಾರ ತಿಳವಳ್ಳಿ, ವೀರೇಶ ಜಂಬಗಿ, ಶಿವಕುಮಾರ ನರಸಗೊಂಡರ, ಶಿವಪ್ಪ ರೊಡ್ಡನವರ, ಶಂಭುಲಿಂಗಪ್ಪ ಕಟಗಿಹಳ್ಳಿ ಅವರನ್ನು ಸನ್ಮಾನಿಸಲಾಯಿತು.
    ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಪ್ರಮುಖರಾದ ಭಾರತಿ ಜಂಬಗಿ, ದೀಪಕ ಹರಪನಹಳ್ಳಿ, ಎಸ್.ಎಸ್. ರಾಮಲಿಂಗಣ್ಣನವರ, ರಮೇಶ ಗುತ್ತಲ, ಡಾ. ಗಣೇಶ ದೇವಗಿರಿಮಠ, ಸಿದ್ದು ಚಿಕ್ಕಬಿದರಿ, ಅನಿಲ ಸಿದ್ದಾಳಿ, ಸುಧೀರ ನಾಯ್ಕ, ಶಿವಕುಮಾರ ಹಾರ್ಕನಾಳ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts