ಕವಿತಾಳ: ರಂಜಾನ್ ಆಚರಣೆ ಶಾಂತಿಯುತವಾಗಿರಲಿ ಎಂದು ಸಿರವಾರ ಸಿಪಿಐ ಎಂ.ಶಶಿಕಾಂತ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ರಂಜಾನ್ ಶಾಂತಿಸಭೆಯಲ್ಲಿ ಶುಕ್ರವಾರ ಮಾತನಾಡಿದರು. ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವದರಿಂದ ಹಬ್ಬದ ನೆಪದಲ್ಲಿ ರಾಜಕೀಯ ವ್ಯಕ್ತಿಗಳು ಬರದಂತೆ ತಡೆಯಬೇಕು. ಗುಂಪು ಸೇರಬಾರದು. ಹಬ್ಬದ ವಿಷಯವಾಗಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದರು.