ಲಿಂಗಸುಗೂರು: ಶ್ರೀರಾಮ ಜನ್ಮಭೂಮಿಯಲ್ಲಿ ರಾಮನ ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವುದು ಭಕ್ತರಿಗೆ ಸಂತಸ ತಂದಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಳ್ಳಾರಿ ವಿಭಾಗದ ಪ್ರಚಾರಕ ಸೋಮಶೇಖರ ಹೇಳಿದರು.
ಇದನ್ನೂ ಓದಿ:ಎಲ್ಲವೂ ರಾಮಮಯ..ಶ್ರೀ ರಾಮನ ನೋಡಲು 800 ಕಿ.ಮೀ. ಸೈಕಲ್ ಯಾತ್ರೆ ಆರಂಭಿಸಿದ ಇಬ್ಬರು ಯುವಕರು!
ಪಟ್ಟಣದಲ್ಲಿ ಅಯೋಧ್ಯೆಯಿಂದ ಬಂದಿದ್ದ ಮಂತ್ರಾಕ್ಷತೆ ಮತ್ತು ಆಮಂತ್ರಣ ಕರಪತ್ರ ವಿತರಿಸಿ ಭಾನುವಾರ ಮಾತನಾಡಿದರು.
ಭಜನೆ, ಕೀರ್ತನೆ, ಆರತಿ, ದೀಪೋತ್ಸವ
ಜ.22ರಂದು ಅಯೋಧ್ಯೆಯಲ್ಲಿ ಜರುಗುವ ರಾಮನ ವಿಗ್ರಹ ಪ್ರತಿಷ್ಠಾಪನೆ ಅಂಗವಾಗಿ ಅಂದು ಶ್ರೀರಾಮ, ಆಂಜನೇಯ ಪೂಜೆ, ಭಜನೆ, ಕೀರ್ತನೆ, ಆರತಿ, ದೀಪೋತ್ಸವ ಹಾಗೂ ಶ್ರೀರಾಮ, ಹನುಮಾನ್ ಚಾಲೀಸಾ ಪಠಣೆ ಮಾಡುವ ಮೂಲಕ ವಾತಾವರಣ ರಾಮಮಯವಾಗಬೇಕು. ಅಯೋಧ್ಯೆಯಿಂದ ಕಳುಹಿಸಲಾದ ಮಂತ್ರಾಕ್ಷತೆ ಮತ್ತು ಆಮಂತ್ರಣ ಪ್ರತಿ ಮನೆಗೆ ತಲುಪಿಸುವ ಕಾರ್ಯ ದೇಶಾದ್ಯಂತ ನಡೆದಿದೆ ಎಂದರು.