More

    ಸಿಡಿ ಲೇಡಿ ಕಿಡ್ನ್ಯಾಪ್ ಪ್ರಕರಣ: ಕೇಸ್ ಬೆಳಗಾವಿಯಿಂದ ಬೆಂಗಳೂರಿಗೆ ಶಿಫ್ಟ್ !

    ಬೆಂಗಳೂರು; ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ಅಶ್ಲೀಲ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಯುವತಿ ಅಪಹರಣ ಆಗಿದ್ದಾಳೆ ಎಂದು ಆಕೆಯ ಪಾಲಕರು ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಮೊನ್ನೆ ಅಪಹರಣ ದೂರು ದಾಖಲಿಸಿದ್ದರು. ಈ ಕುರಿತು ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರು ಪ್ರಕರಣವನ್ನು ಬೆಂಗಳೂರಿನ ಆರ್​ಟಿ ನಗರ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.

    ಪ್ರಕರಣದ ಪ್ರಾಥಮಿಕ ವರದಿ ಕೋರ್ಟ್‌ಗೆ ಸಲ್ಲಿಸಿದ ಬಳಿಕ ಕೇಸ್ ಫೈಲ್ ಆರ್​ಟಿ ನಗರ ಪೊಲೀಸ್ ಠಾಣೆಗೆ ಹಾಗೂ ಒಂದು ಪ್ರತಿಯನ್ನು ಡಿಜಿ ಐಜಿಪಿಗೆ ರವಾನೆ ಮಾಡಿದ್ದಾರೆ ಎಪಿಎಂಸಿ ಪೊಲೀಸರು.

    ಇದನ್ನೂ ಓದಿ: ಗರ್ಲ್​ಫ್ರೆಂಡ್​ ಜತೆ ತಂದೆಯ ಸರಸ: ಕಣ್ಣಾರೆ ಕಂಡ ಮಗ ಎಸಗಿದ ಕೃತ್ಯ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

    ಮಗಳು ಕಿಡ್ನಾಪ್ ಆಗಿದ್ದಾಳೆಂದು ಸಿಡಿಯಲ್ಲಿದ್ದ ಯುವತಿ ತಂದೆ ಬೆಳಗಾವಿಯ ಎಪಿಎಂಸಿ ಠಾಣೆಗೆ ದೂರು ನೀಡಿದ್ದರು. ಬೆಂಗಳೂರಿನ ಪಿ.ಜಿ.ಯಿಂದ ಕಿಡ್ನಾಪ್ ಆಗಿದ್ದಾಳೆಂದು ದೂರು ನೀಡಿದ್ರು. ಆರ್.ಟಿ.ನಗರ ಠಾಣಾ ವ್ಯಾಪ್ತಿಯ ಪಿಜಿಯಿಂದ ಕಿಡ್ನಾಪ್ ಆಗಿದ್ದಾಳೆಂದು ದೂರು ನೀಡಲಾಗಿತ್ತು.

    ಈ ವೇಳೆ ಯುವತಿಯ ಪೋಷಕರು ಜೀವಭಯ ಹಿನ್ನೆಲೆ ಬೆಂಗಳೂರಿಗೆ ತೆರಳದೇ ಬೆಳಗಾವಿಯಲ್ಲಿ ದೂರು ನೀಡ್ತಿದ್ದೀವಿ ಎಂದಿದ್ದರು. ಈ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿ ಪ್ರಾಥಮಿಕ ತನಿಖೆ ಮಾಡಿ ಕೇಸ್ ವರ್ಗಾವಣೆ ಮಾಡಿದ್ದಾರೆ ಬೆಳಗಾವಿ ಪೊಲೀಸರು.

    ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದೊಡ್ಡ ಷ್ಯಡಂತ್ರ, ಮೇಟಿ ಸಿಡಿ‌ ಬಿಡುಗಡೆ ಮಾಡಿದ್ದ ರಾಜಶೇಖರ್ ಮುಲಾಲಿ ಹೇಳಿಕೆ

    ಸಿಡಿ ಕೇಸ್​ನ ಯುವತಿ ನನ್ನ ಮನೆಗೆ ಬಂದದ್ದು ನಿಜ, ನ್ಯಾಯ ಕೊಡಿಸುವ ಮುನ್ನವೇ ಆಗಬಾರದ್ದು ಆಯ್ತು: ನರೇಶ್​ಗೌಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts