More

    ಅಯೋಧ್ಯೆಯಲ್ಲಿ ‘ರಾಮ ಸೇತು’ ಚಿತ್ರದ ಶುಭಾರಂಭ

    ಮುಂಬೈ : ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸುತ್ತಿರುವ ಹೊಸ ಚಿತ್ರ ‘ರಾಮ ಸೇತು’ವಿನ ಮುಹೂರ್ತ ಸಮಾರಂಭ ಇಂದು ಉತ್ತರಪ್ರದೇಶದ ಅಯೋಧ್ಯಾ ನಗರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಚಿತ್ರತಂಡವು ಶ್ರೀರಾಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯಿತು.

    ಪೂಜೆಯ ಫೋಟೋವನ್ನು ಅಕ್ಷಯ್ ಕುಮಾರ್ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. “ಇಂದು ಅಯೋಧ್ಯೆಯಲ್ಲಿ ರಾಮಸೇತು ಶುಭಾರಂಭದ ಸಮಯದಲ್ಲಿ ಭಗವಾನ್ ಶ್ರೀರಾಮ ದೇವರ ಆಶೀರ್ವಾದ ಲಭಿಸಿತು. ಜೈಶ್ರೀರಾಮ್” ಎಂದು ಬರೆದಿದ್ದಾರೆ.

    ಇದನ್ನೂ ಓದಿ: ಮೈಸೂರು ಬಾನುಲಿಯಲ್ಲಿ ‘ಉಲಿ ಉಯ್ಯಲೆ’ ಸರಣಿ ಕಾರ್ಯಕ್ರಮ ಬಿತ್ತರ

    ಇದೇ ಸಂದರ್ಭದಲ್ಲಿ ಅಯೋಧ್ಯೆಯ ರಾಮ್ ಕೀ ಪೈಡಿಯಲ್ಲಿ ಪೂಜೆ ಸಲ್ಲಿಸಲು ಅಕ್ಷಯ್ ಕುಮಾರ್ ನಡಿಗೆಯಲ್ಲೇ ಸಾಗಿದ್ದರು. ಆದರೆ ಜನಸಂದಣಿ ಹೆಚ್ಚಿದ್ದರಿಂದ ದರ್ಶನ ಪಡೆಯದೆ ಹಿಂತಿರುಗಬೇಕಾಯಿತು ಎನ್ನಲಾಗಿದೆ. ನಂತರ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಸಹ ಅಕ್ಷಯ್ ಭೇಟಿ ಮಾಡಿದರು.
    ಬೆಳಿಗ್ಗೆ ಮುಂಬೈನಿಂದ ಅಯೋಧ್ಯೆಗೆ ಚಿತ್ರತಂಡದೊಂದಿಗೆ ಖಾಸಗಿ ವಿಮಾನದಲ್ಲಿ ಪ್ರಯಾಣ ಆರಂಭಿಸುವ ಮುನ್ನ ತಮ್ಮ ಸಹನಟಿಯರಾದ ಜಾಕಲೀನ್ ಫರ್ನಾಂಡಿಸ್ ಮತ್ತು ನುಶ್ರತ್ ಭರೂಚಾರೊಂದಿಗಿರುವ ಮತ್ತೊಂದು ಫೋಟೋವನ್ನು ಅಕ್ಷಯ್ ಶೇರ್ ಮಾಡಿದ್ದರು.

    View this post on Instagram

    A post shared by Akshay Kumar (@akshaykumar)

    “ಎ ಸ್ಪೆಷಲ್ ಫಿಲ್ಮ್, ಎ ಸ್ಪೆಷಲ್ ಸ್ಟಾರ್ಟ್” ಎಂದು ಶೀರ್ಷಿಕೆ ನೀಡಿ ‘ರಾಮ ಸೇತು’ ತಂಡದ ಪ್ರಯಾಣ ಶುರುವಾಗುತ್ತಿದೆ ಎಂದು ಅಕ್ಷಯ್ ಬರೆದಿದ್ದರು. ಮುಹೂರತ್ ಸಮಾರಂಭದಲ್ಲಿ ಜಾಕಲೀನ್ ಫರ್ನಾಂಡಿಸ್ ಮತ್ತು ನುಶ್ರತ್ ಭರೂಚಾ ಜೊತೆ ಚಿತ್ರತಂಡದ ಇತರ ಸದಸ್ಯರು ಭಾಗವಹಿಸಿದರು. ಅಭಿಷೇಕ್ ಶರ್ಮಾ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್, ಆರ್ಕಿಯಾಲಜಿಸ್ಟ್​ನ ಪಾತ್ರ ವಹಿಸಲಿದ್ದಾರೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    “18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕರೊನಾ ಲಸಿಕೆ ನೀಡಿ” : ಕೇಜ್ರಿವಾಲ್

    ಜಾತಕ ದೋಷ ನಿವಾರಿಸಲು 13 ವರ್ಷದ ವಿದ್ಯಾರ್ಥಿಯನ್ನು ‘ಮದುವೆ’ಯಾದ ಶಿಕ್ಷಕಿ !

    ನಿಯಮ ಪಾಲಿಸದ ಪ್ರಯಾಣಿಕರನ್ನು ಕೆಳಗಿಳಿಸಿದ ಏರ್ ಏಷಿಯಾ; ಮಾಸ್ಕ್ ಸರಿಯಾಗಿ ಧರಿಸದ 6 ಪ್ರಯಾಣಿಕರು ಭದ್ರತಾ ಪಡೆ ವಶಕ್ಕೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts