More

    ಮೊದಲು ಮಾನವರಾಗೋಣ … ರಶ್ಮಿಕಾ ಬಗ್ಗೆ ಮಾತಾಡಿದವರ ಬಗ್ಗೆ ರಕ್ಷಿತ್ ಬೇಸರ

    ಬೆಂಗಳೂರು: ಮಳೆ ನಿಂತರೂ ಮಳೆ ಹನಿ ನಿಂತಿಲ್ಲ ಎನ್ನವ ಹಾಗೆ, ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವೆ ಬ್ರೇಕ್‌ಅಪ್ ಆಗಿ ಇಬ್ಬರೂ ದೂರವಾದರೂ, ಆ ವಿಷಯವನ್ನು ಪದೇಪದೇ ಕೆದುಕುವವರಿಗೆ ಕೊರತೆ ಇಲ್ಲ. ಆ ವಿಷಯದ ಬಗ್ಗೆ ಇಬ್ಬರಿಗೂ ಮಾತನಾಡುವುದಕ್ಕೆ ಇಷ್ಟವಿಲ್ಲದಿದ್ದರೂ, ಆಗಾಗ ಈ ವಿಷಯವನ್ನು ಅವರೆದುರು ಕೆಲವರು ಪ್ರಸ್ತಾಪ ಮಾಡುತ್ತಲೇ ಇರುತ್ತಾರೆ. ಈಗ ಮತ್ತೊಮ್ಮೆ ಇದು ಪುನರಾವರ್ತನೆಯಾಗಿದೆ.

    ಇದನ್ನೂ ಓದಿ: ಮತ್ತೆ ದೇವರಾಗಲು ಹೊರಟಿದ್ದಾರೆ ಅಕ್ಷಯ್​ ಕುಮಾರ್​ …

    ಇತ್ತೀಚೆಗೆ ಬಿಡುಗಡೆಯಾದ ‘777 ಚಾರ್ಲಿ’ ಚಿತ್ರದ ಟೀಸರ್‌ಗೆ ಸಿಕ್ಕ ಪ್ರತಿಕ್ರಿಯೆ ಕಂಡು ಖುಷಿಯಾದ ರಕ್ಷಿತ್ ಮತ್ತು ನಿರ್ದೇಶಕ ಕಿರಣ್ ರಾಜ್, ಆ ಯಶಸ್ಸಿಗೆ ಕಾರಣರಾದವರಿಗೆ ಥ್ಯಾಂಕ್ಸ್ ಹೇಳಲು ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದರು. ಈ ಸಂದರ್ಭದಲ್ಲಿ ಹಲವರು ರಶ್ಮಿಕಾ ಮಂದಣ್ಣ ಅವರ ಹೆಸರನ್ನು ಎಳೆದು ತರುವುದರ ಜತೆಗೆ, ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಈ ಬಗ್ಗೆ ಬೇಸರಗೊಂಡ ರಕ್ಷಿತ್ ಶೆಟ್ಟಿ, ಯಾರಿಗೂ ಅಗೌರವ ತೋರಿಸಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

    ಇದನ್ನೂ ಓದಿ: ‘ಮಹಾರಾಜ’ನಾದ ಆಮೀರ್​​ ಖಾನ್​ ಪುತ್ರ … ಇಂದಿನಿಂದ ಚಿತ್ರೀಕರಣ ಪ್ರಾರಂಭ

    ಈ ಕುರಿತು ಮಾತನಾಡಿರುವ ಅವರು, ‘ಕೆಲವು ಕಾಮೆಂಟ್‌ಗಳನ್ನು ಕೇಳುವುದಕ್ಕೆ ಬಹಳ ಬೇಸರವಾಗುತ್ತದೆ. ಅದು ನನ್ನ ಬಗ್ಗೆ ಅಲ್ಲ, ಬೇರೆಯವರ ಬಗ್ಗೆ. ದಯವಿಟ್ಟು ಹಳೆಯದನ್ನು ಬಿಟ್ಟು ಹೊಸದರ ಬಗ್ಗೆ ಮಾತಾಡೋಣ. ಮುಗಿದ ವಿಷಯಗಳನ್ನು ಪುನಃ ಮಾತಾಡಿ ಯಾವುದೇ ಪ್ರಯೋಜನವಿಲ್ಲ. ಯಾರಿಗೂ ನಾವು ಅಗೌರವ ತೋರಿಸಬಾರದು. ಆ ನಂತರ ನಮ್ಮ ಮೇಲೆ ನಾವು ಅಸಹ್ಯ ಪಟ್ಟುಕೊಳ್ಳಬಾರದು. ಮೊದಲು ಮಾನವರಾಗೋಣ. ಎಲ್ಲರಿಗೂ ಗೌರವ ಕೊಡೋಣ. ಎಲ್ಲರಿಗೂ ಅವರದ್ದೇ ಆದ ಬದುಕಿರುತ್ತದೆ. ಇಲ್ಲಿ ಬೇರೆ ತರಹ ಕಾಮೆಂಟ್‌ಗಳನ್ನು ನೋಡುವುದಕ್ಕೆ ಇಷ್ಟಪಡುತ್ತೇನೆ. ನಮ್ಮ ಸಿನಿಮಾ ಬಗ್ಗೆ ಮಾತಾಡೋಕೆ ಇಷ್ಟಪಡುತ್ತೇನೆ’ ಎಂದು ಹೇಳಿದ್ದಾರೆ.

    ದರ್ಶನ್-ಪ್ರೇಮ್ ಹೊಸ ಚಿತ್ರ … ಸುದ್ದಿ ನಿರಾಕರಿಸಿದ ರಕ್ಷಿತಾ ಪ್ರೇಮ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts