More

    ಆಕ್ಸಿಜನ್ ಹಂಚೋಕೆ ಕಂಗನಾಗೆ ಹೇಳಿ: ರಾಖಿ ಸಾವಂತ್

    ಮುಬೈ: ರಾಖಿ ಸಾವಂತ್ ಯಾವತ್ತೂ ತಮ್ಮ ಹರಿತವಾದ ಮಾತುಗಳಿಂದ ಎಲ್ಲರ ಗಮನ ಸೆಳೆಯುತ್ತಾ ಬಂದಿದ್ದಾರೆ. ಕೆಲವೊಮ್ಮೆ ತಮ್ಮ ಮಾತುಗಳಿಂದ ಸಾಕಷ್ಟು ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದ್ದಾರೆ. ಇದೀಗ ರಾಖಿ, ನೇರವಾಗಿ ಕಂಗನಾ ರಣಾವತ್‌ಗೆ ಟಾಂಗ್ ಕೊಟ್ಟಿದ್ದಾರೆ.

    ಇದನ್ನೂ ಓದಿ: ಪ್ರತಿಜ್ಞೆ ಮುರಿದು ತೆರೆ ಮೇಲೆ ಕಿಸ್ ಮಾಡಿದರಾ ಸಲ್ಮಾನ್?

    ಇತ್ತೀಚೆಗೆ ರಾಖಿ ಸಾವಂತ್ ಮನೆ ಎದುರು ಒಂದಿಷ್ಟು ಪಾಪರಾಜಿಗಳು ನಿಂತಿದ್ದಾರೆ. ರಾಖಿ ಮನೆಯಿಂದ ಹೊರಬರುವುದನ್ನು ನೋಡಿ, ಹೋಗಿ ಅವರನ್ನು ಮಾತಾಡಿಸಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ರಾಖಿಯ ತಾಯಿಯ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಈ ಮಧ್ಯೆ, ಕಂಗನಾ ಹೇಳಿದ ಮಾತೊಂದನ್ನು ಪ್ರಸ್ತಾಪಿಸಿ, ಆ ಬಗ್ಗೆ ಏನು ಹೇಳುತ್ತೀರಾ ಎಂದು ಕೇಳಿದ್ದಾರೆ. ಸದ್ಯದ ದೇಶದ ಪರಿಸ್ಥಿತಿ ಸರಿ ಇಲ್ಲ, ಎಲ್ಲೂ ಆಕ್ಸಿಜನ್ ಸಿಗುತ್ತಿಲ್ಲ ಎಂದು ಕಂಗನಾ ಹೇಳಿದ್ದು, ಆ ಬಗ್ಗೆ ನಿಮ್ಮ ಪ್ರತಿಕ್ರಿಯೆಯೇನು ಎಂದು ಪ್ರಶ್ನಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ರಾಖಿ, `ಏನು ಆಕ್ಸಿಜನ್ ಸಿಗುತ್ತಿಲ್ಲವಾ? ಕಂಗನಾ, ದಯವಿಟ್ಟು ದೇಶಕ್ಕೆ ಒಂದಿಷ್ಟು ಸೇವೆ ಮಾಡಿ. ನಿಮ್ಮ ಹತ್ತಿರ ಬಹಳ ಬಹಳ ಹಣ ಇದೆ. ಆಕ್ಸಿಜನ್ ಖರೀದಿಸಿ, ಅದನ್ನು ಜನರಿಗೆ ಹಂಚಿ’ ಎಂದು ಕಂಗನಾಗೆ ರಾಖಿ ಹೇಳಿದ್ದಾರೆ.

    ಇದನ್ನೂ ಓದಿ: ರೇಪ್​, ಕೊಲೆ ಬೆದರಿಕೆಗಳು ಬರ್ತಿವೆ: ಬಿಜೆಪಿ ಐಟಿ ಸೆಲ್​ ವಿರುದ್ಧ ಗಂಭೀರ ಆರೋಪ ಮಾಡಿದ ನಟ ಸಿದ್ಧಾರ್ಥ್​

    ರಾಖಿ ತಮ್ಮ ಬಗ್ಗೆ ಆಡಿರುವ ಮಾತು, ಕಂಗನಾ ಕಿವಿಗೆ ಬಿದ್ದಿದೆಯೋ ಇಲ್ಲವೋ ಗೊತ್ತಿಲ್ಲ. ಕಿವಿಗೆ ಬಿದ್ದ ಮೇಲೆ, ಕಂಗನಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.

    ಕೊನೆಗೂ ಇರ್ಫಾನ್‌ಗೆ ಆ ವಿಷಯ ಗೊತ್ತೇ ಆಗಲಿಲ್ಲವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts