More

    ಹೋರಾಟಗಾರನಿಗೆ ಕಪಾಳ ಮೋಕ್ಷ ಮಾಡಿದ ರೈತ ಸಂಘಟನೆ ನಾಯಕ!

    ಗಾಜಿಯಾಬಾದ್​: ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಸಲಾಗುತ್ತಿರುವ ಹೋರಾಟದಲ್ಲಿ ರೈತ ಸಂಘಟನೆಯ ನಾಯಕರೊಬ್ಬರು ಇತರ ಹೋರಾಟಗಾರನ ಕಪಾಳ ಮೋಕ್ಷ ಮಾಡಿರುವ ಘಟನೆ ನಡೆದಿದೆ. ಆತ ಬೇರೆಡೆಯಿಂದ ಬಂದಿದ್ದು, ಅಹಿತಕರ ಘಟನೆ ನಡೆಸುವ ಉದ್ದೇಶ ಹೊಂದಿದ್ದ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಮೈಸೂರಿನಲ್ಲಿ ವೈದ್ಯ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ, ಆ ಮನೆಗೆ ದುಷ್ಕರ್ಮಿ ಬಂದಿದ್ದಾದರೂ ಏಕೆ?

    ಭಾರತೀಯ ಕಿಸಾನ್​ ಯೂನಿಯನ್​ನ ವಕ್ತಾರ ರಾಕೇಶ್​ ಟಿಕೈಟ್​ ಇನ್ನೊಬ್ಬ ಹೋರಾಟಗಾರನ ಕೆನ್ನೆಗೆ ಹೊಡೆದಿದ್ದಾರೆ. ಮಾಧ್ಯಮದ ಎದುರಲ್ಲೇ ಈ ರೀತಿ ಹಲ್ಲೆ ಮಾಡಲಾಗಿದೆ. “ಅವರು ನಮ್ಮ ಸಂಘಟನೆಯ ಸದಸ್ಯರಲ್ಲ. ಕೋಲು ಹಿಡಿದುಕೊಂಡು ಸುಮ್ಮನೆ ಓಡಾಡುತ್ತಿದ್ದರು. ಮಾಧ್ಯಮಗಳೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದರು. ಕೆಟ್ಟ ಉದ್ದೇಶದಿಂದ ಇಲ್ಲಿಗೆ ಬಂದವರೆಲ್ಲರೂ ಹೊರಹೋಗಬೇಕು. ಅದೇ ಕಾರಣಕ್ಕೆ ಅವರಿಗೆ ಹೊಡೆದೆ” ಎಂದು ಟಿಕೈಟ್ ಹೇಳಿದರು.

    ಇದನ್ನೂ ಓದಿ: ಬೌನ್ಸ್ ಬೈಕ್‌ಗಳಿಗೆ ಬೆಂಕಿ ಪ್ರಕರಣ: ಆತ್ಮಹತ್ಯೆಗೆ ಯತ್ನಿಸಿದ ಕಟ್ಟಡ ಮಾಲೀಕ, ಪತ್ನಿಗೂ ಹೃದಯಾಘಾತ

    ಗಾಜಿಪುರ ಗಡಿಯಲ್ಲಿರುವ ರೈತರು ಶೀಘ್ರವೇ ಪ್ರತಿಭಟನಾ ಸ್ಥಳವನ್ನು ಖಾಲಿ ಮಾಡುವಂತೆ ಘಾಜಿಬಾದ್​ ಆಡಳಿತ ನೋಟಿಸ್​ ನೀಡಿದೆ. ಹಿಂಸಾತ್ಮಕವಾಗಿ ನಡೆದುಕೊಂಡವರ ಹೆಸರಿನ ಪಟ್ಟಿ ಕೊಡುವಂತೆ ಕೋರಿ ಸಂಘಟನೆಗಳಿಗೂ ನೋಟಿಸ್​ ನೀಡಲಾಗಿದೆ. ಮೂರು ದಿನಗಳೊಳಗೆ ಪ್ರತಿಕ್ರಿಯಿಸಲು ತಿಳಿಸಲಾಗಿದೆ. ಇನ್ನೊಂದತ್ತ ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರವು ರಾಪಿಡ್ ಆಕ್ಷನ್ ಫೋರ್ಸ್‌ನ (ಆರ್‌ಎಎಫ್) ನಾಲ್ಕು ಕಂಪನಿಗಳ ನಿಯೋಜನಾ ಅವಧಿಯನ್ನು ಫೆಬ್ರವರಿ 4 ರವರೆಗೆ ವಿಸ್ತರಿಸಿದೆ. (ಏಜೆನ್ಸೀಸ್​)

    ಏಕಾಂತದಲ್ಲಿದ್ದಾಗ ಮನೆಗೆ ನುಗ್ಗಿ ವಿಡಿಯೋ ಮಾಡಿಕೊಂಡ! ಸೆಕ್ಸ್​ಗೆ ಒಪ್ಪದಿದ್ದರೆ ವಿಡಿಯೋ ವೈರಲ್​ ಮಾಡುವುದಾಗಿ ಬೆದರಿಸಿದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts