More

    ನಾವೇನು ಈಗ ಹಾಡುತ್ತಿದ್ದೇವೋ ಅದು ಎಸ್​ಪಿಬಿ ಹಾಕಿದ ಭಿಕ್ಷೆ!; ರಾಜೇಶ್​ ಕೃಷ್ಣನ್​

    ಬೆಂಗಳೂರು: ಹಿರಿಯ ಗಾಯಕ ಎಸ್​ಪಿ ಬಾಲಸುಬ್ರಮಣ್ಯಂ ಅವರ ನಿಧನದ ಬೆನ್ನಲ್ಲೇ, ಅವರ ಗರಡಿಯಲ್ಲಿಯೇ ಪಳಗಿದ ಗಾಯಕ ರಾಜೇಶ್ ಕೃಷ್ಣನ್​ ಅಗಲಿದೆ ಗಾನ ಗಂಧರ್ವನ ಬಗ್ಗೆ ಮಾತನಾಡಿದ್ದಾರೆ.

    ಸದ್ಯ ಈಗ ನಾವೇನು ಅಷ್ಟೋ ಇಷ್ಟೋ ಹಾಡುತ್ತಿದ್ದೆವೆಯೋ ಅದು ಎಸ್​ಪಿಬಿ ಅವರು ಹಾಕಿದ ಭಿಕ್ಷೆ ಎಂದಿದ್ದಾರೆ. ಇಂಥ ಮತ್ತೊಂದು ಗಾಯಕ ಹುಟ್ಟಿ ಬರಬೇಕೆಂದರೆ ಇನ್ನೂ 500 ವರ್ಷ ಬೇಕು. ಅಂಥದ್ದೊಂದು ಮೇರು ಪರ್ವತವನ್ನು ನಾವಿಂದು ಕಳೆದುಕೊಂಡಿದ್ದೇವೆ’ ಎಂದು ಭಾವುಕರಾಗಿ ಮಾತನಾಡಿದ್ದಾರೆ.

    ಇದನ್ನೂ ಓದಿ: ಅಮಿತಾಭ್​ಗೆ ಧ್ವನಿ ನೀಡುವುದಕ್ಕೆ ಎಸ್​​ಪಿಬಿಗೆ ಕೊನೆಯವರೆಗೂ ಸಾಧ್ಯವಾಗಲೇ ಇಲ್ಲ …

    ಶಾಲೆ ಮತ್ತು ಕಾಲೇಜಿನ ಸಮಯದಿಂದಲೇ ಅವರ ಹಾಡುಗಳನ್ನು ಕೇಳಿ ಅಭಿಮಾನಿಯಾಗಿದ್ದ ರಾಜೇಶ್​ ಕೃಷ್ಣನ್​, ಮುಂದೊಂದು ದಿನ ಅವರ ಜತೆ ವೇದಿಕೆ ಹಂಚಿಕೊಳ್ಳುವ ಸೌಭಾಗ್ಯ ಸಿಗುತ್ತಾ ಎಂದು ಭಾವಿಸಿರಲಿಲ್ಲ. ಆ ಗಳಿಗೆಯೂ ರಾಜೇಶ್​ಗೆ ಸಿಕ್ಕಿತ್ತು.

    ಇದೀಗ ಅವರೊಂದಿಗೆ ಕಳೆದ ಆ ಸಮಯವನ್ನು ಮತ್ತು ಬಿಟ್ಟು ಹೋದ ಹಾಡುಗಳನ್ನೇ ಕೇಳುತ್ತ ಅವರ ನೆನಪು ಮಾಡಿಕೊಳ್ಳುತ್ತಾರೆಂತೆ.

    ಗುಮ್ಮಟ ನಗರಿಯಲ್ಲಿ ಗಾನಸುಧೆ ಹರಿಸಿದ್ದರು ಎಸ್​ಪಿಬಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts