ರಾಜಸ್ಥಾನ: ತಮ್ಮನ ಸಾವಿನಿಂದ ಮನೊಂದಿದ್ದ ಸಹೋದರಿ ನೀರಿನ ಟ್ಯಾಂಕ್ಗೆ ಹಾರಿ ಪ್ರಾಣ ಬಿಟ್ಟಿರುವ ಘಟನೆ ರಾಜಸ್ಥಾನದ ಬಿಕಾನೇರ್ನ ನುಲ್ಲಾದಲ್ಲಿ ನಡೆದಿದೆ.
ಇದನ್ನೂ ಓದಿ: ಅಂದು 3 ಕಾಲಿನ ಕರು ಜನನ, ಇಂದು ಗುಡೇಕೋಟೆಯಲ್ಲಿ ಎರಡು ಕಾಲಿನ ಕರುವಿಗೆ ಜನ್ಮ ಕೊಟ್ಟ ಹಸು
ರೇಖಾ (21) ಮೃತ ಯುವತಿ, ಸಹೋದರ ಸಂದೀಪ್(19)ನ ಸಾವಿನಿಂದ ಅಸಮಾಧಾನಗೊಂಡಿದ್ದ ಈಕೆ ತನ್ನ ಮನೆಯ ಸಮೀಪದಲ್ಲಿರುವ ನೀರಿನ ಟ್ಯಾಂಕ್ಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ ಎನ್ನಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮೊದಲ ಬಾರಿಗೆ ಮಹಿಳೆಯರಿಗಾಗಿಯೇ ಪ್ರತ್ಯೇಕ ಗ್ರಂಥಾಲಯ ಸ್ಥಾಪನೆ
ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆಯ ಬಳಿ ತುಂಬಿ ಹರಿಯುತ್ತಿದ್ದ ನಾಲೆಗೆ ಅಚಾನಕ್ಕಾಗಿ ಬಿದ್ದು ಸಂದೀಪ್ ಮೃತಪಟ್ಟಿದ್ದರು. ಸಹೋದರ ಇನ್ನಿಲ್ಲ ಎನ್ನುವ ಸಂಗತಿ ರೇಖಾಳಿಗೆ ತುಂಬಾ ನೋವನ್ನುಂಟು ಮಾಡಿತ್ತು. ಹೀಗಾಗಿ ಈಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇದನ್ನೂ ಓದಿ: 24 ಕೋಟಿ ರೂ. ಬೆಲೆ ಬಾಳುವ ಕೋಣ; ಗೋಡಂಬಿ, ಬಾದಾಮಿ, ತುಪ್ಪ ತಿನ್ನುವ ಇದರ ವೀರ್ಯದಿಂದ ಬರುತ್ತದೆ ಲಕ್ಷಗಟ್ಟಲೆ ಆದಾಯ
ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದಲ್ಲಿ ಮೊದಲ ಬಾರಿಗೆ ಮಹಿಳೆಯರಿಗಾಗಿಯೇ ಪ್ರತ್ಯೇಕ ಗ್ರಂಥಾಲಯ ಸ್ಥಾಪನೆ