More

    ಉತ್ಸಾಹಿ ಯುವಕರ ಬೆನ್ನಿಗೆ ನಿಲ್ಲಲು ರೆಡಿಯಾದ್ರಾ ರಾಜಮೌಳಿ!

    ಲಾಕ್​ಡೌನ್​ನಿಂದಾಗಿ ಮನರಂಜನಾ ಕ್ಷೇತ್ರದಲ್ಲಿ ಬಹುದೊಡ್ಡ ಬೆಳವಣಿಗೆ ಆಗಿದೆಯೆಂದರೆ ಅದು ಓಟಿಟಿ ಕ್ಷೇತ್ರದಲ್ಲಿ ಮಾತ್ರ. ಇಷ್ಟು ದಿನ ಅದೊಂದು ವೇದಿಕೆ ಎಂಬುದಷ್ಟೇ ಎಲ್ಲರಿಗೂ ಗೊತ್ತಿತ್ತು. ಆದರೆ, ಅದರ ಬಳಕೆ ಬಗ್ಗೆ ಅಷ್ಟಾಗಿ ಯಾರೂ ತಿಳಿದುಕೊಂಡಿರಲಿಲ್ಲ. ಶೂಟಿಂಗ್​ ಸ್ಥಗಿತ, ಸದ್ಯಕ್ಕೆ ಸಿನಿಮಾ ಇಲ್ಲ ಎಂದಾಗ ಚಿತ್ರ ನಿರ್ಮಾಪಕರು ಓಟಿಟಿ ಬಗ್ಗೆಯೇ ಹೆಚ್ಚು ಮುಖಮಾಡಿದರು. ಸದ್ಯಕ್ಕೆ ಹೆಚ್ಚೆಚ್ಚು ಜನಪ್ರಿಯವಾಗಿ ಮುನ್ನುಗ್ಗುತ್ತಿದೆ. ಇಷ್ಟೆಲ್ಲ ಬೆಳವಣಿಗೆಯ ನಡುವೆಯೇ ಖ್ಯಾತ ನಿರ್ದೇಶಕ ರಾಜಮೌಳಿ ಸಹ ಓಟಿಟಿ ವೇದಿಕೆಯತ್ತ ದೃಷ್ಟಿ ಹಾಯಿಸಿದ್ದಾರೆ.

    ಇದನ್ನೂ ಓದಿ: ರೋಗ ನಿರೋಧಕ ಶಕ್ತಿ ವಿಚಾರಕ್ಕೆ ಅಜಯ್ ದೇವಗನ್ ಟ್ರೋಲ್

    ಸದ್ಯ, ಆರ್​ಆರ್​ಆರ್​ ಸಿನಿಮಾ ಕೆಲಸಗಳ ಜತೆಗೆ ಮಹೇಶ್​ ಬಾಬು ಚಿತ್ರದ ಸ್ಕ್ರಿಪ್ಟಿಂಗ್​ ಕೆಲಸಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ. ಅವುಗಳ ಜತೆಯಲ್ಲಿಯೇ ಇದೀಗ ಓಟಿಟಿಯತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ. ಹಾಗಂತ ಅಲ್ಲಿಯೂ ನಿರ್ದೇಶನ ಮಾಡಲಿದ್ದಾರಾ ರಾಜಮೌಳಿ ಎಂದುಕೊಳ್ಳಬೇಡಿ. ಬದಲಿಗೆ ಓಟಿಟಿ ವೇದಿಕೆಯಲ್ಲಿ ಒಂದಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಲು ಮುಂದೆ ಬಂದಿದ್ದಾರೆ.

    ಇದನ್ನೂ ಓದಿ: ಈ ಒಂದು ಕಾರಣಕ್ಕಾ ಸುಶೀಲ್ ಗೌಡ ಆತ್ಮಹತ್ಯೆ ಮಾಡಿಕೊಂಡಿದ್ದು

    ಇದರಲ್ಲಿ ಬಹುತೇಕ ಪ್ರತಿಭಾನ್ವಿತರಿಗೆ ಅವಕಾಶ ನೀಡುವ ಯೋಜನೆ ಹಾಕಿರುವ ರಾಜಮೌಳಿ, ಈಗಾಗಲೇ ಒಂದಷ್ಟು ಕಥೆಗಳನ್ನು ಕೇಳಿದ್ದಾರೆ. ಅದರಲ್ಲಿ ಒಂದಷ್ಟು ಅಂತಿಮ ಮಾಡಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಕನ್ನಡದಲ್ಲಿ ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್ ತಮ್ಮ ಪಿಆರ್​ಕೆ ಪ್ರೊಡಕ್ಷನ್​ ಕಂಪನಿಯ ಮೂಲಕ ಹೊಸಬರನ್ನು ಆಹ್ವಾನಿಸಿ ಸಿನಿಮಾ ಸಿದ್ಧಪಡಿಸುತ್ತಿದ್ದಾರೆ. ಇದೀಗ ಅದೇ ಮಾದರಿಯಲ್ಲಿ ರಾಜಮೌಳಿ ಸಹ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. (ಏಜೆನ್ಸೀಸ್​)

    ನಟ ಪ್ರಭಾಸ್​ ತೆಗೆದುಕೊಂಡ ಈ ನಿರ್ಧಾರ ಕನ್ನಡಿಗರನ್ನು ಕೆಣಕುವಂತಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts