More

    ‘ಟೋಬಿ’ಗಾಗಿ ಮೂಗು ಚುಚ್ಚಿಸಿಕೊಂಡ ರಾಜ್ ಬಿ ಶೆಟ್ಟಿ; ‘ಗಾಯದ ನೋವು ತಾಳಲಾದರೆ ಊಟವನ್ನೂ ಮಾಡುತ್ತಿರಲಿಲ್ಲ’!

    ಬೆಂಗಳೂರು: ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನಸೆಳೆಯುವ ನಿರ್ದೇಶಕ ರಾಜ್ ಬಿ ಶೆಟ್ಟಿ ಈಗ ಟೋಬಿಯಾಗಿ ಮತ್ತೊಮ್ಮೆ ಸಿನಿಪ್ರಿಯರ ಮುಂದೆ ಬರುತ್ತಿದ್ದಾರೆ. ಚಿತ್ರವು ಆಗಸ್ಟ್ 25ಕ್ಕೆ ತೆರೆ ಕಾಣುತ್ತಿದೆ. ಅಂದಹಾಗೆ ಇತ್ತೀಚೆಗಷ್ಟೆ ಬಿಡುಗಡೆಯಾದ ಟೋಬಿ ಸಿನಿಮಾದ ಫಸ್ಟ್ ಲುಕ್ ಟೀಸರ್​​​ನಲ್ಲಿ ಮೂಗುತಿ ತೊಟ್ಟು ರಕ್ತ ಸಿಕ್ತವಾದ ರಾಜ್ ಬಿ ಶೆಟ್ಟಿಯ ಚಿತ್ರ ನೋಡಬಹುದು.

    ಸದ್ಯ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಟೋಬಿ ಚಿತ್ರತಂಡವು ಪ್ರಚಾರದ ಭಾಗವಾಗಿ ವಿಡಿಯೋ ತುಣುಕೊಂದನ್ನು ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ರಾಜ್ ಬಿ ಶೆಟ್ಟಿ ಮೂಗು ಚುಚ್ಚಿಸಿಕೊಂಡ ನಂತರ ಏನೆಲ್ಲಾ ಸಮಸ್ಯೆಗಳು ಎದುರಾದವು…, ಸಿನಿಮಾಗಾಗಿ ಅವರು ವಹಿಸಿದ ಶ್ರಮ ಮುಂತಾದವುಗಳನ್ನು ವಿವರಿಸಲಾಗಿದೆ.

    ಚಿತ್ರತಂಡ ಹೇಳುವ ಪ್ರಕಾರ, ‘ದೃಶ್ಯವು ನೈಜವಾಗಿ ಬರಬೇಕೆಂಬ ಉದ್ದೇಶದಿಂದ ರಾಜ್ ಗನ್ ಮೂಲಕ ಮೂಗು ಚುಚ್ಚಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಎಲ್ಲರೂ ಸಣ್ಣ ಮೂಗುತಿ ಹಾಕುತ್ತಾರೆ. ಆದರೆ ರಾಜ್ ಅವರು ಚಿತ್ರದಲ್ಲಿ ಧರಿಸಿದ ಮೂಗುತಿ ಭಾರವಾಗಿತ್ತು. ಇದರಿಂದ ಮೂಗಿನ ಗಾಯ ವಾಸಿಯಾಗುತ್ತಿರಲಿಲ್ಲ. ಈ ನೋವು ತಾಳಲಾರದೆ ಅವರು ಊಟವನ್ನೂ ಮಾಡುತ್ತಿರಲಿಲ್ಲ. ಪ್ರತಿ ಬಾರಿ ರಿಂಗ್ ತೆಗೆದ ತಕ್ಷಣ ತುಳಸಿ ಕಡ್ಡಿಯನ್ನು ಚುಚ್ಚಲಾಗುತ್ತಿತ್ತು. ಒಮ್ಮೆಯಂತೂ ಆ ಮೂಗುತಿ ಕಿತ್ತು ಬಂದಾಗ ನೋವು ತಾಳಲಾರದೆ ರಾಜ್ ಕಣ್ಣೀರು ಹಾಕಿದ್ದರು. ನೋವು ಕಮ್ಮಿ ಆಗಲು ಇಂಜೆಕ್ಷನ್ ಕೂಡ ತೆಗೆದುಕೊಳ್ಳುತ್ತಿದ್ದರು’ ಎಂದು ನೆನಪಿಸಿಕೊಳ್ಳಲಾಗಿದೆ.

    ಚಿತ್ರವನ್ನು ಬಾಸಿಲ್ ಅಲ್ಪಲಕ್ಕಲ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಲೈಟರ್ ಬುದ್ಧಫಿಲ್ಡ್‌ ನಡಿ ನಿರ್ಮಾಣವಾದ ರಾಜ್ ಬಿ.ಶೆಟ್ಟಿ ನಟನೆಯ `ಗರುಡ ಗಮನ ವೃಷಭ ವಾಹನ’ ಸಿನಿಮಾವನ್ನು ನಿರ್ಮಾಣ ಮಾಡಿದ್ದ ರವಿ ರೈ ಕಳಸ ಅವರೇ ಟೋಬಿ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಚೈತ್ರ ಜೆ ಆಚಾರ್ ಹಾಗೂ ಸಂಯುಕ್ತ ಹೊರನಾಡು ನಟಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts