More

    ರೈಲ್ವೆ ಸಂಚಾರ ತ್ವರಿತ ಆರಂಭವಾಗಲಿ

    ಸಿಂಧನೂರು: ನಗರದಲ್ಲಿ ಕೇಂದ್ರೀಯ ವಿದ್ಯಾಲಯ ಆರಂಭಕ್ಕೆ ಕ್ರಮಕೈಗೊಳ್ಳಬೇಕೆಂದು ನಗರದ ಪ್ರವಾಸಿ ಮಂದಿರದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿಗೆ ಬಿಜೆಪಿಯ ಪ್ರಮುಖರು ಭಾನುವಾರ ಮನವಿ ಮಾಡಿದರು.


    ಮುನಿರಾಬಾದ್-ಮಹೆಬೂಬನಗರ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಸಿಂಧನೂರುವರೆಗೆ ರೈಲ್ವೆ ಹಳಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ನಿಲ್ದಾಣ ನಿರ್ಮಿಸಲಾಗಿದ್ದು, ರೈಲುಗಳ ಸಂಚಾರಕ್ಕೆ ತ್ವರಿತ ಕ್ರಮ ವಹಿಸಬೇಕು. ಗಿಣಿಗೇರಾ-ರಾಯಚೂರು ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಪಡಿಸಬೇಕೆಂದು ಮನವಿ ಮಾಡಲಾಯಿತು.


    ಬಿಜೆಪಿ ಮಂಡಲ ಅಧ್ಯಕ್ಷರಾದ ಹನುಮೇಶ ಸಾಲಗುಂದ, ನಿರುಪಾದೆಪ್ಪ ಜೋಳದರಾಶಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಪ್ರಮುಖರಾದ ವೆಂಕನಗೌಡ ಮಲ್ಕಾಪುರ, ಈರೇಶ ಇಲ್ಲೂರು, ಮಲ್ಲಿಕಾರ್ಜುನ ಜೀನೂರು, ತಿಮ್ಮಾರಡ್ಡಿ ಹುಡಾ, ಪ್ರೇಮಾ ಸಿದ್ಧಾಂತಿಮಠ, ಪ್ರಶಾಂತ ಕಿಲ್ಲೇದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts