ಹುಬ್ಬಳ್ಳಿ : ಪ್ರಯಾಣಿಕರ ಕೊರತೆಯಿಂದಾಗಿ ಎಸ್ಎಸ್ಎಸ್ ಹುಬ್ಬಳ್ಳಿ -ಚಿತ್ರದುರ್ಗ – ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.
ಅ. 13 ರಿಂದ ಡಿ. 31ರವರೆಗೆ ಚಿಕ್ಕಜಾಜೂರ ಮತ್ತು ಚಿತ್ರದುರ್ಗದ ಮಧ್ಯೆ ಈ ರೈಲು ಸಂಚಾರ ರದ್ದುಗೊಂಡಿದ್ದು, ಚಿಕ್ಕಜಾಜೂರವರೆಗೆ ಮಾತ್ರ ಸಂಚರಿಸಲಿದೆ ಹಾಗೂ ಚಿತ್ರದುರ್ಗದ ಬದಲಾಗಿ ಚಿಕ್ಕಜಾಜೂರಿನಿಂದ ಸಂಚಾರ ಪ್ರಾರಂಭಿಸಲಿದೆ.