More

    ಕರ್ನಾಟಕದ ಕುಳ್ಳ ದುರ್ಗದ ಅಳಿಯ

    ಚಿತ್ರದುರ್ಗ: ಕನ್ನಡ ಚಲನಚಿತ್ರ ರಂಗದ ಮೂಲಕ ಕರ್ನಾಟಕದ ಕುಳ್ಳ ಎಂದೇ ಖ್ಯಾತಿ ಪಡೆದ ನಟ, ನಿರ್ಮಾಪಕ ದ್ವಾರಕೀಶ್ ಕೋಟೆನಾಡಿನ ಅಂಬುಜಾ ಅವರನ್ನು ವರಿಸಿದ್ದರಿಂದ ಚಿತ್ರದುರ್ಗದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.

    ಗುರು-ಹಿರಿಯರ ನಿಶ್ಚಯದ ಮೇರೆಗೆ ದ್ವಾರಕೀಶ್ 1967ರ ಏಪ್ರಿಲ್ 26ರಂದು ಅಂಬುಜಾ ಅವರನ್ನು ಬಾಳಸಂಗಾತಿಯಾಗಿ ಸ್ವೀಕರಿಸಿದರು.

    ಕೇಂದ್ರದ ಮಾಜಿ ಸಚಿವ ದಿ. ಸಿ.ಕೆ.ಜಾಫರ್ ಶರೀಫ್ ಅವರು ಅನಾರೋಗ್ಯ ಸಮಸ್ಯೆಯ ಕಷ್ಟಕಾಲದಲ್ಲಿ ನನಗೆ ಸಹಾಯ ಮಾಡುವ ಮೂಲಕ ಮರುಜನ್ಮ ನೀಡಿದ್ದಾರೆ ಎಂದು ಪದೇ ಪದೆ ದ್ವಾರಕೀಶ್ ಸ್ಮರಿಸಿಕೊಳ್ಳುತ್ತಿದ್ದರು.

    ಕನ್ನಡದ ಮೇರುನಟ ಡಾ.ವಿಷ್ಣುವರ್ಧನ್ ಅವರ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದ ನಿರ್ಮಾಪಕರಲ್ಲಿ ದ್ವಾರಕೀಶ್ ಪ್ರಮುಖರು. ಇವರಿಬ್ಬರು ನಟಿಸುವ ಚಿತ್ರಕ್ಕೆ ಕಾದಂಬರಿಕಾರ ಬಿ.ಎಲ್.ವೇಣು ಅವರು ಸಂಭಾಷಣೆ ಬರೆಯಬೇಕು ಎಂಬ ದ್ವಾರಕೀಶ್ ಆಸೆ ಕೊನೆಯವರೆಗೂ ಈಡೇರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts