ಬೆಂಗಳೂರು: ಚುನಾವಣೆ ಹೊತ್ತಲ್ಲಿ GST ಅಧಿಕಾರಿಗಳ ದಾಳಿ ಪ್ರಾರಂಭಿಸಿದ್ದಾರೆ. ಮತದಾರರಿಗೆ ಹಂಚಲು ತಂದಿದ್ದ ಮೂರು ಕೋಟಿ ರೂ. ಮೌಲ್ಯದ ಕುಕ್ಕರ್, ಗಡಿಯಾರ ಹಾಗೂ ಪಾತ್ರೆಗಳನ್ನು ಜಪ್ತಿ ಮಾಡಿದ್ದಾರೆ.
ಬೆಳ್ಳಂಬೆಳಿಗ್ಗೆ ಬ್ಯಾಟರಾಯನಪುರ ಬಿಜೆಪಿ ಟಿಕೆಟ್ ಅಭ್ಯರ್ಥಿ ಮುನೇಂದ್ರ ಕುಮಾರ್ಗೆ ಸೇರಿದ 3 ಕೋಟಿ ಮೌಲ್ಯದ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇಂಟರ್ನ್ಯಾಷನಲ್ ಶಾಲೆಯ ಹಿಂಬದಿ ಗೊಡೌನ್ ನಲ್ಲಿ ಇರಿಸಿದ್ದ 3 ಕೋಟಿ ಮೊತ್ತದ ಕುಕ್ಕರ್, ಗಡಿಯಾರ, ಪಾತ್ರೆಗಳು ಸೀಜ್ ಮಾಡಲಾಗಿದೆ.
ಇದನ್ನೂ ಓದಿ: ಮಂಗಳಮುಖಿಯರ ಮೊಟ್ಟ ಮೊದಲ ಸಲೂನ್ ಕಾರ್ಯಾರಂಭ!
ಮಳಿಗೆಗಳಲ್ಲಿ ವಸ್ತುಗಳನ್ನು ಸಂಗ್ರಹಿಸಿದ್ದಾರೆ ಎಂಬ ಖಚಿತ ಮಾಹಿತಿ ತಿಳಿದು ಅಧಿಕಾರಿಗಳು ಮುಂಜಾನೆ ದಾಳಿ ಮಾಡಿದ್ದಾರೆ. ಜಿಎಸ್ಟಿ ಅಧಿಕಾರಿಗಳು ಮೂರು ಗೊಡೌನ್ ಗಳನ್ನು ಸೀಜ್ ಮಾಡಿ ಸೀಲ್ ಮಾಡಿದ್ದಾರೆ.
ಬೀದರ್ನ ಗೋರ್ಟಾದಲ್ಲಿ ಹುತಾತ್ಮರ ಸ್ಮಾರಕ ಲೋಕಾರ್ಪಣೆಗೊಳಿಸಿದ ಅಮಿತ್ ಷಾ