More

    ಈಗಲೂ ಯಡಿಯೂರಪ್ಪ ನಮ್ಮ ನಾಯಕ – ಉಸ್ತುವಾರಿ ಮಂತ್ರಿ ಶಂಕರ ಪಾಟೀಲ್ ಹೇಳಿಕೆ

    ರಾಯಚೂರು: ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಈಗಲೂ ನಮ್ಮ ನಾಯಕರು ಮಾತ್ರವಲ್ಲ ವರಿಷ್ಠರು ಕೂಡ. ಅವರಿಗೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸ್ಥಾನವಿದೆ. ಅವರನ್ನು ತುಳಿಯುವ ಕೆಲಸ ಯಾರೂ ಮಾಡಿಲ್ಲ, ಮಾಡೋದು ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಬಿ. ಪಾಟೀಲ್ ಮುನೇನಕೊಪ್ಪ ಹೇಳಿದರು.

    ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಬಿಜೆಪಿ ಬೆಳೆಸುವಲ್ಲಿ ಯಡಿಯೂರಪ್ಪ ಶ್ರಮ ಏನು ಎಂಬುದು ಎಲ್ಲರಿಗೂ ಗೊತ್ತಿದೆ. 1 ಸ್ಥಾನದಿಂದ 110ರವರೆಗೆ ಕೊಂಡೊಯ್ದಿದ್ದಾರೆ. ರಾಜ್ಯ ಮತ್ತು ರಾಷ್ಟ್ರದಲ್ಲಿ ದೊಡ್ಡ ಸ್ಥಾನವನ್ನು ನೀಡಲಾಗಿದೆ ಯಾರು ಅಲ್ಲಗಳೆಯುವಂತಿಲ್ಲ. ಪಕ್ಷದ ಸಿದ್ಧಾಂತದಂತೆ ಎಲ್ಲರನ್ನೂ ತೆಗೆದುಕೊಂಡು ಹೋಗುವ ಕೆಲಸವನ್ನು ಮಾಡಲಾಗುತ್ತಿದೆ. ಯಾವ ಹಿರಿಯ ನಾಯಕರನ್ನು ದೂರವಿಡುವ ಕೆಲಸ ಮಾಡಿಲ್ಲ ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ಜಿಕಾ ವೈರಸ್ ಕಂಡುಬಂದಿರುವ ಹಿನ್ನೆಲೆ ಕೇಂದ್ರದ ಉನ್ನತ ಮಟ್ಟದ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಾನ್ವಿ ತಾಲೂಕಿನ ಕೋಳಿ ಕ್ಯಾಂಪಿನ ಬಾಲಕಿಗೆ ಜಿಕಾ ವೈರಸ್ ಪತ್ತೆಯಾಗಿದ್ದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯ ಎಲ್ಲಾ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಗ್ರಾಮದಲ್ಲಿ ಬೀಡುಬಿಟ್ಟು ಜನರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದರು.
    ಮೋಸವಾದ್ರೆ ದಾಳಿ

    ರಾಜ್ಯದ ವಿವಿಧ ಖಾಸಗಿ ಸಕ್ಕರೆ ಕಾರ್ಖಾನೆಗಳಲ್ಲಿ ರೈತರಿಗೆ ಮೋಸ ಮಾಡಲಾಗುತ್ತಿದೆ ಎನ್ನುವ ದೂರು ಕೇಳಿಬಂದಿದ್ದರಿಂದ 20ಕಡೆ ದಾಳಿ ನಡೆಸಲಾಗಿದೆ. ಕಬ್ಬು ಬೆಳೆಗಳಿಗೆ ನಿರಂತರವಾಗಿ ಕಾರ್ಖಾನೆ ಮಾಲೀಕರಿಂದ ಮೋಸವಾಗುತ್ತಿತ್ತು. ರೈತರ ಹಿತದೃಷ್ಟಿಯಿಂದ ದಾಳಿ ಮಾಡಲಾಗಿದೆ. ಮೋಸ ಮುಂದುವರಿದರೆ ನಿರಂತರವಾಗಿ ದಾಳಿ ನಡೆಯಲಿದೆ. ಸರ್ಕಾರ ಕಾರ್ಖಾನೆ ಮಾಲೀಕರ ಪರವಾಗಿದೆ ಎಂದು ಆರೋಪ ಮಾಡಲಾಗುತ್ತಿತ್ತು. ಈ ದಾಳಿಯಿಂದ ಸರ್ಕಾರ ರೈತರ ಪರವಾಗಿದೆ ಎನ್ನುವುದು ತೋರಿಸುತ್ತದೆ. ಉತ್ಪಾದನೆಯಲ್ಲಿ ಶೇ.50 ರೈತರಿಗೆ ಕೊಡಬೇಕು. ಇದಕ್ಕಾಗಿ ಸರ್ಕಾರ ಮೊದಲ ಕಂತಿನಲ್ಲಿ 200ಕೋಟಿ ರೂ. ಬಿಡುಗಡೆ ಮಾಡಿದೆ ಎಂದರು. ತೂಕ,ಇಳುವರಿ ಬಗ್ಗೆ ನಿಗಾ ಇರಿಸಲು ಕಮಿಟಿ ರಚಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts