More

    ಕರ್ನಾಟಕದ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ ಕಣ್ಣೇ ಅದಿರಿಂದಿ ಖ್ಯಾತಿಯ ಮಂಗ್ಲಿ..!

    ರಾಯಚೂರು: ರಾಜ್ಯದಲ್ಲಿ ಉಪ ಚುನಾವಣೆಯ ಕಾವು ಜೋರಾಗಿದ್ದು, ಜನರ ಮತಗಳನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ಕಸರತ್ತು ನಡೆಸುತ್ತಿದ್ದಾರೆ. ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ರಾಯಚೂರು ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್​ ಗೌಡ ಪಾಟೀಲ್​ ಪ್ರಖ್ಯಾತ ಗಾಯಕಿಯನ್ನೇ ಚುನಾವಣಾ ಪ್ರಚಾರಕ್ಕೆ ಕರೆತಂದಿದ್ದಾರೆ.

    ನಿಮಗೆಲ್ಲ ನಟ ದರ್ಶನ್​ ಅಭಿನಯದ ರಾಬರ್ಟ್​ ಚಿತ್ರದ ಕಣ್ಣು ಹೋಡಿಯಾಕಾ ಹಾಡಿನ ಬಗ್ಗೆ ತಿಳಿದಿದೆ. ಈ ಹಾಡು ಕನ್ನಡಕ್ಕಿಂತ ತೆಲಗಿನಲ್ಲೇ ಸದ್ದು ಮಾಡಿದ್ದು ಹೆಚ್ಚು. ಅದಕ್ಕೆ ಕಾರಣ ಗಾಯಕಿ ಮಂಗ್ಲಿ ಅವರ ಕಂಠಸಿರಿ.

    ಇದನ್ನೂ ಓದಿರಿ: ಹಾಸನದಲ್ಲಿ ಬಿಜೆಪಿ ಕಾರ್ಯಕರ್ತನ ಮನೆ ಮೇಲೆ ಜೆಡಿಎಸ್ ಬೆಂಬಲಿಗರಿಂದ ಕಲ್ಲು ತೂರಾಟ..!

    ಮಂಗ್ಲಿ ಅವರು ಹಾಡಿದ “ಕಣ್ಣೇ ಅದಿರಿಂದಿ” ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ಸಿಕ್ಕಾಪಟ್ಟೆ ಹಿಟ್ ಆಯಿತು. ವಿಶೇಷವೆಂದರೆ ಮಂಗ್ಲಿ ಅವರಿಗೆ ತುಂಬಾ ಜನಪ್ರಿಯವನ್ನು ಈ ಹಾಡು ತಂದುಕೊಟ್ಟಿದೆ. ಈ ಹಾಡಿನಿಂದ ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್​ ಸಂಖ್ಯೆ ಹೆಚ್ಚಿಸಿಕೊಂಡಿರುವ ಮಂಗ್ಲಿ, ಕನ್ನಡಿಗರ ಮನೆ ಮಗಳಷ್ಟು ಚಿರಪರಿಚಿತರಾಗಿದ್ದಾರೆ.

    ಹೀಗಾಗಿ ಮಂಗ್ಲಿ ಅವರನ್ನು ಬಿಜೆಪಿ ಅಭ್ಯರ್ಥಿ ಪ್ರತಾಪ್​ ಗೌಡ ಪಾಟೀಲ್​ ಚುನಾವಣಾ ಪ್ರಚಾರಕ್ಕೆ ಆಹ್ವಾನಿಸಿದ್ದಾರೆ. ನಾಳೆ ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಂಡಾಗಳಲ್ಲಿ ಮಂಗ್ಲಿ ಅವರು ಪ್ರತಾಪ್​ ಗೌಡ ಪರ ಮತಯಾಚನೆ ಮಾಡಲಿದ್ದಾರೆ. (ದಿಗ್ವಿಜಯ ನ್ಯೂಸ್​)

    ರಾಹುಲ್​ ಡ್ರಾವಿಡ್​ ಕೋಪಕ್ಕೆ ಧೋನಿ ಹೆದರಿದ್ದರು! ಹಳೆಯ ಘಟನೆ ಮೆಲುಕು ಹಾಕಿದ ಸೆಹ್ವಾಗ್​

    ಕಾಡಿನವರಲ್ಲ, ನಗರ ನಕ್ಸಲರದ್ದೇ ದೊಡ್ಡ ಸಮಸ್ಯೆ!

    ವಾಸ್ತವ ತೆರೆದಿಟ್ಟಿತು ರವಿ ಡಿ. ಚನ್ನಣ್ಣನವರ್ ಲೇಖನ: ಜನಮತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts