ಚಂಡೀಗಢ: ಕೃಷಿ ಮಸೂದೆಗಳನ್ನು ಕಾಂಗ್ರೆಸ್ಸಿಗರು ವಿರೋಧಿಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿರುವಂಥದ್ದೇ. ಅವರ ಪ್ರಾಯೋಜಕತ್ವದಲ್ಲಿ ಪ್ರತಿಭಟನೆಗಳೂ ನಡೆಯುತ್ತಿವೆ. ಏತನ್ಮಧ್ಯೆ, ‘ರಾಹುಲ್ ಗಾಂಧಿ ಡ್ರಾಮಾ ಮಾಡೋಕೆ ನಾಳೆ ಪಂಜಾಬಿಗೆ ಬರ್ತಿದ್ದಾರೆ’ ಎಂಬ ಹೇಳಿಕೆಯೊಂದು ದೇಶದ ಗಮನಸೆಳೆದಿದೆ.
ಕೃಷಿ ಮಸೂದೆಗಳಿಗೆ ಸಂಬಂಧಿಸಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದಿಂದ ಹೊರಬಿದ್ದಿರುವ ಶಿರೋಮಣಿ ಅಕಾಲಿದಳ ಪಂಜಾಬ್ನಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದೆ. ಎರಡು ದಿನಗಳ ಹಿಂದಷ್ಟೇ ಪ್ರತಿಭಟನೆ ನಡೆಸಿ ಬಂಧನಕ್ಕೂ ಒಳಗಾಗಿದ್ದಾರೆ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್. ಶಿರೋಮಣಿ ಅಕಾಲಿದಳ ಪಂಜಾಬಿನಲ್ಲಿ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ಮುಂದುವರಿಸಿದೆ.
ಇದನ್ನೂ ಓದಿ: ಸೋಂಕಿದ್ದರೂ ಲಕ್ಷಣಗಳಿಲ್ಲ; ಕರೊನಾ ವೈರಸ್ನಲ್ಲಿದ್ಯಂತೆ ನೋವು ನಿವಾರಕ!
ಇದರ ನಡುವೆ, ಕಾಂಗ್ರೆಸ್ ಪ್ರತಿಭಟನೆ ಪಂಜಾಬ್ನಲ್ಲಿ ಶಿರೋಮಣಿ ಅಕಾಲಿದಳದವರ ಕಣ್ಣುಕೆಂಪಾಗಿಸಿದೆ. ಹೀಗಾಗಿ, ಸುಖಬೀರ್ ಸಿಂಗ್ ಬಾದಲ್ ಅವರು ರಾಹುಲ್ ಗಾಂಧಿ ಆಗಮನಕ್ಕೆ ಟಾಂಗ್ ನೀಡಿದ್ದು ಹೀಗೆ- ಡ್ರಾಮಾ ಮಾಡೋದಕ್ಕೆ ರಾಹುಲ್ ಗಾಂಧಿ ನಾಳೆ ಪಂಜಾಬ್ಗೆ ಬರ್ತಿದ್ದಾಋಎ. ಕಾಂಗ್ರೆಸ್ ಪಕ್ಷ ಈ ಕೃಷಿ ಕಾನೂನಿನ ಬಗ್ಗೆ ಸಂವಾದ ಆರಂಭಿಸಿದೆ. ಇದೇ ಪಕ್ಷದವರು ತಮ್ಮ ಪ್ರಣಾಳಿಕೆಯಲ್ಲಿ ತಾವು ಅಧಿಕಾರಕ್ಕೆ ಬಂದರೆ ಖಾಸಗಿ ಮಂಡಿ ಆರಂಭಿಸುವುದಕ್ಕೆ ಅನುಕೂಲ ಮಾಡಿಕೊಡ್ತೇವೆ ಅಂತ ಹೇಳಿಕೊಂಡಿದ್ರು ಅನ್ನೋದನ್ನು ಮರೆಯಬೇಡಿ. (ಏಜೆನ್ಸೀಸ್)
ಬುರ್ಜ್ ಖಲೀಫಾ ಕಟ್ಟಡ ನಿರ್ಮಿಸಿದ್ದ ಕಂಪನಿ ದಿವಾಳಿ: ಸಾವಿರಾರು ಉದ್ಯೋಗಿಗಳು ಬೀದಿಗೆ!