More

    ರಾಗಿಣಿ ಪರ ವಕಾಲತ್ತು ವಹಿಸಲು ಮುಂಬೈನಿಂದ ಬಂದ ವಕೀಲರು; ಜಾಮೀನು ಅರ್ಜಿ ಸಲ್ಲಿಕೆ

    ಬೆಂಗಳೂರು: ಡ್ರಗ್ಸ್ ದಂಧೆ ಪ್ರಕರಣದಲ್ಲಿ ಆರೋಪಿಯಾಗಿ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ಇಂದು ಮತ್ತೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

    ಮುಂಬೈನಿಂದ ಬೇರೆ ವಕೀಲರು ರಾಗಿಣಿ ಪರ ವಕಾಲತ್ತು ವಹಿಸಲು ಆಗಮಿಸಿದ್ದು, ಅವರ ಮೂಲಕ ಇಂದು ಜಾಮೀನು ಅರ್ಜಿ ಸಲ್ಲಿಸಲಾಗಿದೆ.

    ಈ ಹಿಂದೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನನ್ನು ಮೊನ್ನೆ ವಕೀಲ ಸುದರ್ಶನ್​ ದ್ವಿವೇದಿ ವಾಪಸ್​ ಪಡೆದಿದ್ದರು. ಹಾಗೇ ರಾಗಿಣಿಯವರ ತಂದೆಯ ಸೂಚನೆಯ ಮೇರೆಗೆ ಅರ್ಜಿಯನ್ನು ವಾಪಸ್​ ಪಡೆಯಲಾಗಿದೆ. ರಾಗಿಣಿ ಪರ ವಕಾಲತ್ತು ವಹಿಸಲು ಮುಂಬೈನಿಂದ ಬೇರೆ ವಕೀಲರು ಬರಲಿದ್ದಾರೆ ಎಂಬುದನ್ನೂ ತಿಳಿಸಿದ್ದರು. ನಾಳೆ ಸಿಸಿಎಚ್​ 33ನೇ ಕೋರ್ಟ್​ನಲ್ಲಿ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಇದನ್ನೂ ಓದಿ: PHOTOS: ‘ರಾಣಿ ಚನ್ನಮ್ಮ’ನ ಮುಖವನ್ನೇ ಮುಚ್ಚಿಬಿಟ್ಟ ‘ಹೆಜ್ಜೇನು’; ಫೋಟೋಕ್ಕೆ ಮುಗಿಬೀಳುತ್ತಿರುವ ಜನರು

    ಇನ್ನು ಸ್ಯಾಂಡಲ್​ವುಡ್​ ಡ್ರಗ್​​ ಲಿಂಕ್​ ಪ್ರಕರಣದ ಐದನೇ ಆರೋಪಿಯಾಗಿರುವ ವೈಭವ್​ ಜೈನ್​ ಕೂಡ ತಮ್ಮ ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ವೈಭವ್​ ಸದ್ಯ ತಲೆಮರೆಸಿಕೊಂಡಿದ್ದಾರೆ. ಅರೆಸ್ಟ್​ ಆಗುವ ಮೊದಲೇ ಜಾಮೀನು ಪಡೆಯುವ ದೃಷ್ಟಿಯಿಂದ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆಯೂ ನಾಳೆ ಸಿಸಿಎಚ್​ 33ನೇ ಕೋರ್ಟ್​ನಲ್ಲಿ ನಡೆಯಲಿದೆ ಎನ್ನಲಾಗಿದೆ.(ದಿಗ್ವಿಜಯ ನ್ಯೂಸ್​)

    ತಾಯಿಗೆ ಹೆಣ್ಣುಮಕ್ಕಳ ಪೂರೈಕೆ ಮಾಡುತ್ತಿದ್ದ ಮಕ್ಕಳು- ಬೀದಿ ಬದಿಯೇ ಇವರ ಅಡ್ಡಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts