ಮುಂಬೈ: ಸಲ್ಮಾನ್ ಖಾನ್ ಚಿತ್ರಗಳೆಂದರೆ ಬರೀ ಅಭಿಮಾನಿಗಳಿಗಷ್ಟೇ ಅಲ್ಲ, ಚಿತ್ರಮಂದಿರದವರಿಗೂ ದೊಡ್ಡ ಹಬ್ಬ ಎಂದರೆ ತಪ್ಪಿಲ್ಲ. ಏಕೆಂದರೆ, ಸಲ್ಮಾನ್ ಅಭಿನಯದ ಚಿತ್ರಗಳು ಇಡೀ ದೇಶದಲ್ಲಿ 1000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದವು. ಮೊದಲ ದಿನದ ಕಲೆಕ್ಷನ್ ನೂರು ಕೋಟಿ ದಾಟಿರುತ್ತಿತ್ತು. ಆದರೆ, ರಾಧೇ ವಿಚಾರದಲ್ಲಿ ಅವೆಲ್ಲವೂ ಸುಳ್ಳಾಗಿದೆ.
ಇದನ್ನೂ ಓದಿ: ಜೀ಼ಕನ್ನಡದಲ್ಲಿ ವೀಕೆಂಡ್ ಮನರಂಜನೆ: “ಕಥಾಸಂಗಮ” ಹಾಗೂ “ರಾಮಾರ್ಜುನ” ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್
ರಾಧೇ ಚಿತ್ರವನ್ನು ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಬೇಕು ಎಂದು ಆರು ತಿಂಗಳುಗಳ ಹಿಂದೆಯೇ ಸಲ್ಮಾನ್ ಪ್ಲಾನ್ ಮಾಡಿಕೊಂಡಿದ್ದರು. ಅದರಂತೆ, ಡಿಸೆಂಬರ್ನಲ್ಲೇ ಈ ಚಿತ್ರವನ್ನು ಮೇ 13ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಆದರೆ, ಕ್ರಮೇಣ ಬಿಡುಗಡೆಯ ದಿನಾಂಕ ಹತ್ತಿರ ಬರುತ್ತಿದ್ದಂತೆಯೇ ಕರೊನಾ ಎರಡನೇ ಅಲೆ ಪ್ರಾರಂಭವಾಗಿ ಒಂದೊಂದೇ ರಾಜ್ಯದಲ್ಲಿ ಲಾಕ್ಡೌನ್ ಹೇರಲಾಯಿತು. ಇದೀಗ ಇಡೀ ದೇಶದಲ್ಲಿ ತ್ರಿಪುರಾದಲ್ಲಿ ಮಾತ್ರ ಲಾಕ್ಡೌನ್ ಇಲ್ಲದಿರುವುದರಿಂದ, ಅಲ್ಲಿನ ಮೂರು ಚಿತ್ರಮಂದಿರಗಳಲ್ಲಿ ಮಾತ್ರ ಚಿತ್ರ ಬಿಡುಗಡೆಯಾಗುತ್ತಿದೆ.
ಹೌದು, ಇಡೀ ದೇಶದಲ್ಲಿ ಕೇವಲ ಮೂರು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಅಗರ್ತಾಲದ ಎಸ್ಎಸ್ಆರ್ ರೂಪಸಿ ಮತ್ತು ಬಾಲಕ ಚಿತ್ರಮಂದಿರಗಳಲ್ಲದೆ, ಧರ್ಮನಗರದ ಎಸ್ಎಸ್ಆರ್ ಧರ್ಮನಗರ್ ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ. ಈ ಕುರಿತು ಮಾತನಾಡಿರುವ ಎಸ್ಎಸ್ಆರ್ ಸಿನಿಮಾದ ಸಿಇಓ ಆಗಿರುವ ಸತದೀಪ್ ಸಹಾ, ರಾಧೇ ಚಿತ್ರವನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡಿ, ಓಟಿಟಿಯಲ್ಲಿ ಬೇಡ ಎಂದು ಮೊದಲು ಮನವಿ ಮಾಡಿದವನೇ ನಾನು. ನನ್ನ ಮೂರು ಚಿತ್ರಮಂದಿರಗಳಲ್ಲೂ ಚಿತ್ರ ಬಿಡುಗಡೆ ಮಾಡುವುದಾಗಿ ಪ್ರಾಮಿಸ್ ಮಾಡಿದ್ದೆ. ಅದರಂತೆ ನನ್ನ ಪ್ರಾಮಿಸ್ ಉಳಿಸಿಕೊಂಡಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ತ್ರಿಪುರಾ ರಾಜ್ಯದಲ್ಲಿ ಲಾಕ್ಡೌನ್ ಇಲ್ಲದಿದ್ದರೂ ನೈಟ್ ಕರ್ಫ್ಯೂ ಇದೆ. ಹಾಗಾಗಿ, ಆರು ಗಂಟೆಯ ಹೊತ್ತಿಗೆ ಚಿತ್ರಮಂದಿರ ಬಂದ್ ಮಾಡಬೇಕಿರುವುದರಿಂದ, ಮೂರು ಗಂಟೆಯ ಪ್ರದರ್ಶನವೇ ಕೊನೆಯಾಗಲಿದೆ. ಮೂರು ಚಿತ್ರಮಂದಿರಗಳಿಂದ ಮೂರು ಪ್ರದರ್ಶನ ಎಂದಿಟ್ಟುಕೊಂಡರೂ, ಕೇವಲ 9 ಪ್ರದರ್ಶನಗಳು ಈ ಚಿತ್ರ ಕಾಣಲಿದೆ.
ಇದನ್ನೂ ಓದಿ: ತಮಿಳುನಾಡು ಸರ್ಕಾರಕ್ಕೆ 1 ಕೋಟಿ ರೂಪಾಯಿ ನೀಡಿದ ನಟ ಸೂರ್ಯ ಮತ್ತು ಸಹೋದರ ಕಾರ್ತಿ!
ಬಾಕ್ಸ್ಆಫೀಸ್ ವಿಚಾರಕ್ಕೆ ಬಂದರೆ, ತಮ್ಮ ಚಿತ್ರಗಳಲ್ಲೇ ಅತ್ಯಂತ ಕಡಿಮೆ ಕಲೆಕ್ಷನ್ ಮಾಡುವ ಚಿತ್ರ ಎಂದರೆ ಅದು “ರಾಧೇ’ ಎಂದು ಸಲ್ಮಾನ್ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, 10ರಿಂದ 15 ಕೋಟಿ ಕಲೆಕ್ಷನ್ ಮಾಡುವುದು ಸಂಶಯ ಎಂದು ಹೇಳಿದ್ದರು. ಅದರಂತೆ, ಚಿತ್ರವು ಸಲ್ಮಾನ್ ಖಾನ್ ಕೆರಿಯರ್ನಲ್ಲೇ ಅತೀ ಕಡಿಮೆ ಗಳಿಗೆ ಮಾಡಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೊನೆಗೂ ಅಣ್ಣಾತ್ತೆ ಚಿತ್ರೀಕರಣ ಮುಗಿಸಿ ಚೆನ್ನೈಗೆ ವಾಪಸ್ಸಾದ ರಜನಿಕಾಂತ್