More

    ಮತ್ತೆ ಮುಖ ಮುಚ್ಚಿಕೊಂಡು ಡಿಂಪಲ್ ಕ್ವೀನ್ ರಚಿತಾ ಭೇಟಿಯಾದ ಸ್ನೇಹಿತ ಯಾರು?

    ಬೆಂಗಳೂರು: ಸೆಲೆಬ್ರಿಟಿಗಳು ಜನರ ಮಧ್ಯೆ ಸಾಮಾನ್ಯರಂತೆ ಒಡಾಡಲು ಸಿಕ್ಕಾಪಟ್ಟೆ ಪರದಾಡುತ್ತಾರೆ. ಯಾಕೆಂದರೆ, ಸೆಲೆಬ್ರಿಟಿಗಳನ್ನು ಕಂಡ ಕೂಡಲೆ ಅಭಿಮಾನಿಗಳು ಫೋಟೋ, ಸೆಲ್ಫಿ ಅಂತ ಮುಗಿಬಿಳುತ್ತಾರೆ. ನಟಿಮಣಿಯರನ್ನು ಕಂಡರಂತೂ ಕಲೆವು ಕಿಡಿಗೇಡಿಗಳು ತಪ್ಪಾಗಿ ವರ್ತಿಸುತ್ತಾರೆ. ಇದೆಲ್ಲವನ್ನೂ ತಪ್ಪಿಸಿಕೊಂಡು ತಿರುಗಾಡಲು ನಟ ಮತ್ತು ನಟಿಯರು ಮುಖ ಮುಚ್ಚಿಕೊಂಡು ಒಡಾಡುವುದು ಇತ್ತೀಚೆಗೆ ಸಹಜವಾಗಿ ಬಿಟ್ಟಿದೆ. ಹಾಗೆಯೇ, ನಟಿ ರಚಿತಾ ರಾಮ್ ಕೂಡ ಹೀಗೆ. ಈ ಹಿಂದೆ ಕೆಲವು ಬಾರಿ ಮಾಡಿದ್ದಾರೆ. ಇದೀಗ, ಮತ್ತೊಮ್ಮ ನಟಿ ರಚಿತಾ ರಾಮ್ ಅವರು ಮುಖಕ್ಕೆ ಬುರ್ಖದಂತಹ ಕಪ್ಪು ಬಟ್ಟೆಯನ್ನು ಕಟ್ಟಿಕೊಂಡು ಬೆಳ್ಳಂಬೆಳಗ್ಗೆ ಹಲವು ಕಡೆ ಒಡಾಡಿದ್ದಾರೆ.
    ಹೌದು, ಈ ಹಿಂದೆ ಸಿನಿಮಾ ಒಂದಕ್ಕೆ ಕಾಸ್ಟ್ಯೂಂ ಖರೀದಿಸಲು ಅಂತ ಹೀಗೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್​ನಲ್ಲಿ ಬಟ್ಟೆ ಅಂಗಡಿಗಳಲ್ಲಿ ಅಡ್ಡಾಡಿದರು. ಆದರೆ, ಈ ಬಾರಿ ನಮ್ಮ ಡಿಂಪಲ್ ಕ್ವೀನ್ ಮುಖಕ್ಕೆ ಬಟ್ಟೆಕಟ್ಟಿಕೊಂಡು ಶಾಪಿಂಗ್​ಗೆ ಹೋಗಿಲ್ಲ. ಬದಲಿಗೆ, ತನ್ನ ಸ್ನೇಹಿತನನ್ನು ಭೇಟಿ ಮಾಡಲು ಹೋಗಿದ್ದಾರೆ. ಅಂದಹಾಗೆ, ನಟಿ ರಚಿತಾ ರಾಮ್ ಆಂಜನೇಯ ಸ್ವಾಮಿಯ ಭಕ್ತರು. ಹಾಗಾಗಿ, ಜನವರಿ 18 ರಂದು, ಅಂದರೆ ಮಂಗಳವಾರ ಬೆಳಗ್ಗೆ ಅವರ ಸ್ನೇಹಿತ ಮತ್ತು ನಿರ್ದೇಶಕರಾದ ಮಯೂರ್ ರಾಘವೇಂದ್ರ ಜೊತೆಗೆ ಬೆಂಗಳೂರಿನಲ್ಲಿನ ಒಂದು ಆಂಜನೇಯನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ನಂತರ ಅಲ್ಲಿ ಒಂದು ಸೆಲ್ಫಿ ತೆಗೆಸಿಕೊಂಡರು.
    ಬಳಿಕ, ನಟಿ ರಚಿತಾ ರಾಮ್ ಪ್ರತ್ಯಕ್ಷವಾಗಿದ್ದು ಬೆಂಗಳೂರಿನ ಫೇಮಸ್ ಹೋಟೆಲ್ ಆದ ವಿದ್ಯಾರ್ಥಿ ಭವನದಲ್ಲಿ. ಸ್ನೇಹಿತನ ಜೊತೆ ಕೂತು ಮಸಾಲಾ ದೋಸೆ ಸವಿದಿದ್ದಾರೆ. ಇನ್ನು, ಅವರು ಇಬ್ಬರೂ ಒಟ್ಟಿಗೆ ಕೂತು ದೋಸೆ ತಿನ್ನುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ, ನಟಿಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನು, ಕೆಲಸದ ವಿಚಾರಕ್ಕೆ ಬಂದರೆ ನಟಿ ರಚಿತಾ ರಾಮ್ ಕೈಯಲ್ಲಿ ಬರೋಬ್ಬರಿ 14 ಸಿನಿಮಾಗಳು ಇವೆ. ಸಾಲು ಸಾಲು ಸಿನಿಮಾಗಳಲ್ಲಿ ರಚ್ಚು ಮಿಂಚಲು ರೆಡಿಯಾಗಿದ್ದಾರೆ

    ಮತ್ತೆ ಮುಖ ಮುಚ್ಚಿಕೊಂಡು ಡಿಂಪಲ್ ಕ್ವೀನ್ ರಚಿತಾ ಭೇಟಿಯಾದ ಸ್ನೇಹಿತ ಯಾರು?

    ಅಳಿಯ ಹೀರೋ ಆಗುವುದು ಚಿರಂಜೀವಿಗೆ ಇಷ್ಟವಿಲ್ಲ? ಮೆಗಾ ಸ್ಟಾರ್ ಪುತ್ರಿ ಶ್ರೀಜಾ ವಿಚ್ಛೇದನ?

    ಹಳದಿ, ಗುಲಾಬಿ ಬಿಕಿನಿಯಲ್ಲಿ ಮಿಂಚಿದ ಜಾನ್ವಿ ಕಪೂರ್! ಇನ್​ಸ್ಟಾಗ್ರಾಂನಲ್ಲಿ ಧೂಳೆಬ್ಬಿಸಿವೆ ಶ್ರೀದೇವಿ ಪುತ್ರಿಯ ಫೋಟೋಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts