More

    ಕೆಲವು ಪಾತ್ರಗಳನ್ನು ಯಾವತ್ತೂ ಬದಲಾಯಿಸುವುದಕ್ಕೆ ಸಾಧ್ಯವಿಲ್ಲ!

    ಚಿರಂಜೀವಿ ಸರ್ಜಾ ಕೊನೆಯದಾಗಿ ಒಪ್ಪಿಕೊಂಡ ಚಿತ್ರವೆಂದರೆ, ಅದು ಏಪ್ರಿಲ್​. ಲಾಕ್​ಡೌನ್​ ಆಗುವುದಕ್ಕೂ ಕೆಲವೇ ದಿನಗಳ ಹಿಂದೆ ಚಿತ್ರದ ಮುಹೂರ್ತವಾಗಿತ್ತು. ಬಹುಶಃ ಲಾಕ್​ಡೌನ್​ ಇಲ್ಲದಿದ್ದರೆ, ಈ ಚಿತ್ರದ ಚಿತ್ರೀಕರಣ ಇಷ್ಟರಲ್ಲಿ ಮುಗಿಯುತಿತ್ತೋ ಏನೋ?

    ಇದನ್ನೂ ಓದಿ: Photos: ಫುಟ್ಬಾಲರ್​ ಆದ್ರು ಸಿಂಧೂ ಲೋಕನಾಥ್​

    ಈಗ್ಯಾಕೆ ಈ ಚಿತ್ರದ ವಿಷಯವೆಂದರೆ, ಚಿತ್ರದ ಫೋಟೋ ಶೂಟ್​ ಸಂದರ್ಭದಲ್ಲಿ ತೆಗೆದ ಫೋಟೋವೊಂದನ್ನು ರಚಿತಾ ರಾಮ್​ ಶೇರ್​ ಮಾಡಿದ್ದಾರೆ. ಇದು ಸುಮಾರು ಎರಡು ವರ್ಷಗಳ ಹಿಂದಿನ ಫೋಟೋ. ಈ ಫೋಟೋ ಶೇರ್​ ಮಾಡಿಕೊಳ್ಳುವುದರ ಜತೆಗೆ, ಕೆಲವು ಪಾತ್ರಗಳನ್ನು ಯಾವತ್ತೂ ಬದಲಾಯಿಸುವುದಕ್ಕೆ ಸಾಧ್ಯವಿಲ್ಲ ಎಂದು ಅವರು ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಏಪ್ರಿಲ್​ ಚಿತ್ರದ ಬಗ್ಗೆ ಮೊದಲು ಸುದ್ದಿಯಾಗಿದ್ದು ಸುಮಾರು ಎರಡು ವರ್ಷಗಳ ಹಿಂದೆ. ಆಗಿನ್ನೂ ನಿಖಿಲ್​ ಕುಮಾರ್​ ಮತ್ತು ರಚಿತಾ ರಾಮ್​ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರದ ಚಿತ್ರೀಕರಣ ನಡೆದಿತ್ತು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ರಚಿತಾ ರಾಮ್​, ಇದೊಂದು ನಾಯಕಿ ಪ್ರಧಾನ ಚಿತ್ರ ಎಂದು ಹೇಳಿಕೊಂಡಿದ್ದರು. ಏಪ್ರಿಲ್​ ಡಿಸೋಜಾ ಎಂಬ ಯುವತಿಯ ಜೀವನದಲ್ಲಾಗುವ ಕೆಲವು ಘಟನೆಗಳೇ ಈ ಚಿತ್ರದ ಕಥೆ ಎಂದಿದ್ದರು. ಚಿತ್ರದ ಫೋಟೋ ಶೂಟ್​ನಲ್ಲಿ ಭಾಗವಹಿಸಿದ್ದ ಅವರು, ತಮ್ಮ ಪಾತ್ರದ ಬಗ್ಗೆ ಥ್ರಿಲ್​ ಆಗಿ ಮಾತನಾಡಿದ್ದರು.

    ಆ ನಂತರ, ಸುಮಾರು ಒಂದು ವರ್ಷ ಚಿತ್ರದ ಬಗ್ಗೆ ಸುದ್ದಿಯೇ ಇರಲಿಲ್ಲ. ಕ್ರಮೇಣ, ಏಪ್ರಿಲ್​ ಚಿತ್ರವು ಹಲವು ಬದಲಾವಣೆಗಳಿಗೆ ಸಾಕ್ಷಿಯಾದವು. ನಾಯಕನ ಪಾತ್ರಕ್ಕೆ ಚಿರಂಜೀವಿ ಬಂದರು. ಇನ್ನೇನು ಚಿತ್ರದ ಮುಹೂರ್ತವಾಗಿ, ಚಿತ್ರೀಕರಣ ಪ್ರಾರಂಭವಾಗುವಷ್ಟರಲ್ಲೇ, ಲಾಕ್​ಡೌನ್​​ನಿಂದಾಗಿ ಚಿತ್ರತಂಡದ ಯೋಚನೆಗಳೆಲ್ಲಾ ತಲೆಕೆಳಗಾದವು. ಈಗ ಚಿತ್ರ ಹೇಗೆ ಮುಂದುವರೆಯುತ್ತದೆ ಮತ್ತು ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂದು ಚಿತ್ರತಂಡ ಇನ್ನಷ್ಟೇ ಅಧಿಕೃತವಾಗಿ ಹೇಳಬೇಕಿದೆ.

    ಇದನ್ನೂ ಓದಿ: ತಮಿಳಿನ ಖ್ಯಾತ ನಟನೊಂದಿಗೆ ಕೆಜಿಎಫ್​ ಬೆಡಗಿ ಶ್ರೀನಿಧಿ ಶೆಟ್ಟಿ ನಿಶ್ಚಿತಾರ್ಥ!

    ಚಿತ್ರದಲ್ಲಿ ಚಿರು ಇನ್ನೂ ನಟಿಸಿರಲಿಲ್ಲವಾದ್ದರಿಂದ ಆ ಪಾತ್ರಕ್ಕೆ ಬೇರೆ ಯಾರನ್ನಾದರೂ ಆಯ್ಕೆ ಮಾಡಲಾಗುತ್ತದಾ? ಅಥವಾ ಹೊಸ ಬದಲಾವಣೆಗಳನ್ನು ಕೈಬಿಟ್ಟು ಮುಂಚೆ ಮಾಡಿಕೊಂಡಿದ್ದ ಕಥೆಯನ್ನೇ ಸಿನಿಮಾ ಮಾಡಲಾಗುತ್ತದಾ? ಎಂಬ ಬಗ್ಗೆ ಇನ್ನಷ್ಟೇ ಸ್ಪಷ್ಟತೆ ಸಿಗಬೇಕಿದೆ.

    ಆಸ್ಟ್ರಿಯಾ ಚಿತ್ರೋತ್ಸವಕ್ಕೆ ಅಮೃತಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts