More

    ‘ಕಸ್ತೂರಿ ನಿವಾಸ’ ಕೈಬಿಟ್ಟ ರಚಿತಾ ರಾಮ್

    ಬೆಂಗಳೂರು: ಶೀರ್ಷಿಕೆ ಮೂಲಕವೇ ‘ಕಸ್ತೂರಿ ನಿವಾಸ’ ಚಿತ್ರ ಸಾಕಷ್ಟು ಸುದ್ದಿಯಾಗಿತ್ತು. ಡಾ. ರಾಜ್ ನಟಿಸಿರುವ ಕ್ಲಾಸಿಕ್ ಸಿನಿಮಾದ ಶೀರ್ಷಿಕೆ ಮರುಬಳಕೆ ಬೇಡ ಎಂದು ಅಭಿಮಾನಿಗಳು ಕೋರಿದ್ದರು. ಬಳಿಕ ಅದು ‘ಕಸ್ತೂರಿ ಮಹಲ್’ ಎಂದು ಬದಲಾಗಿತ್ತು. ಇದೀಗ ಬ್ರೇಕಿಂಗ್ ಸುದ್ದಿ ಏನೆಂದರೆ, ಡಿಂಪಲ್ ಕ್ವೀನ್ ರಚಿತಾ ರಾಮ್ ಈ ಸಿನಿಮಾದಿಂದಲೇ ಹೊರ ನಡೆದಿದ್ದಾರೆ! ಹಿರಿಯ ನಿರ್ದೇಶಕ ದಿನೇಶ್ ಬಾಬು ಕಳೆದ ತಿಂಗಳಷ್ಟೇ ‘ಕಸ್ತೂರಿ..’ ಚಿತ್ರದ ಅದ್ದೂರಿ ಮುಹೂರ್ತ ನೆರವೇರಿಸಿಕೊಂಡಿದ್ದರು. ಇನ್ನೇನು ಅಕ್ಟೋಬರ್ ಆರಂಭದಿಂದ ಚಿತ್ರೀಕರಣಕ್ಕೂ ಯೋಜನೆ ಸಿದ್ಧವಾಗಿತ್ತು. ಇದೀಗ ನಾಯಕಿಯ ಈ ನಿರ್ಧಾರದಿಂದ ಚಿತ್ರತಂಡ ಕೊಂಚ ಗೊಂದಲಕ್ಕೊಳಗಾಗಿದ್ದು, ಬೇರೆ ನಟಿಯ ಹುಡುಕಾಟವನ್ನೂ ನಡೆಸಿದ್ದಾರೆ. ‘ಇದ್ದಕ್ಕಿದ್ದಂತೆ ನಿರ್ವಪಕರಿಗೆ ನಾನು ಈ ಸಿನಿಮಾದಲ್ಲಿ ನಟಿಸಲ್ಲ ಎಂದು ಸಂದೇಶ ಕಳುಹಿಸಿದ್ದರು. ಹಾಗಾಗಿ ನಾವು ಹೆಚ್ಚೇನೂ ಕೇಳಲಿಲ್ಲ.ಈಗಾಗಲೇ ಇನ್ನುಳಿದ ಕಲಾವಿದರ ದಿನಾಂಕವನ್ನು ಪಡೆದಿದ್ದೇವೆ. ಅ. 5ರಿಂದ ಚಿತ್ರೀಕರಣ ಶುರುವಾಗಲಿದೆ. ಅಷ್ಟರೊಳಗೆ ಹೊಸ ನಾಯಕಿಯನ್ನು ಆಯ್ದುಕೊಳ್ಳಲಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ದಿನೇಶ್ ಬಾಬು. ಹಾರರ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರಲಿರುವ ‘ಕಸ್ತೂರಿ ಮಹಲ್’, ನಿರ್ದೇಶಕ ದಿನೇಶ್ ಅವರ 50ನೇ ಸಿನಿಮಾ. ಶ್ರೀ ಭವಾನಿ ಆರ್ಟ್ಸ್ ಮತ್ತು ರುಬಿನ್ ರಾಜ್ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಈ ಸಿನಿಮಾ ನಿರ್ವಣವಾಗಲಿದೆ.

    ಸಿನಿಮಾದಿಂದ ಏಕೆ ಹೊರನಡೆದರು ಎಂಬುದಕ್ಕೆ ಅಸ್ಪಷ್ಟವಾದ ಕಾರಣ ನೀಡಿದ್ದಾರೆ. ಸದ್ಯಕ್ಕೆ ಹೊಸ ನಟಿಯ ಹುಡುಕಾಟದ ಕೆಲಸ ಶುರುವಾಗಿದೆ. ಏನೇ ಆದರೂ, ಅ.5ಕ್ಕೆ ಚಿತ್ರೀಕರಣ ಶುರುವಾಗಲಿದೆ.

    | ದಿನೇಶ್ ಬಾಬು ನಿರ್ದೇಶಕ

    ‘ಥಟ್ಟನೆ ಗುಪ್ತಾಂಗ ತೋರಿಸಿದ್ದಾರೆ …ಬಲವಂತ ಮಾಡಿದ್ದಾರೆ’: ದೊಡ್ಡ ನಟರ ವಿರುದ್ಧ ಕಂಗನಾ ಆರೋಪ

    ಐಪಿಎಲ್ ಮೊದಲ ಪಂದ್ಯದಲ್ಲೇ ವಿಶೇಷ ದಾಖಲೆ ಬರೆದ ಧೋನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts