More

    ಮೆಚ್ಚಿದ ಹುಡುಗಿಗಾಗಿ ಆಕೆಯ ಊರಿಗೆ ಹೋದ ಯುವಕನಿಂದ ನಡೆಯಿತು ಬೆಚ್ಚಿಬೀಳಿಸುವ ಕೃತ್ಯ!

    ಕಡಪ: ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಪಾಗಲ್​ ಪ್ರೇಮಿಯೊಬ್ಬ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆತಂಕಕಾರಿ ಘಟನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಬಡವೇಲು ವಲಯದಲ್ಲಿ ನಡೆದಿದೆ.

    ಬಡವೇಲು ವಲಯದ ಚಿಂತಲ ಚೆರುವು ಗ್ರಾಮದ ನಿವಾಸಿ ಸುಬ್ಬಯ್ಯರ 18 ವರ್ಷದ ಮಗಳು ಸಿರಿಷಾ, ಬ್ಯಾಡ್​ವೆಲ್​ ವೀರರೆಡ್ಡಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಚರಣ್​ ಎಂಬಾತ ಸಿರಿಷಾಳನ್ನು ಸದಾ ಹಿಂಬಾಲಿಸುತ್ತಾ ಪ್ರೀತಿ ಮಾಡುವಂತೆ ದುಂಬಾಲು ಬಿದಿದ್ದ. ಕರೊನಾ ಹಿನ್ನೆಲೆಯಲ್ಲಿ ಸಿರಿಷಾ ಸದ್ಯ ಮನೆಯಲ್ಲಿಯೇ ಉಳಿದಿದ್ದಳು.

    ಹೀಗಿರುವಾಗ ಚರಣ್​, ಸಿರಿಷಾಳ ಗ್ರಾಮಕ್ಕೆ ತೆರಳಿ ಪ್ರೀತಿಸುವಂತೆ ಒತ್ತಾಯ ಮಾಡಿದ್ದ. ಆದರೆ, ಆಕೆ ತಿರಸ್ಕರಿಸಿದಾಗ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಆಕೆ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾಳೆ.

    ಇದನ್ನು ನೋಡಿದ ಗ್ರಾಮಸ್ಥರು ಚರಣ್​ನನ್ನು ಹಿಡಿದು, ಮರಕ್ಕೆ ಕಟ್ಟಿ, ಚೆನ್ನಾಗಿ ಥಳಿಸಿದ್ದಾರೆ. ಬಳಿಕ ಆತ ಮೂರ್ಛೆ ಹೋದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪೊಲೀಸರು ಚರಣ್​ನನ್ನು ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ಸತ್ತು ಮಲಗಿದ್ದವ ಕರುಳ ಕೂಗಿಗೆ ಓಗೊಟ್ಟು ಮತ್ತೆ ಬದುಕಿದ! ಅಂತ್ಯಸಂಸ್ಕಾರ ವೇಳೆ ನಡೆದ ಪವಾಡ ಕೇಳಿದ್ರೆ ಶಾಕ್​ ಆಗ್ತೀರಿ

    ‘ಬಿಗ್ ಬಾಸ್’ ಸ್ವಲ್ಪ ಮುಂದಕ್ಕೆ … ಮುಂದಿನ ವಾರದ ಮಧ್ಯದಲ್ಲಿ ಪ್ರಾರಂಭ

    ಇಂಡಿಯನ್​ ಟೆಲಿವಿಷನ್​ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಬಿಗ್​ಬಾಸ್​ 8ನೇ ಆವೃತ್ತಿ!

    ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ಕೋಕಾಕೋಲಾ ಬಾಟಲಿ ಬದಿಗೆ ಸರಿಸಲಿಲ್ಲವೆಂದು ಬೇಸರಿಸಿದ ಫ್ಯಾನ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts