ಕಡಪ: ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆತಂಕಕಾರಿ ಘಟನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಬಡವೇಲು ವಲಯದಲ್ಲಿ ನಡೆದಿದೆ.
ಬಡವೇಲು ವಲಯದ ಚಿಂತಲ ಚೆರುವು ಗ್ರಾಮದ ನಿವಾಸಿ ಸುಬ್ಬಯ್ಯರ 18 ವರ್ಷದ ಮಗಳು ಸಿರಿಷಾ, ಬ್ಯಾಡ್ವೆಲ್ ವೀರರೆಡ್ಡಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಚರಣ್ ಎಂಬಾತ ಸಿರಿಷಾಳನ್ನು ಸದಾ ಹಿಂಬಾಲಿಸುತ್ತಾ ಪ್ರೀತಿ ಮಾಡುವಂತೆ ದುಂಬಾಲು ಬಿದಿದ್ದ. ಕರೊನಾ ಹಿನ್ನೆಲೆಯಲ್ಲಿ ಸಿರಿಷಾ ಸದ್ಯ ಮನೆಯಲ್ಲಿಯೇ ಉಳಿದಿದ್ದಳು.
ಹೀಗಿರುವಾಗ ಚರಣ್, ಸಿರಿಷಾಳ ಗ್ರಾಮಕ್ಕೆ ತೆರಳಿ ಪ್ರೀತಿಸುವಂತೆ ಒತ್ತಾಯ ಮಾಡಿದ್ದ. ಆದರೆ, ಆಕೆ ತಿರಸ್ಕರಿಸಿದಾಗ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಆಕೆ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾಳೆ.
ಇದನ್ನು ನೋಡಿದ ಗ್ರಾಮಸ್ಥರು ಚರಣ್ನನ್ನು ಹಿಡಿದು, ಮರಕ್ಕೆ ಕಟ್ಟಿ, ಚೆನ್ನಾಗಿ ಥಳಿಸಿದ್ದಾರೆ. ಬಳಿಕ ಆತ ಮೂರ್ಛೆ ಹೋದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪೊಲೀಸರು ಚರಣ್ನನ್ನು ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್)
ಸತ್ತು ಮಲಗಿದ್ದವ ಕರುಳ ಕೂಗಿಗೆ ಓಗೊಟ್ಟು ಮತ್ತೆ ಬದುಕಿದ! ಅಂತ್ಯಸಂಸ್ಕಾರ ವೇಳೆ ನಡೆದ ಪವಾಡ ಕೇಳಿದ್ರೆ ಶಾಕ್ ಆಗ್ತೀರಿ
‘ಬಿಗ್ ಬಾಸ್’ ಸ್ವಲ್ಪ ಮುಂದಕ್ಕೆ … ಮುಂದಿನ ವಾರದ ಮಧ್ಯದಲ್ಲಿ ಪ್ರಾರಂಭ
ಇಂಡಿಯನ್ ಟೆಲಿವಿಷನ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಬಿಗ್ಬಾಸ್ 8ನೇ ಆವೃತ್ತಿ!
ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ಕೋಕಾಕೋಲಾ ಬಾಟಲಿ ಬದಿಗೆ ಸರಿಸಲಿಲ್ಲವೆಂದು ಬೇಸರಿಸಿದ ಫ್ಯಾನ್ಸ್!