ತ್ರಿಸ್ಸೂರು: ಗಂಡನ ಕಾಲು ಕತ್ತರಿಸಿ ಆತನನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿದ್ದ ಮಹಿಳೆಯನ್ನು ಕೇರಳದ ನೆಡುಪುಳ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ನಯನಾ (30) ಎಂದು ಗುರುತಿಸಲಾಗಿದೆ. ಕೋರ್ಕೆಂಚೆರಿ ನಿವಾಸಿಯಾಗಿರುವ ಗಂಡ ಸಿ.ಪಿ. ಪ್ರಮೋದ್ನ ಮೇಲೆ ಹಲ್ಲೆ ಮಾಡಲು ಗ್ಯಾಂಗ್ ಒಂದಕ್ಕೆ ನಯನಾ ಸುಪಾರಿ ನೀಡಿದ್ದಳು. ಈ ಪ್ರಕರಣದಲ್ಲಿ ನಯನಾಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಜಾಮೀನು ನೀಡಲಾಗಿದೆ. ಆದರೆ, ಕೌಟುಂಬಿಕ ನ್ಯಾಯಾಲಯದಲ್ಲಿ ಆಕೆಯ ಮತ್ತು ಗಂಡನ ನಡುವೆ ಬಾಕಿ ಪ್ರಕರಣವಿದೆ.
ತನ್ನ ಗಂಡನ ಮೇಲೆ ಹಲ್ಲೆ ನಡೆಸಿ ಆತನಿಗೆ ವಿವಾಹೇತರ ಸಂಬಂಧವಿದೆ ಎಂದು ಬಿಂಬಿಸಲು ಹಾಗೂ ಆತನನ್ನು ಡ್ರಗ್ಸ್ ಕೇಸ್ನಲ್ಲಿ ಜೈಲಿನಲ್ಲಿ ಕೊಳೆಯುವಂತೆ ಮಾಡಲು ಗ್ಯಾಂಗ್ ಒಂದನ್ನು ನಯನಾ ಸಂಪರ್ಕಿಸಿದ್ದಳು. ಬಳಿಕ ಪ್ಲಾನ್ನಂತೆಯೇ ಗಂಡನ ಮೇಲೆ ಹಲ್ಲೆ ಮಾಡಿಸಿದ್ದಳು.
ನಯನಾಳ ಪತಿ ಪ್ರಮೋದ್, ಕಳೆದ ಏಪ್ರಿಲ್ನಲ್ಲಿ ಆಕೆಯ ವಿರುದ್ಧ ದೂರು ದಾಖಲಿಸಿದ್ದರು. ತನಿಖೆಯ ಸಮಯದಲ್ಲಿ ಪೊಲೀಸರಿಗೆ ಬಂದ ಸಂದೇಶವನ್ನು ಆಧರಿಸಿ ನಯನಾಳನ್ನು ಬಂಧಿಸಿ, ನ್ಯಾಯಲಯಕ್ಕೆ ಹಾಜರುಪಡಿಸಲಾಗಿತ್ತು. ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾಳೆ. (ಏಜೆನ್ಸೀಸ್)
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೊಬೈಲ್ ಫೋನ್ ಕದ್ದು ಬಳಸುತ್ತಿದ್ದ ಎಸ್ಐಗೆ ಬಿಗ್ ಶಾಕ್..!
Lakhimpur Kheri Case: ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ ಬಂಧನಕ್ಕೆ ಕಾರಣವಾದ ಪ್ರಮುಖ 3 ಅಂಶಗಳಿವು..!