More

    ಒಂದು ವಾರದ ಹಿಂದಷ್ಟೇ ಮದುವೆ ಆಗಿದ್ದ ಸಬ್​ ಇನ್ಸ್​​ಪೆಕ್ಟರ್​ ಹೊಸ ವರ್ಷದಂದೇ ದುರಂತ ಸಾವು!

    ಹೈದರಾಬಾದ್​: ಹೊಸ ವರ್ಷದಂದೇ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ದುರಂತ ಘಟನೆಯೊಂದು ನಡೆದಿದೆ. ರಸ್ತೆ ಅಪಘಾತದಲ್ಲಿ ಸಬ್​ ಇನ್ಸ್​ಪೆಕ್ಟರ್​ ಮತ್ತು ಅವರ ತಂದೆ ದಾರುಣವಾಗಿ ಮೃತಪಟ್ಟಿದ್ದಾರೆ. ಮೃತ ಎಸ್​ಐಗೆ ಒಂದು ವಾರದ ಹಿಂದಷ್ಟೇ ಮದುವೆ ಆಗಿತ್ತು.

    ತೆಲಂಗಾಣದ ಚಿಂತಪಲ್ಲಿ ಮಂಡಲದಲ್ಲಿ ಆರ್​ಟಿಸಿ ಬಸ್​ ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ. ಮೃತ ಎಸ್​ಐ ಅನ್ನು ನೆನವತ್​ ಶ್ರೀನು ನಾಯಕ್​ ಎಂದು ಗುರುತಿಸಲಾಗಿದೆ. ವಿಕರಾಬಾದ್​ನಲ್ಲಿ ಎಸ್​ಐ ಆಗಿದ್ದರು. ಅವರ ತಂದೆಯೂ ಕೂಡ ದುರ್ಮರಣಕ್ಕೀಡಾಗಿದ್ದಾರೆ.

    ಎಸ್​ಐ ಶ್ರೀನು ನಾಯಕ್​ ಒಂದು ವಾರದ ಹಿಂದಷ್ಟೇ ಮದುವೆ ಆಗಿದ್ದರು. ಇವರು ರಂಗಾರೆಡ್ಡಿ ಜಿಲ್ಲೆಯ ಮಡ್ಗುಲ ಮಂಡಲದ ಮಾನ್ಯಾ ತಾಂಡದ ನಿವಾಸಿ. ಹೈದರಾಬಾದ್​ನಿಂದ ದೇವರಕೊಂಡಕ್ಕೆ ಪ್ರಯಾಣಿಸುತ್ತಿದ್ದ ಆರ್​ಟಿಸಿ ಬಸ್​ ಎದುರಿಗೆ ಬಂದ ಆಟೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋ ಒಳಗೆ ಇದ್ದ ಎಸ್​ಐ ಮತ್ತು ಅವರ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಎಸ್​ಐ ತಮ್ಮ ತಂದೆ ಜತೆಗೆ ಆಟೋದಲ್ಲಿ ಮನೆಗೆ ಬರುತ್ತಿದ್ದರು ಎಂದು ತಿಳಿದುಬಂದಿದೆ.

    ಎಸ್​ಐ ಸಾವಿನಿಂದ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಮೃತನ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಎಸ್​ಐ ಅಕಾಲಿನ ನಿಧನಕ್ಕೆ ಸಹೋದ್ಯೋಗಿಗಳು ಕೂಡ ಕಂಬನಿ ಮಿಡಿದಿದ್ದಾರೆ. (ಏಜೆನ್ಸೀಸ್​)

    ದೇವರೊಂದಿಗೆ ದೇವರಾದ ಅಪ್ಪು! ಲಕ್ಷ್ಮೀ ವಿಗ್ರಹದ ಜತೆಗೆ ನಗುವಿನ ಪರಮಾತ್ಮನಿಗೂ ಪೂಜೆ

    ಅಧ್ಯಕ್ಷನ ಸಹಿಯನ್ನೇ ಪೋರ್ಜರಿ ಮಾಡಿ 60 ಲಕ್ಷ ರೂಪಾಯಿ ಕಬಳಿಸಲು ಯತ್ನಿಸಿದ ಪಿಡಿಒ ಸಸ್ಪೆಂಡ್​

    12,000 ಎನ್​ಜಿಒಗಳ ವಿದೇಶಿ ದೇಣಿಗೆ ಕಟ್; ನಿಯಮ ಪಾಲಿಸದ ಕಾರಣ ಪರವಾನಗಿ ನವೀಕರಣ ಇಲ್ಲ, ಡಿ.31ರ ಗಡುವು ಮುಕ್ತಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts