ವಿಜಯನಗರ: ಮಾನಸಿಕ ಅಸ್ವಸ್ಥರು, ಭಿಕ್ಷುಕರನ್ನೂ ಕೀಳಾಗಿ ಕಾಣುವ ಕಾಲವಿದು, ಇಂತಹ ಸಮಯದಲ್ಲಿ ಇಲ್ಲೊಂದು ಯುವಕರ ಪಡೆ ಮಾನಸಿಕ ಅಸ್ವಸ್ಥನ ರೂಪವನ್ನೇ ಬದಲಿಸಿ ಮಾನವೀಯತೆ ಮೆರೆದಿದ್ದಾರೆ.
ಈ ಮೇಲಿನ ಫೋಟೋದಲ್ಲಿ ಕೊಳಕು ಬಟ್ಟೆ ಹಾಕಿಕೊಂಡು, ಉದ್ದನೇಯ ತಲೆ ಕೂದಲು ಹಾಗೂ ಮಾರುದ್ದ ಗಡ್ಡ ಬಿಟ್ಟುಕೊಂಡಿರುವ ವ್ಯಕ್ತಿಯ ಹೆಸರು ರಾಮಾಂಜನಿ, ಅಲಿಯಾಸ್ ರೆಂಡು ರೂಪಾಯಿಲ ರಾಮುಡು. ಆತ ಹೇಗೆ ಬದಲಾಗಿದ್ದಾನೆ ಎಂಬುದನ್ನು ಸಹ ನೀವು ಅದೇ ಪೋಟೋದಲ್ಲಿ ನೋಡಬಹುದಾಗಿದೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿಯ ಬಳಿ ಮೂರ್ನಾಲ್ಕು ವರ್ಷಗಳಿಂದ ನೆಲೆಸಿರುವ ಈ ರಾಮಾಂಜನೇಯ ಮಾನಸಿಕ ಅಸ್ವಸ್ಥ, ಹೈವೆ ಕೆಳಗಡೆ ಅಲ್ಲಿಲ್ಲಿ ವಾಸ ಮಾಡೋ ಈತ, ಹೊಟೇಲ್ಗಳಲ್ಲಿ ಕಾಡಿ, ಬೇಡಿ ಊಟ ಮಾಡುತ್ತಿದ್ದ.
ಈತನನ್ನು ಕಂಡ ಕಾನಾಹೊಸಳ್ಳಿಯ ಯುವಕರ ಗುಂಪು, ಇವನಿಗೆ ಕಟಿಂಗ್ ಮಾಡಿಸಿ, ಸ್ನಾನ ಮಾಡಿಸಿ, ಹೊಸ ಬಟ್ಟೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಮಾನಸಿಕ ಅಸ್ವಸ್ಥ ರಾಮಾಂಜನೇಯ ಆಂಧ್ರಪ್ರದೇಶದವನು ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್)
ಭೂಮಿ ಬೆಳಗಲಿದೆ ಕಪ್ಪು ಬಂಗಾರ; 1.50 ಲಕ್ಷ ಎರೆಹುಳು ತೊಟ್ಟಿಗಳ ನಿರ್ಮಾಣಕ್ಕೆ ಸರ್ಕಾರ ಸಂಕಲ್ಪ
ಬಿಗ್ಬಾಸ್ ಟ್ರೋಫಿ ಗೆಲ್ಲದಿರುವುದೇ ದಿವ್ಯಾ ಉರುಡುಗಗೆ ಅದೃಷ್ಟವಂತೆ: ಫ್ಯಾನ್ಸ್ ಕೊಟ್ಟ ಅಚ್ಚರಿಯ ಕಾರಣ ಇಲ್ಲಿದೆ..!
ಅನಗತ್ಯ ವೆಚ್ಚಕ್ಕೆ ಬ್ರೇಕ್: ಶೇ.5 ಕಡಿಮೆ ಮಾಡಲು ಸಿಎಂ ಬೊಮ್ಮಾಯಿ ಸೂಚನೆ