ಹೈದರಾಬಾದ್: ಸೆಲೆಬ್ರಿಟಿಗಳ ಮೇಲೆ ನುಡಿಯುವ ಭವಿಷ್ಯದಿಂದಲೇ ಜ್ಯೋತಿಷಿ ವೇಣು ಸ್ವಾಮಿ ತೆಲುಗಿನಲ್ಲಿ ಖ್ಯಾತರಾಗಿದ್ದಾರೆ. ಇವರ ಭವಿಷ್ಯವನ್ನು ಆರಂಭದಲ್ಲಿ ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಯಾವಾಗ ಟಾಲಿವುಡ್ನ ತಾರಾದಂಪತಿ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದು, ಇಬ್ಬರು ಬೇರೆಯಾದರೂ ಆಗ ವೇಣು ಅವರ ಭವಿಷ್ಯವನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಲು ಆರಂಭಿಸಿದ್ದಾರೆ.
ಪ್ರಖ್ಯಾತ ಸಿನಿಮಾ ಮತ್ತು ರಾಜಕೀಯ ಜ್ಯೋತಿಷಿ ವೇಣು ಸ್ವಾಮಿ ಅವರು ಮೂರು ವರ್ಷಗಳ ಹಿಂದೆಯೇ ಮಾಧ್ಯಮ ಸಂದರ್ಶನದಲ್ಲಿ ಸಮಂತಾ ಮತ್ತು ನಾಗಚೈತನ್ಯ ಮದುವೆಯನ್ನು ಪ್ರಸ್ತಾಪಿಸಿ, ಅವರಿಬ್ಬರ ಜಾತಕದ ಪ್ರಕಾರ ಮದುವೆ ನಂತರ ಮನಸ್ತಾಪ ಉಂಟಾಗಿ ಬೇರೆ ಬೇರೆ ಆಗಲಿದ್ದಾರೆ ಎಂದು ಹೇಳಿದ್ದರು. ಅದರಂತೆಯೇ ಸಮಂತಾ-ನಾಗಚೈತನ್ಯ ಬೇರೆಯಾಗಿದ್ದಾರೆ. ಇದರ ಬೆನ್ನಲ್ಲೇ ವೇಣು ಅವರು ನುಡಿದಿದ್ದ ಭವಿಷ್ಯದ ವಿಡಿಯೋ ತುಣುಕು ಇತ್ತೀಚೆಗಷ್ಟೇ ವೈರಲ್ ಆಗಿತ್ತು.
ಇದೀಗ ವೇಣು ಅವರು ಸೂಪರ್ಸ್ಟಾರ್ ಪ್ರಭಾಸ್ ಬಗ್ಗೆ ನುಡಿದಿರುವ ಭವಿಷ್ಯ ಅವರ ಅಭಿಮಾನಿಗಳನ್ನು ಕಂಗಾಲಾಗಿಸಿದೆ. ಪ್ರಭಾಸ್ ಅವರು ತಮ್ಮ ವೃತ್ತಿ ಜೀವನದಲ್ಲಿ ಅನೇಕ ಸವಾಲುಗಳು ಎದುರಾಗಲಿವೆಯಂತೆ. ಸಾಕಷ್ಟು ಸೋಲುಗಳನ್ನು ಅನುಭವಿಸಲಿದ್ದರಂತೆ. ದೊಡ್ಡ ದೊಡ್ಡ ಫ್ಲಾಪ್ ಸಿನಿಮಾಗಳು ಪ್ರಭಾಸ್ ಪಟ್ಟಿಗೆ ಸೇರಲಿದೆ. ಪ್ರಭಾಸ್ ಸಿನಿಮಾ ಮೇಲೆ ಬಂಡವಾಳ ಹೂಡುವ ಮುನ್ನ ನಿರ್ಮಾಪಕರು ಎರಡೆರಡು ಬಾರಿ ಚಿಂತಿಸುವ ಸಮಯ ಎದುರಾಗಲಿದೆ ಎಂಬ ಭವಿಷ್ಯವನ್ನು ಹೇಳಿದ್ದಾರೆ.
ವೇಣು ಸ್ವಾಮಿ ಅವರು ಭವಿಷ್ಯ ನುಡಿದಿರುವ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪ್ರಭಾಸ್ ಅಭಿಮಾನಿಗಳು ಈ ಬಗ್ಗೆ ಕಿಡಿಕಾರಿದ್ದಾರೆ. (ಏಜೆನ್ಸೀಸ್)
ಮೂರು ವರ್ಷಗಳ ಹಿಂದೆ ನುಡಿದಿದ್ದ ಭವಿಷ್ಯ ಸಮಂತಾ-ನಾಗಚೈತನ್ಯ ಜೀವನದಲ್ಲಿ ನಿಜವಾಗೋಯ್ತು..!
ಥೂ ಇದೆಂಥಾ ನೀಚ ಕೃತ್ಯ? ಒಂದೇ ದಿನದಲ್ಲಿ 17 ಮಂದಿಯ ಜತೆ 16ರ ಹುಡುಗಿಯ ಒತ್ತಾಯದ ಲೈಂಗಿಕ ಕ್ರಿಯೆ
ಪೆಟ್ರೋಲ್ ಬೆಲೆ ಏರಿಕೆ ಹಿಂದೆ ಕೇಂದ್ರ ಸರ್ಕಾರದ ಪಾತ್ರವಿಲ್ಲ, ಹಿಂದಿನ ಸರ್ಕಾರದ ತಪ್ಪು ನೀತಿ ಕಾರಣವೆಂದ ಡಿವಿಎಸ್