More

    ಪ್ರೀತಿಸಿದ ಯುವಕರಿಬ್ಬರು​ ಕೊಟ್ಟ ಶಾಕ್​ಗೆ ಬಾಳಿ ಬದುಕಬೇಕಿದ್ದ ಯುವತಿಯರಿಬ್ಬರ ಜೀವನ ದುರಂತದಲ್ಲಿ ಅಂತ್ಯ..!

    ಪೆದ್ದಪಲ್ಲಿ: ತೆಲಂಗಾಣದಲ್ಲಿ ನಡೆದಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪ್ರೇಮ ವೈಫಲ್ಯದಿಂದ ಇಬ್ಬರು ಯುವತಿಯರು ಸಾವಿನ ಹಾದಿ ಹಿಡಿದಿದ್ದಾರೆ. ಮೂರು ವರ್ಷ ಪ್ರೀತಿ ಮಾಡಿದ ಪ್ರಿಯಕರ ಕೊನೆಗೆ ಬೇರೊಂದು ಯುವತಿಯ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೆದ್ದಪಲ್ಲಿ ಜಿಲ್ಲೆಯ ಒಡೆಲ್ಲಾ ವಲಯದಲ್ಲಿ ಬರುವ ಪೊಟ್ಕಪಲ್ಲಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದರೆ, ಎರಡು ವರ್ಷದಿಂದ ಪ್ರೀತಿಸಿದ ಪ್ರಿಯಕರ ಬೇರೆ ಮದುವೆ ಆಗಲು ಬಯಸಿದ್ದಕ್ಕೆ ಮತ್ತೊರ್ವ ಯುವತಿಯು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆದಿಲ್​ಬಾದ್​ನ ಅಂಕಪುರ್​ ವಲಯದಲ್ಲಿ ನಡೆದಿದೆ.

    ಮೃತ ಯುವತಿಯರನ್ನು ಪ್ರಸನ್ನಾ (21) ಮತ್ತು ಮರ್ಸುಕೋಲ ಗಂಗುಬಾಯ್​ (18) ಎಂದು ಗುರುತಿಸಲಾಗಿದೆ. ಇಬ್ಬರು ಕೂಡ ಪ್ರೇಮ ವೈಫಲ್ಯದಿಂದ ಕ್ರಿಮಿನಾಶಕ ಸೇವಿಸಿ ಸಾವಿನ ಹಾದಿ ಹಿಡಿದಿದ್ದಾರೆ.

    ಪೊಟ್ಕಪಲ್ಲಿ ಪೊಲೀಸ್​ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ಸೀಲಂ ಲಕ್ಷಣ್​ ಪ್ರಕಾರ ಒಡೆಲ್ಲಾ ಪಟ್ಟಣದ ರಮೇಶ್​ ಮತ್ತು ಸಂಧ್ಯಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಅವರಲ್ಲಿ ಪ್ರಸನ್ನಾ ದೊಡ್ಡವಳು. ಹನುಮಕೊಂಡದ ಖಾಸಗಿ ಕಾಲೇಜಿನಲ್ಲಿ ಪ್ರಸನ್ನಾ ಅಂತಿಮ ವರ್ಷದ ಡಿಗ್ರಿ ಓದುತ್ತಿದ್ದಳು.

    ಪ್ರಸನ್ನಾಗೆ ತನ್ನದೇ ಊರಿನ ಸಂದೀಪ್​ ಎಂಬ ಯುವಕನನ್ನು ಮೂರು ವರ್ಷದಿಂದ ಪ್ರೀತಿ ಮಾಡುತ್ತಿದ್ದಳು. ಇಬ್ಬರು ಮದುವೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದರು. ಆದರೆ, ಸಂದೀಪ್​ ಇತ್ತೀಚೆಗೆ ಬೇರೊಂದು ಯುವತಿಯ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದನ್ನು ಸಹಿಸದ ಪ್ರಸನ್ನಾ ಕೀಟನಾಶಕ ಸೇವಿಸಿದ್ದಳು.

    ಅಸ್ವಸ್ಥಗೊಂಡಿದ್ದ ಆಕೆಯನ್ನು ಕರೀಮ್​ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಸೋಮವಾರ ಬೆಳಗ್ಗೆ ಪ್ರಸನ್ನಾ ಕೊನೆಯುಸಿರೆಳೆದಿದ್ದಾಳೆ. ಮಗಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಮಗಳ ಸಾವಿಗೆ ಸಂದೀಪ್​ ಕಾರಣ ಎಂದು ಪಾಲಕರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಟ್ಕಪಲ್ಲಿ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಗಂಗುಬಾಯ್​ ದುರಂತ ಸಾವು
    ಗಂಗುಬಾಯ್​ ಮತ್ತು ಪೆಂಡೂರ್​ ರವೀಂದರ್​ ಇಬ್ಬರು ಎರಡು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ, ರವೀಂದರ್​ ತಾನು ಬೇರೊಂದು ಯುವತಿ ಜತೆ ಮದುವೆ ಆಗುವುದಾಗಿ ಹೇಳಿದ್ದಾನೆ. ಇದರಿಂದ ಮನನೊಂದು ಇದೇ 24 ರಂದು ಗಂಗುಬಾಯ್​ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತೆಲಂಗಾಣದ ಆದಿಲ್​ಬಾದ್​ ಜಿಲ್ಲೆಯ ಅಂಕಪುರ್​ ವಲಯದಲ್ಲಿ ಘಟನೆ ನಡೆದಿದೆ.

    ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಗಂಗುಬಾಯ್​ಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೇ ಮಂಗಳವಾರ ಮೃತಪಟ್ಟಿದ್ದಾರೆ. ಪಾಲಕರು ನೀಡಿದ ದೂರಿನ ಆಧಾರದ ಮೇಲೆ ರವೀಂದರ್​ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ಗೃಹ ಇಲಾಖೆಯಲ್ಲಿ ನೌಕರಿ ಆಮಿಷ: 55 ಜನರಿಂದ 1.62 ಕೋಟಿ ವಸೂಲಿ ಮಾಡಿ ವಂಚಿಸಿದವರ ಬಂಧನ..!

    ರಾಯಚೂರಲ್ಲಿ ನವವಿವಾಹಿತೆ ಸೇರಿ ಮೂವರ ಕೊಲೆ! ನಿನ್ನೆ ರಾತ್ರಿ ಮನೆಗೆ ಬಂದ ಆತನಿಂದಲೇ ನಡೆಯಿತು ಘೋರ ಕತ್ಯ

    ಡ್ರಗ್ಸ್​ ಕೇಸ್​ನಲ್ಲಿ ಸಹನಟ ಅರೆಸ್ಟ್: ಸಿಂಗಂ, ಅಣ್ಣಾಬಾಂಡ್, ಪರಮಾತ್ಮ… ಸಿನಿಮಾದಲ್ಲೂ ನಟಿಸಿದ್ದ

    ನಾನು ಕನ್ಯತ್ವ ಕಳೆದುಕೊಂಡಿದ್ದೇನೆ: 7 ವರ್ಷದ ಸಂಬಂಧದ ಬಗ್ಗೆ ಬೋಲ್ಡ್​ ಮಾತುಗಳನ್ನಾಡಿದ ಟಾಲಿವುಡ್​ ಬ್ಯೂಟಿ

    ಡಿವೋರ್ಸ್​ ವಿಚಾರವಾಗಿ ಕೊನೆಗೂ ಮೌನ ಮುರಿದ ಸಮಂತಾ: ಆದ್ರೆ ಸೌತ್​ ಬ್ಯೂಟಿ ಹೇಳಿಕೆಯಿಂದ ಫ್ಯಾನ್ಸ್​ ಕನ್ಫ್ಯೂಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts