ಸಾಗರ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕರ್ತವ್ಯ ನಿರತ ಅರಣ್ಯಾಧಿಕಾರಿಯನ್ನು ಆಸ್ಪತ್ರೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಮೃತರನ್ನು ಲೋಕನಾಥ್ ಎಂದು ಗುರುತಿಸಲಾಗಿದೆ. ಇವರು ಸಾಗರ ವಲಯ ತ್ಯಾಗರ್ತಿ ಶಾಖೆಯ ಉಪವಲಯ ಅರಣ್ಯಾಧಿಕಾರಿಯಾಗಿದ್ದರು. ಇಂದು ಕರ್ತವ್ಯಕ್ಕೆಂದು ತೆರಳುತ್ತಿದ್ದಾಗ ತ್ಯಾಗರ್ತಿ ಬಳಿ ಅಪಘಾತ ಸಂಭವಿಸಿ ತೀವ್ರವಾಗಿ ಗಾಯಗೊಂಡಿದ್ದರು.
ತಕ್ಷಣ ಅವರನ್ನು ಶಿವಮೊಗ್ಗ ನಾರಾಯಣ ಹೃದಯಾಲಯ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಕಟ್ಟಿಗೆ ತರಲು ಕಾಡಿಗೆ ಹೋದ ನಾಲ್ವರು ಬುಡಕಟ್ಟು ಮಹಿಳೆಯರಿಗೆ ಶಾಕ್: ಫಾರೆಸ್ಟ್ ಗಾರ್ಡ್ನಿಂದ ನೀಚ ಕೃತ್ಯ
ವಧು ಡಾನ್ಸ್ ಮಾಡಿದ್ದಕ್ಕೆ ವರ ಗರಂ ಆಗಿದ್ದೇ ತಪ್ಪಾಗೋಯ್ತು: ಬೇರೊಬ್ಬನಿಂದ ತಾಳಿಕಟ್ಟಿಸಿಕೊಂಡ ಮದುಮಗಳು!
ಅರ್ಕಾವತಿ ಆರ್ತನಾದಕ್ಕೆ ಕಾರಣ ಯಾರು ‘ಕ್ಲೀನ್ಚಿಟ್’ ಸಿದ್ದರಾಮಯ್ಯನವರೆ? ಎಚ್ಡಿಕೆ ಟಾಂಗ್