ಬೆಂಗಳೂರು: ಕಿರುತೆರೆ ನಟಿ ಸೌಜನ್ಯ ಅಲಿಯಾಸ್ ಸವಿ ಮಾದಪ್ಪ ಸಾವಿನ ಪ್ರಕರಣದಲ್ಲಿ ಬಾಯ್ಫ್ರೆಂಡ್ ವಿವೇಕ್ ನಡೆಯ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ.
ಆತ್ಮಹತ್ಯೆ ದಿನದ ಬೆನ್ನಲ್ಲೇ ಪೊಲೀಸ್ ಠಾಣೆಗೆ ಆಗಮಿಸಿ ಹೇಳಿಕೆ ನೀಡಿದ್ದ ವಿವೇಕ್, ಇದೀಗ ಮತ್ತೆ ವಿಚಾರಣೆಗೆ ಹಾಜರಾಗದೇ ದೂರ ಉಳಿದಿದ್ದಾರೆ. ಆತ್ಮಹತ್ಯೆ ಪ್ರಕರಣ ಸಂಬಂಧ ನಿನ್ನೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದ್ರೆ, ನೋಟಿಸ್ ನೀಡಿದ್ರೂ ವಿವೇಕ್ ತನಿಖಾಧಿಕಾರಿಯ ಮುಂದೆ ಹಾಜರಾಗಿಲ್ಲ. ಹೀಗಾಗಿ ವಿವೇಕ್ ಮೇಲೆ ಅನುಮಾನ ಮೂಡಿದೆ
ಸೌಜನ್ಯ ಆತ್ಮಹತ್ಯೆಯ ಹಿಂದೆ ಬಾಯ್ಫ್ರೆಂಡ್ ವಿವೇಕ್ ಕೈವಾಡವಿತ್ತಾ? ಸೌಜನ್ಯ ಆತ್ಮಹತ್ಯೆ ಮಾಡಿಕೊಂಡ ದಿನ ತಾನು ಆಕೆಯ ಬಳಿಯಲ್ಲೇ ಇರ್ಲಿಲ್ಲ ಎಂದು ವಿವೇಕ್ ಹೇಳಿದ್ದಾರೆ. ಆದ್ರೆ, ನಿನ್ನೆ ಲಿಖಿತ ರೂಪದಲ್ಲಿ ವಿವೇಕನ ಹೇಳಿಕೆಯನ್ನು ಕುಂಬಳಗೋಡು ಪೊಲೀಸರು ದಾಖಲಿಸಬೇಕಿತ್ತು. ಅದೇ ರೀತಿ ವಿವೇಕನ ಮೊಬೈಲ್ ಫೋನ್ ಮಾಹಿತಿಯನ್ನು ಪೊಲೀಸರು ಕೇಳಿದ್ದರು.
ಇದೀಗ ವಿವೇಕ್ ವಿಚಾರಣೆಯನ್ನು ತಪ್ಪಿಸಿಕೊಳ್ಳುತ್ತಿರುವುದನ್ನು ನೋಡಿದರೆ, ಪೊಲೀಸರ ತನಿಖೆಯಿಂದ ಹೆದರಿ ವಿಚಾರಣೆಗೆ ಹಾಜರಾಗದೇ ದೂರ ಉಳಿದಿದ್ದಾರಾ ವಿವೇಕ್ ಎಂಬ ಪ್ರಶ್ನೆ ಮೂಡಿದೆ. ಸವಿ ಮಾದಪ್ಪ ಆತ್ಮಹತ್ಯೆ ಪ್ರಚೋದನೆಗೆ ವಿವೇಕನೇ ಕಾರಣಾನಾ? ಎಂಬ ಸಂಶಯವೂ ಮೂಡಿದೆ. ವಿಚಾರಣೆಗೆ ಹಾಜರಾಗದೇ ವಿವೇಕ್ ತಲೆಮರೆಸಿಕೊಂಡಿದ್ಯಾಕೆ? ಎಂಬ ಪ್ರಶ್ನೆಗಳು ಆತನ ಮೇಲಿನ ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಪೊಲೀಸರ ಕಣ್ಣು ಇದೀಗ ವಿವೇಕನ ಮೇಲೆ ಬಿದ್ದಿದೆ. (ದಿಗ್ವಿಜಯ ನ್ಯೂಸ್)
ನಟಿ ಸೌಜನ್ಯ ಸಾವು ಪ್ರಕರಣ: ಕಿರುತೆರೆ ನಟಿಯ ಲಾಸ್ಟ್ ಕಾಲ್ ಸೀಕ್ರೆಟ್ ಮೇಲೆ ಪೊಲೀಸರ ಕಣ್ಣು
ನಟಿ ಸೌಜನ್ಯ ಸಾವು ಪ್ರಕರಣ: ಆರೋಪಿ ಮೊಬೈಲ್ನಲ್ಲಿದ್ದ ಫೋಟೋ-ವಿಡಿಯೋಗಳ ಬೆನ್ನತ್ತಿದ ಪೊಲೀಸರು
ಬೆದರಿಕೆ ಕರೆ ಬೆನ್ನಲ್ಲೇ ಸಾವಿನ ಸುದ್ದಿಯು ಬಂತು: ನಟಿಯ ತಂದೆಯ ದೂರಿನಲ್ಲಿ ಸ್ಪೋಟಕ ಮಾಹಿತಿ ಬಯಲು