ಮುಂಬೈ: ಬಾಲಿವುಡ್ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದ 7ನೇ ಸೀಸನ್ನ ಎರಡನೇ ಎಪಿಸೋಡ್ನಲ್ಲಿ ಬಾಲಿವುಡ್ ನಟಿಯರಾದ ಸಾರಾ ಅಲಿ ಖಾನ್ ಮತ್ತು ಜಾಹ್ನವಿ ಕಪೂರ್ ಪಾಲ್ಗೊಂಡಿದ್ದರು. ಈ ವೇಳೆ ಇಬ್ಬರು ಸಿನಿಮಾ ಇಂಡಸ್ಟ್ರಿಯ ಕೆಲವು ಗಾಸಿಪ್ಗಳನ್ನು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಡೇಟಿಂಗ್ ಜೀವನ ಮತ್ತು ತಮ್ಮ ಸಮಕಾಲೀನರ ಸಂಬಂಧದ ಸ್ಥಿತಿಗಳ ಬಗ್ಗೆ ತಪ್ಪೊಪ್ಪಿಗೆಗಳನ್ನು ಸಹ ನೀಡಿದ್ದಾರೆ.
ತುಂಬಾ ಗಮರ್ನಾಹ ಸಂಗತಿಯೆಂದರೆ, ಸಾರಾ ಅಲಿ ಖಾನ್ ಅವರು ದಕ್ಷಿಣ ಭಾರತದ ಸಿನಿ ರಂಗದಲ್ಲಿ ಹೆಚ್ಚು ಚರ್ಚೆಯಲ್ಲಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಲವ್ ಲೈಫ್ ಅನ್ನು ಇದೇ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ. ರ್ಯಾಪಿಡ್ ಫೈರ್ ಸುತ್ತಿನಲ್ಲಿ ಜಾಹ್ನವಿ ಅವರು ರಾಕೆಟ್ ವೇಗದಲ್ಲಿ ರಶ್ಮಿಕಾ ಮಂದಣ್ಣ ಅವರ ಇನ್ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದ್ದನ್ನು ಮಾತನಾಡುವಾಗ ಮಧ್ಯ ಪ್ರವೇಶಿಸಿದ ಸಾರಾ ಅಲಿ ಖಾನ್, ವಿಜಯ್ ಹೆಸರನ್ನು ಪ್ರಸ್ತಾಪಿಸಿದರು. ಅಲ್ಲದೆ, ವಿಜಯ್ ಮತ್ತು ರಶ್ಮಿಕಾ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಬಹಿರಂಗಪಡಿಸಿದರು. ಅಲ್ಲದೆ, ಇದೇ ಕಾರ್ಯಕ್ರಮದಲ್ಲಿ ವಿಜಯ್ ಜೊತೆ ಡೇಟಿಂಗ್ ಮಾಡುವ ಆಸೆಯನ್ನು ಸಾರಾ ವ್ಯಕ್ತಪಡಿಸಿದರು.
ಇದುವರೆಗೂ ಯಾವೊಬ್ಬ ಸೆಲೆಬ್ರಿಟಿಯು ಕೂಡ ರಶ್ಮಿಕಾ ಮತ್ತು ವಿಜಯ್ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿರಲಿಲ್ಲ. ಅಷ್ಟೇ ಯಾಕೆ ವಿಜಯ್ ಮತ್ತು ರಶ್ಮಿಕಾ ಕೂಡ ಅನೇಕ ಸಂದರ್ಭಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡರು ತಮ್ಮ ಸಂಬಂಧದ ಬಗ್ಗೆ ಎಲ್ಲಯೂ ಮಾತನಾಡಿರಲಿಲ್ಲ. ಆದರೆ, ಇದೀಗ ಸಾರಾ ಅಲಿ ಖಾನ್ ಬಹಿರಂಗವಾಗಿಯೇ ವಿಜಯ್ ಮತ್ತು ರಶ್ಮಿಕಾ ಡೇಟ್ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಸಿನಿ ರಂಗದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ.
ಗೀತಾ ಗೋವಿಂದಂ ಸಿನಿಮಾದಿಂದ ಆರಂಭವಾದ ವಿಜಯ್ ಮತ್ತು ರಶ್ಮಿಕಾ ಸೇಹ, ಪ್ರೀತಿಗೆ ತಿರುಗಿದೆ ಎಂದು ಹೇಳಲಾಗುತ್ತಿದೆ. ಅನೇಕ ಬಾರಿ ಇಬ್ಬರು ಹೋಟೆಲ್ನಲ್ಲಿ ಒಟ್ಟಾಗಿ ಕಾಣಸಿಕೊಂಡಿದ್ದಾರೆ. ರಶ್ಮಿಕಾ, ವಿಜಯ್ ಕುಟುಂಬದ ಜೊತೆಗೆ ಗೋವಾದಲ್ಲಿ ಹೊಸ ವರ್ಷ ಆಚರಣೆ ಸಹ ಮಾಡಿದ್ದರು. ಒಮ್ಮೆ ವಿಜಯ್ಗಾಗಿ ಅಮೆರಿಕಕ್ಕೂ ಹೋಗಿ ಬಂದಿದ್ದರು. ಹೀಗಾಗಿ ಇಬ್ಬರ ನಡುವೆ ಪ್ರೀತಿ ಇದೆ. ಇಬ್ಬರು ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿಯಾಗಿತ್ತು. ಆದರೆ, ಇತ್ತೀಚೆಗೆ ರಶ್ಮಿಕಾ ಮತ್ತು ವಿಜಯ್ ಅಂತರ ಕಾಯ್ದುಕೊಂಡಿರುವ ಸುದ್ದಿಯು ಕೇಳಿಬರುತ್ತಿದೆ. ವಿಜಯ್ ಹುಟ್ಟುಹಬ್ಬದ ದಿನ ರಶ್ಮಿಕಾ ಒಂದು ಶುಭಾಶಯ ಸಹ ಕೋರಿಲ್ಲ. ಅಲ್ಲದೆ, ಇತ್ತೀಚೆಗೆ ಇಬ್ಬರು ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಹೀಗಿರುವಾಗ ಸಾರಾ ಅಲಿ ಖಾನ್ ಹೇಳಿಕೆ ಭಾರಿ ಚರ್ಚೆ ಹುಟ್ಟುಹಾಕಿದೆ. (ಏಜೆನ್ಸೀಸ್)
ದೀಪಿಕಾ ಈಗ ಏನು ಮಾಡಿದ್ದಾರೋ ಅದನ್ನು 15 ವರ್ಷದ ಹಿಂದೆಯೇ ನಾನು ಮಾಡಿದ್ದೆ: ಮಲ್ಲಿಕಾರ ನೋವಿನ ಮಾತಿದು
PHOTOS| ಮಾದಕ ಫೋಟೋಗಳನ್ನು ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಕಣ್ಸನ್ನೆ ಬೆಡಗಿ ಪ್ರಿಯಾ!
VIDEO| ಈಜಿ ಬರುವುದಾಗಿ ಹೇಳಿ ಉಕ್ಕಿ ಹರಿಯುತ್ತಿರೋ ನದಿಗೆ ಜಿಗಿದ ಯುವಕ: ಮುಂದಾಗಿದ್ದು ದುರಂತ