ಕೊಚ್ಚಿ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಕೇರಳದಲ್ಲಿರುವ ಶಬರಿಮಲೆಗೆ ಭೇಟಿ ನೀಡಿದ್ದು, ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿದ್ದಾರೆ.
ಕೋವಿಡ್-19 ಅಲೆಯ ನಂತರ ಶಬರಿಮಲೆಗೆ ಭಕ್ತರು ಆಗಮಿಸುತ್ತಿದ್ದು, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರದ ಅಯ್ಯಪ್ಪ ಭಕ್ತರನ್ನು ಭೇಟಿಯಾದ ಪೋಟೊಗಳನ್ನು ರಾಜೀವ್ ಚಂದ್ರಶೇಖರ್ ಅವರು ಕೂ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
ಶಬರಿಮಲೆಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರದ ಅಯ್ಯಪ್ಪ ಭಕ್ತರನ್ನು ಭೇಟಿಯಾದ ಹೆಚ್ಚಿನ ಚಿತ್ರಗಳು. ಅವರಲ್ಲಿ ಹಲವರು ಕೋವಿಡ್ ನಂತರ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ ಎಂದು ಫೋಟೋ ಕುರಿತು ಬರೆದುಕೊಂಡಿದ್ದಾರೆ.
ರಾಜೀವ್ ಚಂದ್ರಶೇಖರ್ ಅವರು 26 ವರ್ಷದಿಂದ ಇಲ್ಲಿಗೆ ಭೇಟಿ ನೀಡುತ್ತಿದ್ದು, ‘ನನ್ನ 26ನೇ ವರ್ಷದ ಅಯ್ಯಪ್ಪನ ದರ್ಶನ. ಸಾವಿರಾರು ಭಕ್ತರೊಂದಿಗೆ ಶಬರಿಮಲೆಯಲ್ಲಿ’ ಎಂದು ಹೇಳಿಕೊಂಡಿದ್ದಾರೆ.
ಟ್ರಾಫಿಕ್ ನಿಯಂತ್ರಿಸುತ್ತಿದ್ದ ಪೊಲೀಸರ ಮೇಲೆ ಏಕಾಏಕಿ ಕಲ್ಲು, ಇಟ್ಟಿಗೆಗಳಿಂದ ದಾಳಿ ಮಾಡಿದ ಯುವಕ!
ಸ್ಫೂರ್ತಿ ಗೌಡ ವಿರುದ್ಧ ಇದೆಂಥಾ ಆರೋಪ? ಮನೆಯಿಂದ ಹೊರ ಹೋಗಲಿ ಅಂತ ಬೇಡುತ್ತಿರುವ ನೆಟ್ಟಿಗರು!
ದೆಹಲಿ ಉಪ ಮುಖ್ಯಮಂತ್ರಿ ನಿವಾಸ ಸೇರಿದಂತೆ 20ಕ್ಕೂ ಹೆಚ್ಚು ಸ್ಥಳಗಳ ಮೇಲೆ ಸಿಬಿಐ ದಿಢೀರ್ ದಾಳಿ