ಬೆಂಗಳೂರು: ಕೆಜಿಎಫ್ ಚಾಪ್ಟರ್ 1 ಮತ್ತು 2ರ ಅದ್ಭುತ ಯಶಸ್ಸಿನ ಬಳಿಕ ರಾಕಿಂಗ್ ಸ್ಟಾರ್ ಯಶ್ ಅವರು ಪ್ರಭಾಸ್ ಮಾದರಿಯಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಆದಾಗ್ಯೂ, ಇವರಿಬ್ಬರ ನಡುವೆ ಇರುವ ಒಂದು ವ್ಯತ್ಯಾಸವೆಂದರೆ, ಬಾಹುಬಲಿ ಬಳಿ ಯಶಸ್ಸಿನ ಬಳಿಕ ಪ್ರಭಾಸ್ ಅವರು ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡರು. ಆದರೆ, ಯಶ್ ಮಾತ್ರ ತುಂಬಾ ಚೂಸಿಯಾಗಿದ್ದು, ಸಿನಿಮಾ ಆಯ್ಕೆಗಳಲ್ಲಿ ಹಿಂಜರಿಯುತ್ತಿದ್ದಾರೆ.
ದಿಲ್ ರಾಜು ಮತ್ತು ಮೈತ್ರಿ ಮೂವೀ ಮೇಕರ್ಸ್ನಂತಹ ದೊಡ್ಡ ತೆಲುಗು ನಿರ್ಮಾಪಕರು ಕಾಲ್ಶೀಟ್ ಕೇಳಿದ್ದರೂ ಯಶ್ ಮಾತ್ರ ಯಾರೊಬ್ಬರಿಗೂ ಹಸಿರು ನಿಶಾನೆಯನ್ನು ತೋರಿಲ್ಲ. ಅಚ್ಚರಿಯೆಂದರೆ, ಕೆಜಿಎಫ್-2 ಬಳಿಕ ಯಶ್ ತಮ್ಮ ಮುಂದಿನ ಹೊಸ ಚಿತ್ರವನ್ನು ಇನ್ನು ಘೋಷಣೆಯೇ ಮಾಡಿಲ್ಲ. ಯಾವಾಗ ಹೊಡ ಸಿನಿಮಾ ಘೋಷಣೆ ಮಾಡುತ್ತಾರೆ ಅಂತಾ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.
ಬಾಹುಬಲಿ ಬಳಿಕ ಪ್ರಭಾಸ್ ಸಾಹೋ, ರಾಧೆಶ್ಯಾಮ್, ಸಲಾರ್, ಆದಿಪುರುಷ, ಪ್ರಾಜೆಕ್ಟ್ ಕೆ ಮತ್ತು ಸ್ಪಿರಿಟ್ನಂತಹ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ, ಯಶ್ ಏನು ಮಾಡುತ್ತಿದ್ದಾರೆ ಎಂಬುದೇ ಈಗ ಅಚ್ಚರಿಗೆ ಕಾರಣವಾಗಿದೆ. ಎರಡು ದಿನಗಳ ಹಿಂದಷ್ಟೇ ಯಶ್ 19 ಎಂಬ ಹ್ಯಾಷ್ಟ್ಯಾಗ್ ಟ್ರೆಂಡ್ ಆಗಿತ್ತು. ಈ ಮೂಲಕ ಹೊಸ ಸಿನಿಮಾವನ್ನು ಘೋಷಣೆ ಮಾಡುವಂತೆ ಯಶ್ ಅವರನ್ನು ಅಭಿಮಾನಿಗಳು ಒತ್ತಾಯಿಸಿದ್ದರು. ಆದರೆ, ಯಶ್ ಮಾತ್ರ ಒಂದೇ ಒಂದು ಸುಳಿವು ನೀಡದೇ ಸುಮ್ಮನಾಗಿರುವುದು ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದೆ.
ಮೂಲಗಳ ಪ್ರಕಾರ ಯಶ್, ಸ್ಯಾಂಡಲ್ವುಡ್ನ ಇಬ್ಬರು ಹೊಸ ನಿರ್ದೇಶಕರಿಗೆ ಓಕೆ ಎಂದಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ಬಿಗ್ ಬಾಲಿವುಡ್ ಪ್ರಾಜೆಕ್ಟ್ ಒಂದರಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ತಮ್ಮ ಮುಂದಿನ ಪ್ರಾಜೆಕ್ಟ್ ಅನ್ನು ಯಶ್ ಘೋಷಣೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಳ್ಳೆಯ ಪ್ರಾಜೆಕ್ಟ್ ಸಿಗಲಿ ಎಂದು ವರ್ಷಗಳ ಕಾಲ ಹುಡುಕುತ್ತಾ ಕೂತರೆ ಸಾಲದು, ಈಗ ಅನುಭವಿಸುತ್ತಿರುವ ಪ್ಯಾನ್ ಇಂಡಿಯಾ ಕ್ರೇಜ್ ಉಳಿಸಿಕೊಳ್ಳಬೇಕಾದರೆ, ಒಂದರ ಹಿಂದಂತೆ ಒಂದು ಸಿನಿಮಾಗಳನ್ನು ಘೋಷಣೆ ಮಾಡುವುದು ಒಳಿತು ಎಂಬುದು ಸಿನಿಮಾ ಪಂಡಿತರ ಅಭಿಪ್ರಾಯವಾಗಿದೆ. (ಏಜೆನ್ಸೀಸ್)
ಗಂಡನಿಲ್ಲದ ವೇಳೆ ಮಹಿಳೆಯ ಮನೆಗೆ ನುಗ್ಗಿ ರೇಪ್: ಬಂಧಿತ ಸಿಐ ಹಿನ್ನೆಲೆ ನೋಡಿ ತನಿಖಾಧಿಕಾರಿಗಳು ಶಾಕ್!
PSI ಚಿತ್ರಹಿಂಸೆಗೆ ಅಮಾಯಕ ಬಲಿ: ವಿಜಯಪುರದ ಯುವಕನ ಈ ವಿಡಿಯೋ ನೋಡ್ತಿದ್ರೆ ಕರುಳು ಚುರ್ ಅನ್ನುತ್ತೆ
ಯಶಿಕಾ ಆನಂದ್ ಬಿಕಿನಿ ಫೋಟೋ ವೈರಲ್: ನಟಿಯ ಹಾಟ್ ಅವತಾರ ಕಂಡು ಹುಬ್ಬೇರಿಸಿದ ನೆಟ್ಟಿಗರು!