ಬೆಂಗಳೂರು: ಅಸಂಖ್ಯಾತ ಅಭಿಮಾನಿಗಳ ಮನದಲ್ಲಿ ‘ರಾಜಕುಮಾರ’ನಂತೆ ಮೆರೆದಿದ್ದ ಕರುನಾಡಿನ ‘ವೀರ ಕನ್ನಡಿಗ’, ಸ್ಯಾಂಡಲ್ವುಡ್ನ ‘ಪವರ್ಸ್ಟಾರ್’, ಕನ್ನಡಿಗರ ಪ್ರೀತಿಯ ಅಪ್ಪು ನಮ್ಮನ್ನಗಲಿ ಇಂದಿಗೆ ಐದು ದಿನಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ರಾಜ್ ಕುಟುಂಬ ಅಪ್ಪು ಸಮಾಧಿಗೆ 5ನೇ ದಿನದ ಹಾಲು-ತುಪ್ಪ ಕಾರ್ಯ ನೇರವೇರಿಸಿದೆ.
ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಕಂಠೀರವ ಸ್ಟುಡಿಯೋಗೆ ತೆರಳಿದ ರಾಜ್ ಕುಟುಂಬ ಅಪ್ಪು ಸಮಾಧಿಗೆ ಹಾಲು-ತುಪ್ಪ ಬಿಡುವ ಕಾರ್ಯ ನೆರವೇರಿಸಿದೆ. ಪುನೀತ್ಗೆ ತುಂಬಾ ಇಷ್ಟ ಅಂತಾ ಇಡ್ಲಿ, ಮುದ್ದೆ ಮತ್ತು ನಾಟಿಕೋಳಿ ಸಾಂಬರ್ ಅನ್ನು ಮಾಡಿಕೊಂಡು ಬಂದಿರುವ ಸಂಬಂಧಿಕರು ಅದನ್ನು ಅಪ್ಪು ಸಮಾಧಿಯ ಮೇಲಿಟ್ಟು ಪೂಜೆ ಸಲ್ಲಿಸಿದ್ದಾರೆ. ಅಪ್ಪುಗೆ ಇಷ್ಟವಾದ ಇನ್ನಿತರ ತಿಂಡಿಗಳನ್ನು ಮಾಡಿಕೊಂಡು ಬಂದು ಎಡೆ ಇಟ್ಟಿದ್ದಾರೆ.
ಇಡೀ ರಾಜ್ ಕುಟುಂಬವೇ ಹಾಲು-ತುಪ್ಪ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಪೂಜೆ ಸಲ್ಲಿಸಿದ್ದಾರೆ. ಬಹುಬೇಗನೇ ಪುನೀತ್ರನ್ನು ಕಳೆದುಕೊಂಡ ದುಃಖದಲ್ಲಿರುವ ಕಟುಂಬವೂ ಶೋಕ ಸಾಗರದಲ್ಲಿ ಮುಳುಗಿದ್ದು, ಅಪ್ಪು ನೆನೆದು ಕಣ್ಣೀರಾಕುತ್ತಿದೆ. ಚಿತ್ರರಂಗದ ಅನೇಕ ಗಣ್ಯರು ಕೂಡ ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದು, ಅಪ್ಪು ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದಾರೆ.
ಅಪ್ಪು 29ರಂದು ನಿಧನರಾದರು. ಅಕ್ಟೋಬರ್ 31ರಂದು ಅವರ ಅಂತ್ಯಕ್ರಿಯೆ ನೆರವೇರಿತು. ಮೂರು ದಿನಕ್ಕೆ ಹಾಲು ತುಪ್ಪ ಕಾರ್ಯ ನೆರವೇರಬೇಕಿತ್ತು. ಆದರೆ, ಮೂರನೇ ದಿನ ಅಂತ್ಯಕ್ರಿಯೆ ನಡೆದಿದ್ದಕ್ಕೆ 5ನೇ ದಿನಕ್ಕೆ ಹಾಲು-ತುಪ್ಪ ಕಾರ್ಯ ನಡೆದಿದೆ. ಇನ್ನು ಸಮಾಧಿಗೆ ಪೂಜೆ ಸಲ್ಲಿಸಲು ಅಭಿಮಾನಿಗಳು ಜಮಾಯಿಸಿದ್ದು, ಹಾಲು-ತುಪ್ಪ ಕಾರ್ಯ ಮುಗಿದ ಬಳಿಕ ಅಭಿಮಾನಿಗಳಿಗೆ ಅಪ್ಪು ಸಮಾಧಿ ಬಳಿ ಅವಕಾಶ ಮಾಡಿಕೊಡಲಾಗುವುದು ಎಂದು ಈ ಹಿಂದೆಯೇ ಶಿವಣ್ಣ ಹೇಳಿದ್ದಾರೆ. ಹೀಗಾಗಿ ಇಂದು ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅಪ್ಪು ಸಮಾಧಿ ಬಳಿ ಜಮಾಯಿಸಿದ್ದಾರೆ.
ಪುನೀತ್ ಬಗ್ಗೆ ಅಶ್ಲೀಲ ಪದ ಬಳಸಿ ಅವಮಾನ ಮಾಡಿದ್ದ ಕಿಡಿಗೇಡಿಯ ಬಂಧನ: ಕೀಳು ಮನಸ್ಥಿತಿಗೆ ಬೆಲೆ ತೆರಲೇಬೇಕು
ತಮಿಳು ನಟ ವಿಶಾಲ್ ಬೆನ್ನಲ್ಲೇ ಅಪ್ಪು ನೆನಪಲ್ಲಿ ಮಹತ್ವದ ಕಾರ್ಯಕ್ಕೆ ಮುಂದಾದ ನಟಿ ಪ್ರಣೀತಾ!
ನಾಲ್ಕು ದಿನಗಳ ಹಿಂದಷ್ಟೇ ಮದುವೆ ಆಗಿದ್ದ ನವದಂಪತಿ ಭೀಕರ ಅಂತ್ಯ: ತಿರುವಿನಲ್ಲಿ ಕಾದಿದ್ದ ಜವರಾಯ