More

    ಒಂದೇ ರೂಮಿನಲ್ಲಿ ನರೇಶ್ ಜತೆ ಸಿಕ್ಕಿಬಿದ್ದ​ ಪವಿತ್ರಾ​ಗೆ ಒಂದರ ಹಿಂದೆ ಮತ್ತೊಂದು ಆಘಾತ!

    ಹೈದರಾಬಾದ್​: ಕಳೆದ ಕೆಲವು ದಿನಗಳಿಂದ ನಟಿ ಪವಿತ್ರಾ ಲೋಕೇಶ್​ ಮತ್ತು ನಟ ನರೇಶ್​ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಅಲ್ಲದೆ, ಈ ವಿಚಾರವಾಗಿ ಬಹು ಚರ್ಚೆಯು ನಡೆಯುತ್ತಿದೆ. ನರೇಶ್​ ಮೂರನೇ ಪತ್ನಿ ಮಾಧ್ಯಮಗಳ ಮುಂದೆ ಬಂದು ಆರೋಪಗಳನ್ನು ಮಾಡಿದ್ದು, ಅದಕ್ಕೆ ಪ್ರತಿಯಾಗಿ ನರೇಶ್​ ಮತ್ತು ಪವಿತ್ರಾ ಲೋಕೇಶ್​ ಸ್ಪಷ್ಟನೆಗಳನ್ನು ನೀಡಿದ್ದಾರೆ. ಇದೆಲ್ಲದರ ನಡುವೆ ಎರಡು ದಿನದ ಹಿಂದೆ ಮೈಸೂರಿನ ಹೋಟೆಲ್​ ಒಂದರ ಬಳಿ ನಡೆದ ಹೈಡ್ರಾಮ ಭಾರೀ ಸುದ್ದಿಯಾಯಿತು.

    ನರೇಶ್​ ಜೊತೆಗಿನ ಸಂಬಂಧದ ಸುಳಿಯಲ್ಲಿ ಸಿಲುಕಿರುವ ಪವಿತ್ರಾ ಲೋಕೇಶ್​ಗೆ ಇದೀಗ ಆಘಾತವೊಂದು ಎದುರಾಗಿದೆ. ಪವಿತ್ರಾ ಲೋಕೇಶ್​ ವಿರುದ್ಧ ನೆಗೆಟಿವ್ ಪ್ರಚಾರವಾಗುತ್ತಿದ್ದಂತೆಯೇ ಟಾಲಿವುಡ್​ನಲ್ಲಿ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಈಗಾಗಲೇ ಎರಡ್ಮೂರು ಸಿನಿಮಾಗಳಿಂದ ಪವಿತ್ರಾರನ್ನು ಕೈಬಿಡಲಾಗಿದೆ ಎಂಬ ಸುದ್ದಿ ಟಾಲಿವುಡ್​ ಗಲ್ಲಿಯಿಂದ ಕೇಳಿಬರುತ್ತಿದೆ. ಅಂದಹಾಗೆ ಪವಿತ್ರಾ ಅವರು ಸ್ಯಾಂಡಲ್​ವುಡ್​ಗಿಂತ ಟಾಲಿವುಡ್​ನಲ್ಲಿ ತುಂಬಾ ಬಿಜಿಯಾಗಿದ್ದರು. ಚಿತ್ರವೊಂದಕ್ಕೆ 50 ಲಕ್ಷ ರೂಪಾಯಿ ಪಡೆದುಕೊಳ್ಳುತ್ತಿದ್ದರು ಎಂಬ ಮಾಹಿತಿ ಇದೆ.

    ತೆಲುಗು ಚಲನಚಿತ್ರೋದ್ಯಮವು ಯಾವಾಗಲೂ ವಿವಾದಿತ ವ್ಯಕ್ತಿಗಳಿಂದ ದೂರವಿರುತ್ತದೆಯಂತೆ. ಅಪರಾಧಿ ಅಥವಾ ಬಲಿಪಶುವಾಗಿದ್ದರೂ ಪರವಾಗಿಲ್ಲ ಅಂಥವರಿಗೆ ಅವಕಾಶಗಳನ್ನು ನೀಡುವುದಿಲ್ಲ. ಸಿನಿಮಾಗೆ ತೊಂದರೆ ಹಾಗೂ ನೆಗೆಟಿವ್​ ಪ್ರಚಾರ ದೊರಕುತ್ತದೆ ಎಂಬ ಕಾರಣಕ್ಕೆ ಸಿನಿಮಾಗಳಿಂದ ಕೈಬಿಡಲಾಗುತ್ತದೆ. ವಿವಾದಕ್ಕೆ ಗುರಿಯಾದವರನ್ನು ಈ ಹಿಂದೆಯೂ ಸಿನಿಮಾಗಳಿಂದ ಕೈಬಿಡಲಾಗಿದೆ.

    ದೊಡ್ಡ ತಾರಾಬಳಗವನ್ನು ಹೊಂದಿರುವ ಎರಡು ದೊಡ್ಡ ಚಿತ್ರಗಳಿಂದ ಪವಿತ್ರಾ ಲೋಕೇಶ್ ಅವರನ್ನು ತಾಯಿ ಪಾತ್ರದಿಂದ ದೂರವಿರಿಸಲು ನಿರ್ಧರಿಸಿವೆ ಎಂಬ ಮಾಹಿತಿ ತಿಳಿದುಬಂದಿದೆ. ಸದ್ಯದ ವಿವಾದದಿಂದ ಹಾಗೂ ನರೇಶ್​ ಜೊತೆಗೆ ಸಂಬಂಧ ಕೇಳಿಬರುತ್ತಿರುವುದರಿಂದ ನಟಿ ತಾನು ಮಾಡುವ ತಾಯಿ ಪಾತ್ರಗಳಿಗೆ ಯಾವುದೇ ಪಾವಿತ್ರತೆ ಅಥವಾ ಪೂರ್ಣತೆಯನ್ನು ತರುವುದಿಲ್ಲ ಎಂದು ಚಲನಚಿತ್ರ ನಿರ್ಮಾಪಕರು ಭಾವಿಸುತ್ತಾರೆ. ಇದೇ ಕಾರಣಕ್ಕೆ ಚಿತ್ರರಂಗದಲ್ಲಿ ಅನೇಕರು ತಮ್ಮ ವೈಯಕ್ತಿಕ ವಿಚಾರಗಳನ್ನು ಖಾಸಗಿಯಾಗಿ ಇಡಲು ಬಯಸುತ್ತಾರೆ.

    ಜುಲೈ 2ರ ರಾತ್ರಿ ವಿವಿ ಪುರಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ ನಟ ನರೇಶ್​ ಮತ್ತು ನಟಿ ಪವಿತ್ರಾ ಲೋಕೇಶ್​, ಅದೇ ದಿನ ರಾತ್ರಿ ಹೋಟೆಲ್​ ಒಂದರಲ್ಲಿ ಒಂದೇ ಕೋಣೆಯಲ್ಲಿ ಉಳಿದುಕೊಂಡಿದ್ದರು. ಈ ವಿಚಾರ ರಮ್ಯಾ ಅವರಿಗೆ ಗೊತ್ತಾಗಿ ಮಧ್ಯ ರಾತ್ರಿಯೇ ಹೋಟೆಲ್​ಗೆ ಆಗಮಿಸಿ, ತಾವೂ ಒಂದು ರೂಮ್​ ಬುಕ್​ ಮಾಡಿ ಬೆಳಗ್ಗೆ ಆಗುವವರೆಗೂ ಅಲ್ಲಿಯೇ ಕಾದು, ಬೆಳಗ್ಗೆ ನರೇಶ್​ ಮತ್ತು ಪವಿತ್ರಾ ಲೋಕೇಶ್​ ಹೊರಬರುತ್ತಿದ್ದಂತೆ ಜಗಳಕ್ಕೆ ಇಳಿದಿದ್ದರು. ಚಪ್ಪಲಿಯಲ್ಲಿ ಬಾರಿಸಲು ಯತ್ನಿಸಿದರು.

    ಪವಿತ್ರಾ ಲೋಕೇಶ್ ನನ್ನ ಒಳ್ಳೆಯ ಸ್ನೇಹಿತೆ, ಮಾರ್ಗದರ್ಶಕಿ, ತತ್ವಜ್ಞಾನಿ ಮತ್ತು ಆಪ್ತೆ ಎಂದು ನರೇಶ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆಕೆಯ ಬೆಂಬಲದಿಂದ ನಾನು ಖಿನ್ನತೆಯ ಗುಣಮುಖನಾದೆ ಎಂದು ಹೇಳಿಕೊಂಡಿದ್ದಾರೆ. ಪವಿತ್ರಾ ಲೋಕೇಶ್​ ಕೂಡ ನಾವಿಬ್ಬರು ಒಳ್ಳೆಯ ಫ್ರೆಂಡ್ಸ್​ ಎಂದು ಹೇಳಿದ್ದಾರೆ. ನಮ್ಮ ಸಂಬಂಧದ ಬಗ್ಗೆ ಕೆಲವರು ಅಪಾರ್ಥ ಮಾಡಿಕೊಂಡಿದ್ದಾರೆ ಎಂದಿದ್ದಾರೆ. ತನ್ನ ಗೌಪ್ಯತೆ ಮತ್ತು ವೈಯಕ್ತಿಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಯಾರೂ ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಮಾಧ್ಯಮಗಳ ಮುಂದೆ ಒತ್ತಿ ಹೇಳಿದ್ದಾರೆ. ರಮ್ಯಾ ಮತ್ತು ನರೇಶ್​ ಅವರ ವೈಯಕ್ತಿಕ ವಿಚಾರಗಳನ್ನು ಬಗೆಹರಿಸಿಕೊಳ್ಳುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಒಳ್ಳೆಯ ಫ್ರೆಂಡ್ಸ್​ ಅಂತಾ ಹೇಳಿಕೊಳ್ಳುತ್ತಾರೆ ಆದರೆ, ಒಂದೇ ಕೋಣೆಯಲ್ಲಿ ಇಡೀ ರಾತ್ರಿ ಇಬ್ಬರು ಒಟ್ಟಿಗೆ ಇರ್ತಾರೆ ಅಂದ್ರೆ ಏನು ಅರ್ಥ ಎಂದು ರಮ್ಯಾ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಪವಿತ್ರಾ ಲೋಕೇಶ್​ ಹೆಸರು ವಿವಾದಕ್ಕೆ ಗುರಿಯಾಗಿದ್ದು, ಸಿನಿಮಾ ಅವಕಾಶಗಳು ದೂರವಾಗುತ್ತಿವೆ. (ಏಜೆನ್ಸೀಸ್​)

    ದಯವಿಟ್ಟು ನನ್ನ ಮಗನಿಗೆ ಯಾರೂ ಸಾಲ ಕೊಡ್ಬೇಡಿ… ಸುಳ್ಳು ಹೇಳಿ ಜನರಿಗೆ ಮೋಸ ಮಾಡ್ತಿದ್ದಾನೆ: ಮಾಜಿ ಶಾಸಕ ಮನವಿ

    ಹಿಂದು ದೇವರ ಫೋಟೋ ಇರುವ ಪೇಪರ್​ನಲ್ಲಿ ಮಾಂಸ ಪ್ಯಾಕಿಂಗ್​: ಅನ್ಯಧರ್ಮದ ವ್ಯಕ್ತಿಯ ಬಂಧನ

    ನನ್ನ ಆಡಳಿತದಲ್ಲಿ ಅಶಿಸ್ತು, ದುಷ್ಕೃತ್ಯಗಳು ಹೆಚ್ಚಾದ್ದಲ್ಲಿ ಸರ್ವಾಧಿಕಾರಿಯಾಗಿ ಬದಲಾಗಬೇಕಾಗುತ್ತದೆ: ಸಿಎಂ ಸ್ಟಾಲಿನ್​ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts