ಪಣಜಿ: ಭಾರಿ ಮಳೆಯಿಂದಾಗಿ ಕೇಬಲ್ ಬ್ರಿಡ್ಜ್ ಕುಸಿದು ನೀರಿನಲ್ಲಿ ಸಿಲುಕಿದ್ದ 40ಕ್ಕೂ ಹೆಚ್ಚು ಪ್ರವಾಸಿಗರನ್ನು ರಕ್ಷಣೆ ಮಾಡಿರುವ ಘಟನೆ ದಕ್ಷಿಣ ಗೋವಾದಲ್ಲಿರುವ ದೂಧ್ಸಾಗರ್ ಫಾಲ್ಸ್ನಲ್ಲಿ ನಡೆದಿದೆ.
ಈ ಘಟನೆ ಶುಕ್ರವಾರ ಸಂಜೆ ನಡೆದಿದೆ. ಗೋವಾ ಮತ್ತು ಕರ್ನಾಟಕ ಗಡಿಗಳಲ್ಲಿ ಸುರಿದ ಭಾರಿ ಮಳೆಯಿಂದ ಜಲಪಾತದಲ್ಲಿ ನೀರಿನ ಪ್ರಮಾಣ ಏರಿಕೆಯಾಗಿ ಈ ಅವಘಡ ಸಂಭವಿಸಿದೆ. ಗೋವಾದ ಹಲವು ಭಾಗಗಲ್ಲಿ ನಿನ್ನೆ ಭಾರಿ ಮಳೆಯಾಗಿದೆ.
ನೀರಿನಲ್ಲಿ ಸಿಲುಕಿ ಸಹಾಯಕ್ಕಾಗಿ ಎದರು ನೋಡುತ್ತಿದ್ದ 40 ಕ್ಕೂ ಹೆಚ್ಚು ಪ್ರವಾಸಿಗರಿಗೆ ದೃಷ್ಟಿ ಜೀವ ರಕ್ಷಕರು ಆಪತ್ಭಾಂದವರಾಗಿ ಬಂದರು. ಎಲ್ಲರನ್ನು ರಕ್ಷಣೆ ಮಾಡಿ ಸುರಕ್ಷಿತ ತಾಣಕ್ಕೆ ಸ್ಥಳಾಂತರ ಮಾಡಿದರು.
ಈ ಬಗ್ಗೆ ದೃಷ್ಟಿ ಜೀವರಕ್ಷಕ ಪಿಆರ್ಒ ಅಧಿಕೃತ ಹೇಳಿಕೆ ನೀಡಿದ್ದು, ನಿನ್ನೆ ಸಂಜೆ ಗೋವಾ ಮತ್ತು ಕರ್ನಾಟಕ ಗಡಿ ಭಾಗಗಳಲ್ಲಿ ಸುರಿದ ಭಾರಿ ಮಳೆಗೆ ದೂಧ್ಸಾಗರ್ ಜಲಪಾತದಲ್ಲಿ ಗಣನೀಯ ಪ್ರಮಾಣದಲ್ಲಿ ನೀರು ಹೆಚ್ಚಾಯಿತು. ನೀರಿನ ಈ ದಿಢೀರ್ ಏರಿಕೆಯಿಂದ ದಾಟಲು ಬಳಸುವ ಕೇಬಲ್ ಬ್ರಿಡ್ಜ್ ಕುಸಿದು, 40ಕ್ಕೂ ಹೆಚ್ಚು ಪ್ರವಾಸಿಗರು ನೀರಿನಲ್ಲಿ ಸಿಲುಕಿದ್ದರು. ಈ ವೇಳೆ ದೃಷ್ಟಿ ಜೀವ ರಕ್ಷಕರು ನೆರವಿಗೆ ಧಾವಿಸಿ ಬಂದು ಎಲ್ಲರನ್ನು ರಕ್ಷಿಸಿ, ಸುರಕ್ಷಿತ ತಾಣಕ್ಕೆ ಕರೆತಂದರು ಎಂದು ಹೇಳಿದ್ದಾರೆ.
ಭಾರಿ ಮಳೆ ಮತ್ತು ಹೆಚ್ಚುತ್ತಿರುವ ನೀರಿನ ಮಟ್ಟದಿಂದಾಗಿ ಮುಂದಿನ ಕೆಲವು ದಿನಗಳವರೆಗೆ ದೂಧ್ಸಾಗರ್ ಜಲಪಾತಕ್ಕೆ ಯಾರೂ ಇಳಿಯದಂತೆ ದೃಷ್ಟಿ ಮರೈನ್ ಜನರಿಗೆ ಎಚ್ಚರಿಕೆ ನೀಡಿದೆ. (ಏಜೆನ್ಸೀಸ್)
ಯುವ ಪೀಳಿಗೆಯ ಮನಸ್ಸನ್ನು ಮಲಿನಗೊಳಿಸುತ್ತಿದ್ದೀರಿ: ಏಕ್ತಾ ಕಪೂರ್ಗೆ ಸುಪ್ರೀಂ ಕೋರ್ಟ್ ತರಾಟೆ
ರಷ್ಯಾ ಸೇನೆಯೊಂದಿಗೆ ನ್ಯಾಟೋ ಪಡೆಗಳ ನೇರ ಘರ್ಷಣೆ ಜಾಗತಿಕ ದುರಂತಕ್ಕೆ ಕಾರಣವಾಗಲಿದೆ: ಪುಟಿನ್ ಎಚ್ಚರಿಕೆ
ಮದುವೆ ಆಮಿಷವೊಡ್ಡಿ ಯುವತಿ ಮತಾಂತರ; ಮತಾಂತರ ನಿಷೇಧ ಕಾಯ್ದೆ ಅನ್ವಯ ಮುಸ್ಲಿಂ ಯುವಕನ ಬಂಧನ