ಮುಂಬೈ: ವಾಣಿಜ್ಯ ನಗರಿ ಮುಂಬೈನ ಐಷಾರಾಮಿ ಕಾರ್ಡಿಲಿಯಾ ಕ್ರೂಸ್ ಎಂಪ್ರೆಸ್ ಹಡಗಿನ ಒಳಗೆ ನಡೆಯುತ್ತಿದ್ದ ರೇವ್ ಪಾರ್ಟಿಯ ಮೇಲೆ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ತಂಡ ದಾಳಿ ನಡೆಸಿ ಕೊಕೇನ್, ಹಶೀಶ್ ಮತ್ತು ಎಂಡಿಎಂಎ ಸೇರಿದಂತೆ ಅನೇಕ ಅಕ್ರಮ ಡ್ರಗ್ಸ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಒಟ್ಟು 8 ಮಂದಿಯನ್ನು ಎನ್ಸಿಬಿ ವಶಕ್ಕೆ ಪಡೆದುಕೊಂಡಿದ್ದಾರೆ.
ಕೆಲವು ಉನ್ನತ ಮೂಲಗಳ ಪ್ರಕಾರ ಡ್ರಗ್ಸ್ ಕೇಸ್ನಲ್ಲಿ ಶಾರುಖ್ ಪುತ್ರ ಆರ್ಯನ್ ಖಾನ್ರನ್ನು ಎನ್ಸಿಬಿ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಎನ್ಸಿಬಿ ಮಹಾನಿರ್ದೇಶಕ ಎಸ್.ಎನ್. ಪ್ರಧಾನ್, ಶನಿವಾರ ನಡೆದ ದಾಳಿಯಲ್ಲಿ 8 ಮಂದಿಯನ್ನು ಬಂಧಿಸಿದ್ದೇವೆ. 8ರಲ್ಲಿ ಮೂವರು ದೆಹಲಿ ಮೂಲದವರು. ಎಲ್ಲ ಆರೋಪಿಗಳನ್ನು ಸದ್ಯ ವಿಚಾರಣೆಗೆ ಒಳಪಡಿಸಿದ್ದು, ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಬಂಧಿತರನ್ನು ಶಾರುಖ್ ಪುತ್ರ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೆಚಾ, ಸುಪುರ್ ಸಾರಿಕ್, ಇಸ್ಮಿತ್ ಸಿಂಗ್, ಮೋಹಕ್ ಜಸ್ವಾಲ್, ವಿಕ್ರಾಂತ್ ಛೋಕರ್ ಮತ್ತು ಗೋಮಿತ್ ಚೋಪ್ರಾ ಎಂದು ಗುರುತಿಸಲಾಗಿದೆ. ಇವರಲ್ಲಿ ಮೋಹಕ್, ನುಪುರ್ ಮತ್ತು ಗೋಮಿತ್ ದೆಹಲಿ ಮೂಲದವರು. ಮೋಹಕ್ ಮತ್ತು ನುಪುರ್ ಇಬ್ಬರು ಫ್ಯಾಶನ್ ಡಿಸೈನರ್ಸ್. ಇನ್ನೊಬ್ಬ ಗೋಮಿತ್ ಕೇಶ ವಿನ್ಯಾಸಗಾರ ಎಂದು ತಿಳಿದುಬಂದಿದೆ.
ಇದೇ ಮೊದಲ ಬಾರಿಗೆ ಹಡಗಿನ ಮೇಲೆ ಈ ರೀತಿಯ ದಾಳಿ ನಡೆದಿದೆ. ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತದೆ ಎಂಬ ಸುಳಿವು ದೊರೆತಿದ್ದರಿಂದ ಎನ್ಸಿಬಿ ಅಧಿಕಾರಿಗಳು ಶನಿವಾರ ಪ್ರಯಾಣಿಕರ ವೇಷದಲ್ಲಿ ಹೋಗಿ ರೇವ್ ಪಾರ್ಟಿಯ ಮೇಲೆ ದಾಳಿ ಮಾಡಿದ್ದಾರೆ. ಈ ಘಟನೆ ಮುಂಬೈವಾಸಿಗಳನ್ನು ಬೆಚ್ಚಿಬೀಳಿಸಿದೆ ಮತ್ತು ಶ್ರೀಮಂತ ಜನಸಮೂಹವನ್ನು ತಲ್ಲಣಗೊಳಿಸಿದೆ. ಶನಿವಾರ ಮಧ್ಯಾಹ್ನದಿಂದ ಆರಂಭವಾದ ದಾಳಿ ಕೆಲವು ಪ್ರಮುಖರ ಬಂಧನಗಳ ಸಾಧ್ಯತೆಯೊಂದಿಗೆ ಎಫ್ಐಆರ್ ದಾಖಲಿಸುವ ಪ್ರಕ್ರಿಯೆಯು ಕೂಡ ಮುಂದುವರಿಯುತ್ತಿದೆ.
ಕೇವಲ ಎರಡು ವಾರಗಳ ಹಿಂದಷ್ಟೇ ಉದ್ಘಾಟನೆಯಾದ ಎಂಪ್ರೆಸ್ ಹಡಗಿನಲ್ಲಿ ಶನಿವಾರ ಸಂಜೆ ಪ್ರಮುಖ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಎನ್ಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿರುವುದರ ಬಗ್ಗೆ ಸುಳಿವು ದೊರೆತ ಹಿನ್ನೆಲೆಯಲ್ಲಿ ವಲಯ ನಿರ್ದೇಶಕ ಸಮೀರ್ ವಾಂಖೇಡೆ ನೇತೃತ್ವದಲ್ಲಿ ಪ್ರಯಾಣಿಕರ ಸೋಗಿನಲ್ಲಿ ಶನಿವಾರ ರಾತ್ರಿ ಹಡಗಿನ ಮೇಲೆ ದಾಳಿ ನಡೆಸಲಾಯಿತು. ಹಡಗು ಮುಂಬೈ ಕರಾವಳಿ ಪ್ರದೇಶವನ್ನು ಬಿಟ್ಟು ಸಮುದ್ರ ಮಧ್ಯೆ ತೆರಳಿದಾಗ ರೇವ್ ಪಾರ್ಟಿ ಆರಂಭವಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಎನ್ಸಿಬಿ ಅಧಿಕಾರಿಗಳು ಅಲ್ಲಿದ್ದ ಪ್ರಮುಖರನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)
ಐಷಾರಾಮಿ ಹಡಗಿನಲ್ಲಿ ಹೈಟೆಕ್ ಡ್ರಗ್ಸ್ ಪಾರ್ಟಿ: ಬಾಲಿವುಡ್ ಸೂಪರ್ಸ್ಟಾರ್ ಮಗ ಸೇರಿ ಹಲವರ ಬಂಧನ
ನಾನು ಕಲಿತ ಮೊದಲ ಪಾಠ.. ಸಮಂತಾ ಡಿವೋರ್ಸ್ ಬೆನ್ನಲ್ಲೇ ಮಾಜಿ ಲವರ್ ಸಿದ್ಧಾರ್ಥ್ ಟ್ವೀಟ್ ವೈರಲ್
ನಾಗಸಮಂತಾ ಬೇರೆಯಾಗಲು ವಿಚ್ಛೇದನ ತಜ್ಞ ಬಾಲಿವುಡ್ ಸೂಪರ್ಸ್ಟಾರ್ ಕಾರಣ ಅಂದ್ರು ಕಂಗನಾ..!
ನಟಿ ಸೌಜನ್ಯ ಸಾವು ಪ್ರಕರಣ: ಇದ್ದಕ್ಕಿದಂತೆ ವರಸೆ ಬದಲಿಸಿದ ಬಾಯ್ಫ್ರೆಂಡ್ ಮೇಲೆ ಪೊಲೀಸರ ಗುಮಾನಿ