More

    ಐಷಾರಾಮಿ ಹಡಗಿನಲ್ಲಿ ಹೈಟೆಕ್​ ಡ್ರಗ್ಸ್​ ಪಾರ್ಟಿ ಪ್ರಕರಣ: ಶಾರುಖ್​ ಪುತ್ರನ ಬಂಧನ ಸಾಧ್ಯತೆ..!

    ಮುಂಬೈ: ವಾಣಿಜ್ಯ ನಗರಿ ಮುಂಬೈನ ಐಷಾರಾಮಿ ಕಾರ್ಡಿಲಿಯಾ ಕ್ರೂಸ್​ ಎಂಪ್ರೆಸ್​ ಹಡಗಿನ ಒಳಗೆ ನಡೆಯುತ್ತಿದ್ದ ರೇವ್​ ಪಾರ್ಟಿಯ ಮೇಲೆ ನಾರ್ಕೋಟಿಕ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ತಂಡ ದಾಳಿ ನಡೆಸಿ ಕೊಕೇನ್​, ಹಶೀಶ್​ ಮತ್ತು ಎಂಡಿಎಂಎ ಸೇರಿದಂತೆ ಅನೇಕ ಅಕ್ರಮ ಡ್ರಗ್ಸ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಾಲಿವುಡ್​ ನಟ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಸೇರಿದಂತೆ ಒಟ್ಟು 8 ಮಂದಿಯನ್ನು ಎನ್​ಸಿಬಿ ವಶಕ್ಕೆ ಪಡೆದುಕೊಂಡಿದ್ದಾರೆ.

    ಕೆಲವು ಉನ್ನತ ಮೂಲಗಳ ಪ್ರಕಾರ ಡ್ರಗ್ಸ್​ ಕೇಸ್​ನಲ್ಲಿ ಶಾರುಖ್​ ಪುತ್ರ ಆರ್ಯನ್​ ಖಾನ್​ರನ್ನು ಎನ್​ಸಿಬಿ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಎನ್​ಸಿಬಿ ಮಹಾನಿರ್ದೇಶಕ ಎಸ್​.ಎನ್​. ಪ್ರಧಾನ್​, ಶನಿವಾರ ನಡೆದ ದಾಳಿಯಲ್ಲಿ 8 ಮಂದಿಯನ್ನು ಬಂಧಿಸಿದ್ದೇವೆ. 8ರಲ್ಲಿ ಮೂವರು ದೆಹಲಿ ಮೂಲದವರು. ಎಲ್ಲ ಆರೋಪಿಗಳನ್ನು ಸದ್ಯ ವಿಚಾರಣೆಗೆ ಒಳಪಡಿಸಿದ್ದು, ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

    ಬಂಧಿತರನ್ನು ಶಾರುಖ್​​ ಪುತ್ರ ಆರ್ಯನ್​ ಖಾನ್​, ಅರ್ಬಾಜ್​ ಮರ್ಚೆಂಟ್​, ಮುನ್​ಮುನ್​ ಧಮೆಚಾ, ಸುಪುರ್​ ಸಾರಿಕ್​, ಇಸ್ಮಿತ್​ ಸಿಂಗ್​, ಮೋಹಕ್​ ಜಸ್ವಾಲ್​, ವಿಕ್ರಾಂತ್​ ಛೋಕರ್​ ಮತ್ತು ಗೋಮಿತ್​ ಚೋಪ್ರಾ ಎಂದು ಗುರುತಿಸಲಾಗಿದೆ. ಇವರಲ್ಲಿ ಮೋಹಕ್​, ನುಪುರ್​ ಮತ್ತು ಗೋಮಿತ್​ ದೆಹಲಿ ಮೂಲದವರು. ಮೋಹಕ್​ ಮತ್ತು ನುಪುರ್​ ಇಬ್ಬರು ಫ್ಯಾಶನ್​ ಡಿಸೈನರ್ಸ್​. ಇನ್ನೊಬ್ಬ ಗೋಮಿತ್​ ಕೇಶ ವಿನ್ಯಾಸಗಾರ ಎಂದು ತಿಳಿದುಬಂದಿದೆ.

    ಇದೇ ಮೊದಲ ಬಾರಿಗೆ ಹಡಗಿನ ಮೇಲೆ ಈ ರೀತಿಯ ದಾಳಿ ನಡೆದಿದೆ. ಹಡಗಿನಲ್ಲಿ ಡ್ರಗ್ಸ್​ ಪಾರ್ಟಿ ನಡೆಯುತ್ತದೆ ಎಂಬ ಸುಳಿವು ದೊರೆತಿದ್ದರಿಂದ ಎನ್​ಸಿಬಿ ಅಧಿಕಾರಿಗಳು ಶನಿವಾರ ಪ್ರಯಾಣಿಕರ ವೇಷದಲ್ಲಿ ಹೋಗಿ ರೇವ್​ ಪಾರ್ಟಿಯ ಮೇಲೆ ದಾಳಿ ಮಾಡಿದ್ದಾರೆ. ಈ ಘಟನೆ ಮುಂಬೈವಾಸಿಗಳನ್ನು ಬೆಚ್ಚಿಬೀಳಿಸಿದೆ ಮತ್ತು ಶ್ರೀಮಂತ ಜನಸಮೂಹವನ್ನು ತಲ್ಲಣಗೊಳಿಸಿದೆ. ಶನಿವಾರ ಮಧ್ಯಾಹ್ನದಿಂದ ಆರಂಭವಾದ ದಾಳಿ ಕೆಲವು ಪ್ರಮುಖರ ಬಂಧನಗಳ ಸಾಧ್ಯತೆಯೊಂದಿಗೆ ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆಯು ಕೂಡ ಮುಂದುವರಿಯುತ್ತಿದೆ.

    ಕೇವಲ ಎರಡು ವಾರಗಳ ಹಿಂದಷ್ಟೇ ಉದ್ಘಾಟನೆಯಾದ ಎಂಪ್ರೆಸ್​ ಹಡಗಿನಲ್ಲಿ ಶನಿವಾರ ಸಂಜೆ ಪ್ರಮುಖ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಎನ್​ಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹಡಗಿನಲ್ಲಿ ಡ್ರಗ್ಸ್​ ಪಾರ್ಟಿ ನಡೆಯುತ್ತಿರುವುದರ ಬಗ್ಗೆ ಸುಳಿವು ದೊರೆತ ಹಿನ್ನೆಲೆಯಲ್ಲಿ ವಲಯ ನಿರ್ದೇಶಕ ಸಮೀರ್​​ ವಾಂಖೇಡೆ ನೇತೃತ್ವದಲ್ಲಿ ಪ್ರಯಾಣಿಕರ ಸೋಗಿನಲ್ಲಿ ಶನಿವಾರ ರಾತ್ರಿ ಹಡಗಿನ ಮೇಲೆ ದಾಳಿ ನಡೆಸಲಾಯಿತು. ಹಡಗು ಮುಂಬೈ ಕರಾವಳಿ ಪ್ರದೇಶವನ್ನು ಬಿಟ್ಟು ಸಮುದ್ರ ಮಧ್ಯೆ ತೆರಳಿದಾಗ ರೇವ್​ ಪಾರ್ಟಿ ಆರಂಭವಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಎನ್​ಸಿಬಿ ಅಧಿಕಾರಿಗಳು ಅಲ್ಲಿದ್ದ ಪ್ರಮುಖರನ್ನು ಬಂಧಿಸಿದ್ದಾರೆ. (ಏಜೆನ್ಸೀಸ್​)

    ಐಷಾರಾಮಿ ಹಡಗಿನಲ್ಲಿ ಹೈಟೆಕ್​ ಡ್ರಗ್ಸ್​ ಪಾರ್ಟಿ: ಬಾಲಿವುಡ್​ ಸೂಪರ್​​ಸ್ಟಾರ್​​ ಮಗ ಸೇರಿ ಹಲವರ ಬಂಧನ

    ನಾನು ಕಲಿತ ಮೊದಲ ಪಾಠ.. ಸಮಂತಾ ಡಿವೋರ್ಸ್ ಬೆನ್ನಲ್ಲೇ ಮಾಜಿ ಲವರ್​ ಸಿದ್ಧಾರ್ಥ್​ ಟ್ವೀಟ್​ ವೈರಲ್​

    ನಾಗಸಮಂತಾ ಬೇರೆಯಾಗಲು ವಿಚ್ಛೇದನ ತಜ್ಞ ಬಾಲಿವುಡ್​ ಸೂಪರ್​ಸ್ಟಾರ್​ ಕಾರಣ ಅಂದ್ರು ಕಂಗನಾ..!​

    ನಟಿ ಸೌಜನ್ಯ ಸಾವು ಪ್ರಕರಣ: ಇದ್ದಕ್ಕಿದಂತೆ ವರಸೆ ಬದಲಿಸಿದ ಬಾಯ್​ಫ್ರೆಂಡ್​ ಮೇಲೆ ಪೊಲೀಸರ ಗುಮಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts