More

    ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಹಲ್ಲೆ-ಅತ್ಯಾಚಾರ ಯತ್ನ ಕೇಸ್​: ತಾನೇ ಹೆಣೆದ ಬಲೆಗೆ ಸಿಲುಕಿಕೊಂಡ ಯುವತಿ?

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿರುವ ಹಲ್ಲೆ ಹಾಗೂ ಅತ್ಯಾಚಾರ ಯತ್ನಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ ಬೆನ್ನಲ್ಲೇ ಸಂತ್ರಸ್ತ ಯುವತಿ ಉಲ್ಟಾ ಹೊಡೆದಿದ್ದಾಳೆ. ಮೊದಲು ಆರೋಪಿ ಯಾರು ಅಂತಾನೇ ಗೊತ್ತಿಲ್ಲ ಅಂದಿದ್ದ ಯುವತಿ ಇದೀಗ ತನಗೆ ಪರಿಚಯ ಇರುವುದಾಗಿ ಹೇಳಿದ್ದಾಳೆ.

    ಮೈಸೂರಿನ ಆರ್.ಎಸ್​.ನಾಯ್ಡು ನಗರದ ಪ್ರಮುಖ ರಸ್ತೆಯಲ್ಲಿರುವ ಸ್ಟಡಿಹೌಸ್​ನಲ್ಲಿ ನಿನ್ನೆ ಮಧ್ಯಾಹ್ನ ಘಟನೆ ನಡೆದಿತ್ತು. ಆಂಧ್ರಪ್ರದೇಶ ಮೂಲದ ಏಳು ಮಂದಿ ಸ್ಟಡಿಹೌಸ್​ನಲ್ಲಿದ್ದರು. ಅವರೆಲ್ಲ ತರಗತಿಗೆ ತೆರಳುತ್ತಿದ್ದಂತೆ ಆರೋಪಿ ಒಬ್ಬಂಟಿ ವಿದ್ಯಾರ್ಥಿನಿಯ ಮೈಮೇಲೆರಗಿದ್ದ. ಪ್ರಕರಣ ದಾಖಲಾಗಿದ್ದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು. ಇದೀಗ ಯುವತಿಯ ಹೇಳಿಕೆ ತೀವ್ರ ಕುತೂಹಲ ಕೆರಳಿಸಿದೆ.

    ಸಂತ್ರಸ್ತೆ ತಾನೇ ಎಣೆದ ಬಲೆಯಲ್ಲಿ ಸಿಲುಕಿಕೊಂಡಳಾ ಎಂಬ ಅನುಮಾನ ಮೂಡುತ್ತಿದೆ. ಸದ್ಯ ಸಂತ್ರಸ್ತೆ ನೀಡಿದ ಹೇಳಿಕೆಗಳಿಂದಲೇ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಮೊದಲು ಆತ ಯಾರೆಂದು ಗೊತ್ತಿಲ್ಲ ಅಂತಾ ಸಂತ್ರಸ್ತೆ ಹೇಳಿದ್ದಳು. ಆದರೆ, ಸಂತ್ರಸ್ತೆ- ಆರೋಪಿ ಪರಸ್ಪರ ಪರಿಚಯಸ್ಥರು ಎಂಬ ವಿಚಾರ ಬೆಳಕಿಗೆ ಬಂದಿದೆ.

    ಅಪರಿಚಿತ ವ್ಯಕ್ತಿ ಬಂದು ಊಟ ಕೇಳಿದ‌. ಅನ್ನ ಕೊಡಲು ಹೋದಾಗ ಕಲಸಿ ಕೊಡುವಂತೆ ಹೇಳಿದ. ಸರಿ ಅಂತಾ ಕಲಸಿಕೊಂಡು ಬರಲು ಒಳಗೆ ಹೋದಾಗ ಆತ ಹಿಂದಿನಿಂದ ಬಂದು ಅತ್ಯಾಚಾರಕ್ಕೆ ಯತ್ನಿಸಿ, ಹಲ್ಲೆ ಮಾಡಿ ಓಡಿ ಹೋದ ಅಂತ ಯುವತಿ ಹೇಳಿಕೆ ನೀಡಿದ್ದಳು. ಒಮ್ಮೆ ಅತ್ಯಾಚಾರ ಆಗಿದೆ ಎಂದಿದ್ದಳು. ಇನ್ನೊಮ್ಮೆ ಅತ್ಯಾಚಾರಕ್ಕೆ ಯತ್ನ ಎಂದು ಹೇಳಿ ಗೊಂದಲ ಸೃಷ್ಟಿಸಿದ್ದಳು.

    ಇದೀಗ ಆರೋಪಿ ಬಂಧನದ ಬೆನ್ನಲ್ಲೇ ಯುವತಿ ಉಲ್ಟಾ ಹೊಡೆದಿದ್ದಾಳೆ. ಆರೋಪಿ ನನಗೆ ಪರಿಚಯದವನು ಅಂತ ಹೇಳಿಕೆ ನೀಡಿದ್ದಾಳೆ. ಇಬ್ಬರ ನಡುವೆ ಪರಸ್ಪರ ಮೊಬೈಲ್ ಸಂಪರ್ಕ ಇರುವುದು ಗೊತ್ತಾಗಿದೆ. ಆರೋಪಿ ಬರುವ ಮುನ್ನ ಹಾಗೂ ಬಂದು ಹೋದ ನಂತರ ಮೆಸೇಜ್ ಮಾಡಿರುವ ಬಗ್ಗೆ ಪೊಲೀಸರಿಗೆ ಸಾಕ್ಷ್ಯ ಪತ್ತೆಯಾಗಿದೆ. ಸದ್ಯ ಸಂತ್ರಸ್ತೆ ಹೇಳಿಕೆ ಪಡೆದು ರಾತ್ರಿಯೇ ಪ್ರಕರಣಕ್ಕೆ ಪೊಲೀಸರು ತಿಲಾಂಜಲಿ ಹಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಅಪ್ರಾಪ್ತ ಬಾಲಕನನ್ನು ನಂಬಿಸಿ ಬಾಡಿಗೆ ಮನೆಗೆ ಕರೆದೊಯ್ದ 19ರ ಯುವತಿ: ಕೆಲವೇ ದಿನಗಳಲ್ಲಿ ಕಾದಿತ್ತು ಶಾಕ್!​​

    ಪರಿಚಿತನಿಂದಲೇ ವಿದ್ಯಾರ್ಥಿನಿ ಮೇಲೆ ಹಲ್ಲೆ-ಅತ್ಯಾಚಾರ ಯತ್ನ; ಮೈಸೂರಿನಲ್ಲಿ ನಡೆದ ಪ್ರಕರಣದ ಆರೋಪಿಯ ಬಂಧನ

    ಪಕ್ಕದಲ್ಲಿ ಖಾಲಿ ಇದೆ ಯಾರಾದ್ರೂ ಬರ್ತೀರಾ? ನೆಟ್ಟಿಗರಿಗೆ ಮಾಜಿ ನೀಲಿ ತಾರೆಯ ಬಿಗ್​ ಆಫರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts