ಅಹಮದಾಬಾದ್: ಮಹಾಮಾರಿ ಕರೊನಾ ವೈರಸ್ ಎರಡನೇ ಅಲೆಯಲ್ಲಿ ಯುವ ಸಮೂಹವೇ ಹೆಚ್ಚು ಮೃತ್ಯು ಕೂಪಕ್ಕೆ ಬಲಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ದುರ್ಬಲರು ಮಾತ್ರವಲ್ಲದೆ ಬಲಶಾಲಿಗಳು ಸಹ ಕೋವಿಡ್ಗೆ ಬಲಿಯಾಗುತ್ತಿದ್ದಾರೆ.
ಅಂತಾರಾಷ್ಟ್ರೀಯ ಬಾಡಿಬಿಲ್ಡರ್ ಮತ್ತು ಮಿಸ್ಟರ್ ಇಂಡಿಯಾ ಜಗದೀಶ್ ಲ್ಯಾಡ್ ಅವರು ಕರೊನಾಗೆ ಬಲಿಯಾಗಿದ್ದಾರೆ. ಶುಕ್ರವಾರ ಗುಜರಾತ್ನ ವಡೋದರದಲ್ಲಿ ಮೃತಪಟ್ಟ ಜಗದೀಶ್ ಅವರಿಗೆ ಕೇವಲ 34 ವರ್ಷ ವಯಸ್ಸಾಗಿತ್ತು.
ಕರೊನಾ ಸೋಂಕು ದೃಢಪಟ್ಟ ಬಳಿಕ ವಡೋದರಾ ಆಸ್ಪತ್ರೆಗೆ ದಾಖಲಾಗಿದ್ದ ಜಗದೀಶ್ ಅವರಿಗೆ ಆಕ್ಸಿಕನ್ ಸಪೋರ್ಟ್ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಜಗದೀಶ್ ಕೊನೆಯುಸಿರೆಳೆದಿದ್ದಾರೆ.
ಲ್ಯಾಡ್ ಅವರು ಅನೇಕ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ತವರು ರಾಜ್ಯ ಮಹಾರಾಷ್ಟ್ರ ಮತ್ತು ಭಾರತವನ್ನು ಪ್ರತಿನಿಧಿಸಿದ್ದಾರೆ. (ಏಜೆನ್ಸೀಸ್)
ಕರೊನಾ ಸಂಕಷ್ಟದಲ್ಲಿ ತಲೆಎತ್ತಿದೆ ಮೆಡಿಕಲ್ ಮಾಫಿಯಾ: ಬೆಚ್ಚಿಬೀಳಿಸುವ ವರದಿ ಇದು..!
ಗುರು ತೇಜ್ ಬಹದ್ದೂರ್ 400ನೇ ಜಯಂತಿ: ಗುರುದ್ವಾರ ಸಿಸ್ ಗಂಜ್ ಸಾಹಿಬ್ಗೆ ಪ್ರಧಾನಿ ಮೋದಿ ಭೇಟಿ