ಕೊಲ್ಲಂ: ಡ್ರೈವಿಂಗ್ ಟೆಸ್ಟ್ ವೇಳೆ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಮೋಟಾರು ವೆಹಿಕಲ್ ಇನ್ಸ್ಪೆಕ್ಟರ್ ಒಬ್ಬರನ್ನು ಕೇರಳ ಪೊಲೀಸರು ಬಂಧಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.
ಬಂಧಿತ ಅಧಿಕಾರಿಯನ್ನು ಎ. ಎಸ್. ವಿನೋದ್ ಎಂದು ಗುರುತಿಸಲಾಗಿದೆ. ಕುಂದಾರಾ ಮೂಲದ ವಿನೋದ್, ಪಠಾಣಪುರಂನ ಆರ್ಟಿಒ ಕಚೇರಿಯ ಕೆಲಸ ನಿರ್ವಹಿಸುತ್ತಿದ್ದರು. ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬಳಿಕ ಒಂದು ವಾರಗಳ ಕಾಲ ತಲೆಮರೆಸಿಕೊಂಡಿದ್ದ ವಿನೋದ್, ಇದೀಗ ಪುನಲೂರ್ ಡಿವೈಎಸ್ಪಿ ಮುಂದೆ ಶರಣಾಗಿದ್ದಾರೆ.
ಈ ಘಟನೆ ಜುಲೈ 19ರಂದು ನಡೆಯಿತು. ಡ್ರೈವಿಂಗ್ ಟೆಸ್ಟ್ ಸಮಯದಲ್ಲಿ ನಿರ್ಜನ ಪ್ರದೇಶದಲ್ಲಿ ಕಾರಿನ ಒಳಗಡೆಯೇ ಮಹಿಳೆಯ ಮೇಲೆ ವಿನೋದ್ ಅನುಚಿತವಾಗಿ ವರ್ತಿಸಿದ್ದರು. ಘಟನೆ ಸಂಬಂಧ ಪಠಾಣಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆ ಬೆನ್ನಲ್ಲೇ ವಿನೋದ್ರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. (ಏಜೆನ್ಸೀಸ್)
ಯಾರಾಗಲಿದ್ದಾರೆ ಬಿಗ್ಬಾಸ್ ಒಟಿಟಿ ಸೀಸನ್ ವಿನ್ನರ್? ನೆಟ್ಟಿಗರ ಈ ಊಹೆ ನಿಜವಾಗುತ್ತಾ?
ಜನಾಕ್ರೋಶಕ್ಕೆ ಹೆದರಿ ದೇಶ ಬಿಟ್ಟು ಪರಾರಿಯಾಗಿದ್ದ ಲಂಕಾದ ಮಾಜಿ ಅಧ್ಯಕ್ಷ ತವರಿಗೆ ವಾಪಸ್!
ಕೆಜಿಎಫ್ನಿಂದ ಪ್ರೇರಿತಗೊಂಡು ನಾಲ್ವರನ್ನ ಕೊಂದ ಯುವಕ! ನೆಕ್ಸ್ಟ್ ಟಾರ್ಗೆಟ್ ಪೊಲೀಸರನ್ನ ಕೊಲ್ಲುವುದೇ ಆಗಿತ್ತು…